ಬ್ರೇಕಿಂಗ್ ನ್ಯೂಸ್
18-12-23 07:44 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.18: ಆರು ಮಂದಿ ಮಹಿಳೆಯರು ರಾಮನಗರ ಬಳಿಯ ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಕೊನೆಗೆ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.
ಮಹಿಳೆಯರು ರಾಮನಗರ ಜಿಲ್ಲೆಯ ಬಸವನಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾರು ನಿಲ್ಲಿಸಿ ಅಲ್ಲಿಂದ ಹಂಡಿ ಗುಂಡಿ ಬೆಟ್ಟದ ಕಾಡಿನಲ್ಲಿ ಟ್ರಕ್ಕಿಂಗ್ ತೆರಳಿದ್ದರು. ಸಂಜೆ ವೇಳೆಗೆ ಬೆಟ್ಟದಿಂದ ಇಳಿದು ಬರುತ್ತಿದ್ದಾಗ ರಸ್ತೆ ಸಿಗಲಿಲ್ಲ. ರಾತ್ರಿಯಾದರೂ ಅತ್ತಿತ್ತ ಹುಡುಕಾಡಿ ರಸ್ತೆ ಸಿಗದೇ ಇದ್ದುದರಿಂದ 7.15ರ ಸುಮಾರಿಗೆ 112 ನಂಬರಿಗೆ ಫೋನ್ ಮಾಡಿದ್ದರು.
ಕೂಡಲೇ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಗಸ್ತಿನಲ್ಲಿದ್ದ ರಾಜೇಶ್ ಮತ್ತು ರಮೇಶ್ ಆ ಭಾಗದಲ್ಲೇ ಇದ್ದುದರಿಂದ ಅವರಿಗೆ ಸಂದೇಶ ಹೋಗುತ್ತದೆ. 7.30ರ ಸುಮಾರಿಗೆ ಮಹಿಳೆಯರನ್ನು ಫೋನಲ್ಲಿ ಸಂಪರ್ಕಿಸಿದ ಪೊಲೀಸರು, ನೀವು ಯಾವುದೇ ಆತಂಕ ಪಡುವುದು ಬೇಡ. ನಾವು ಹುಡುಕಿ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರ ವಾಹನವನ್ನೂ ಬೆಟ್ಟಕ್ಕೆ ಒಯ್ಯಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾರೆ.
ರಾತ್ರಿ 8.30ರ ವೇಳೆಗೆ ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದು ಪೊಲೀಸರು ಟಾರ್ಚ್ ಲೈಟ್ ಹಿಡಿದು ಕಾಡಿನಲ್ಲಿ ಹುಡುಕಾಡಿದ್ದಾರೆ. ಎರಡು ಕಿಮೀ ಉದ್ದಕ್ಕೆ ಕಾಡಿನಲ್ಲಿ ನಡೆದ ಬಳಿಕ ಮಹಿಳೆಯರು ಸಿಕ್ಕಿದ್ದು, ಮರಳಿ ರಸ್ತೆಗೆ ತಲುಪಿಸಿದ್ದಾರೆ. ಹಂಡಿ ಗುಂಡಿ ಬೆಟ್ಟದಲ್ಲಿ ಕರಡಿ, ಚಿರತೆಗಳಿದ್ದು, ಅದೃಷ್ಟವಶಾತ್ ಮಹಿಳೆಯರಿಗೆ ತೊಂದರೆ ಮಾಡಿಲ್ಲ. 112 ಗೆ ಕರೆ ಮಾಡಲು ಫೋನ್ ನೆಟ್ವರ್ಕ್ ಸಿಕ್ಕಿದ್ದರಿಂದ ಬಚಾವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಬನ್ನೇರುಘಟ್ಟ ಆಸುಪಾಸಿನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.
Six city women lost their way during a trekking expedition to a hill in Ramanagara district Saturday and were rescued by 112 staff.The women dialled 112 to reach the Emergency Response Support System (ERSS) after losing their way. BR Ravikanthe Gowda, IGP (Central range) confirmed the rescue.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 07:15 pm
Mangalore Correspondent
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm