ಬ್ರೇಕಿಂಗ್ ನ್ಯೂಸ್
18-12-23 03:12 pm HK News Desk ಕರ್ನಾಟಕ
ಕುಶಾಲನಗರ, ಡಿ.18: ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ 60 ವರ್ಷದ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೊಡಗಿನ ಕುಶಾಲ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ವಿಚಾರವಾಗಿ ಇಲಾಖೆಯಿಂದ ಇಂದು ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಕೊರೊನಾ ರೂಪಾಂತರಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ನಾನು ಒಂದು ಸುತ್ತಿನ ಸಭೆಯನ್ನ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ್ದೇನೆ. ಅಲ್ಲದೆ, ಡಾ. ರವಿ ಅವರ ನೇತೃತ್ವದ ತಾಂತ್ರಿಕ ಸಲಹಾ ಸಮಿತಿ ಕೂಡ ನಿನ್ನೆಯೇ ಸಭೆ ನಡೆಸಿ ಕೆಲವು ಸಲಹೆಗಳನ್ನ ನೀಡಿದ್ದಾರೆ. 60 ವರ್ಷ ಮೇಲ್ಪಟ್ಟವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿದವರು, ಉಸಿರಾಟದ ಸಮಸ್ಯೆ ಇರುವವರಿಗೆ ಮಾಸ್ಕ್ ಕಡ್ಡಾಯಗೊಳಿಸುವಂತೆ ಸಮಿತಿಯವರು ಸಲಹೆ ನೀಡಿದ್ದಾರೆ. ಸಮಿತಿಯ ಸಲಹೆಗಳನ್ನ ಆಧರಿಸಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ.
ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸನ್ನದ್ದ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಶೀತ, ಜ್ವರ ಕೆಮ್ಮು ಇರುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Health Minister Dinesh Gundu Rao has said that masks have been made mandatory for those above 60 years of age in the wake of the detection of covid-19 variant in the state.
19-05-26 11:34 pm
HK News Desk
ಮೋರ್ಬಿ ಘಟನೆ ಗುಜರಾತ್ ಮಾದರಿಯನ್ನು ಟೊಳ್ಳಾಗಿಸಿದೆ,...
19-05-26 09:09 pm
ದಕ್ಷಿಣ ಭಾರತದಲ್ಲೇ ಮೊದಲ ಪ್ರಯೋಗ ; ಚಿಕ್ಕಮಗಳೂರಿನಲ್...
17-05-26 08:55 pm
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
20-05-26 10:33 am
HK News Staffer
ಆನೆಗಳ ಕಾದಾಟ; ದುಬಾರೆ ಕ್ಯಾಂಪ್ನಲ್ಲಿ ಗಾಯಗೊಂಡಿದ್ದ...
19-05-26 04:27 pm
ಮತ್ತೆ ಬೆಲೆ ಏರಿಕೆ ಶಾಕ್! ಒಂದೇ ವಾರದಲ್ಲಿ 2ನೇ ಬಾರಿ...
19-05-26 01:06 pm
ಕಾಂಗೋ, ಉಗಾಂಡದಲ್ಲಿ ಎಬೋಲಾ ಸೋಂಕು ತೀವ್ರ ; ಮಾರಣಾಂತ...
18-05-26 02:18 pm
ಭೋಜಶಾಲಾ ವಿವಾದಿತ ಮಸೀದಿ ಕಟ್ಟಡವಲ್ಲ, ವಾಗ್ದೇವಿ ಸರಸ...
16-05-26 10:13 pm
19-05-26 10:47 pm
HK News Desk
ಬಾವಿಯಲ್ಲಿ ನೀರಲ್ಲ , ಡೀಸೆಲ್ ! ಮಂಗಳೂರಿನಲ್ಲಿ ಆತಂಕ...
19-05-26 05:57 pm
ಒಂದು ರೂ.ಗೆ ಒಂದು ಶರ್ಟ್ ! ಆಫರ್ ಕೇಳಿ ಮುಗಿಬಿದ್ದ ಜ...
19-05-26 10:44 am
ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ; ಕೇಂ...
18-05-26 10:47 pm
ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಇಲ್ಲ , ಶಿಕ್ಷಕರ ನ...
16-05-26 09:19 pm
20-05-26 03:08 pm
HK News Staffer
ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ,...
20-05-26 09:53 am
ತಾಯಿ ಬೈದಿದ್ದಕ್ಕೆ ಅಪ್ಪ, ಅಮ್ಮ ಸಾರಿ, ನಿಮ್ಮೆದುರು...
19-05-26 05:55 pm
ಕಾಶ್ಮೀರಕ್ಕೆ ಕೆಲಸಕ್ಕೆಂದು ಕರೆದೊಯ್ದು ಉತ್ತರ ಪ್ರದೇ...
19-05-26 05:23 pm
‘ದಿನಕ್ಕೆ ₹1 ಲಕ್ಷ ರೂ. ಗಳಿಸಿ’ ; ಮೋದಿ, ಪ್ರಿಯಾಂಕ...
19-05-26 04:23 pm