Kunigal News, Suicide: ಇನ್ನೂ ಓದಬೇಕೆಂದು ಬಯಸಿದ್ದ ವಿದ್ಯಾರ್ಥಿನಿ ; ಮದುವೆ ಮಾಡಿಸಿಬಿಟ್ಟ ಪೋಷಕರು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 19 ವರ್ಷದ ಮಗಳು 

21-12-23 01:01 pm       HK News Desk   ಕರ್ನಾಟಕ

ಇನ್ನೂ ಓದಬೇಕೆಂದು ಬಯಸಿದ್ದ ವಿದ್ಯಾರ್ಥಿನಿಗೆ ಮದುವೆ ಮಾಡಿಸಿದ್ದಕ್ಕೆ ಮನನೊಂದು ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ಡಿಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಕುಣಿಗಲ್, ಡಿ.21: ಇನ್ನೂ ಓದಬೇಕೆಂದು ಬಯಸಿದ್ದ ವಿದ್ಯಾರ್ಥಿನಿಗೆ ಮದುವೆ ಮಾಡಿಸಿದ್ದಕ್ಕೆ ಮನನೊಂದು ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ಡಿಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ತಾಲೂಕಿನ ಎಡಿಯೂರು ಹೋಬಳಿ ಸಿಡಿಲುಹಟ್ಟಿ ಗ್ರಾಮದ ನಿವಾಸಿ ಜಿ.ಟಿ.ರಕ್ಷಿತಾ (19) ಮೃತ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ

ರಕ್ಷಿತಾ ಕುಣಿಗಲ್ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ನ.31 ರಂದು ರಕ್ಷಿತಾ ತಾಯಿ ತನ್ನ ತಮ್ಮ ಸಂತೋಷನೊಂದಿಗೆ ರಕ್ಷಿತಾಳನ್ನು ಮದುವೆ ಮಾಡಿದರು.

ಆದರೆ ರಕ್ಷಿತಾ, ನಾನು ಇನ್ನೂ ಓದಬೇಕಾಗಿತ್ತು. ನನಗೆ ಮದುವೆ ಮಾಡಿಸಿದ್ದೀರ ಎಂದು ತಿಳಿಸುತ್ತಿದ್ದಳು ಎನ್ನಲಾಗಿದ್ದು, ಮತ್ತೊಂದು ಮಾಹಿತಿ ಪ್ರಕಾರ ರಕ್ಷಿತಾ ಆನಾರೋಗ್ಯದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಮಂಗಳವಾರ ರಕ್ಷಿತಾ ಮನೆಯಿಂದ ಹೊರ ಹೋದವಳು ಮತ್ತೆ ಮನೆಗೆ ವಾಪಸ್ಸಾಗಲಿಲ್ಲ. ಪೋಷಕರು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಬುಧವಾರ ಯಡ್ಡಿಗೆರೆ ಕೆರೆಯಲ್ಲಿ ರಕ್ಷಿತಾ ಶವ ಪತ್ತೆಯಾಗಿದೆ.

19 year old girl dies by jumping to lake for getting her married while studying at Kunigal.