ಬ್ರೇಕಿಂಗ್ ನ್ಯೂಸ್
02-01-24 11:00 pm Bangalore Correspondent ಕರ್ನಾಟಕ
ಬೆಂಗಳೂರು, ಜ 02: ಬೆಂಗಳೂರಿನ ಕಮರ್ಷಿಯಲ್ ಮಳಿಗೆಗಳು, ಅಂಗಡಿಗಳು ನಾಮಫಲಕದಲ್ಲಿ ಕನ್ನಡವವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 27ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆ ಪ್ರಾಯೋಜಿತ ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾದ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಇನ್ನೂ ಕೂಡಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ.
ಡಿಸೆಂಬರ್ 27ರಂದು ಬಂಧನಕ್ಕೆ ಒಳಗಾದ ಅವರು ಜಾಮೀನು ಪಡೆದು ಹೊರಬಹುದು ಎಂಬ ನಿರೀಕ್ಷೆ ಇತ್ತು. ಕೆಲವು ನಾಯಕರಿಗೆ ಜಾಮೀನು ಕೂಡಾ ಸಿಕ್ಕಿದೆ. ಆದರೆ, ನಾರಾಯಣ ಗೌಡರಿಗೆ ಜೈಲು ಸೇರಿ ಏಳು ದಿನವಾದರೂ ಜಾಮೀನು ಸಿಕ್ಕಿಲ್ಲ. ಇದೀಗ ಜನವರಿ ಎರಡರಂದು (ಮಂಗಳವಾರ) ಅವರ ಜಾಮೀನು ಅರ್ಜಿ ವಿಚಾರಣೆ ನಡೆದರೂ ಕೋರ್ಟ್ ತನ್ನ ತೀರ್ಪನ್ನು ಜನವರಿ ಆರಕ್ಕೆ ಕಾಯ್ದಿರಿಸಿದೆ. ಹೀಗಾಗಿ ಅವರು ಇನ್ನೂ ನಾಲ್ಕು ದಿನ ಜೈಲಿನಲ್ಲೇ ಕಾಯಬೇಕಾಗಿದೆ.
ದೇವನಹಳ್ಳಿಯ 5ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಾರಾಯಣ ಗೌಡ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅವರ ಜಾಮೀನು ಅರ್ಜಿಗೆ ಸಂಬಂಧಿಸಿ ಸರ್ಕಾರಿ ಅಭಿಯೋಜಕರ ಅಭಿಪ್ರಾಯವನ್ನು ಕೋರ್ಟ್ ಕೇಳಿತ್ತು. ಸರ್ಕಾರಿ ಅಭಿಯೋಜಕರು ಮಂಗಳವಾರ ತಮ್ಮ ಅಭಿಪ್ರಾಯವನ್ನು ಕೋರ್ಟ್ ಮುಂದೆ ದಾಖಲಿಸಿದರಾದರೂ ಕೋರ್ಟ್ ತನ್ನ ತೀರ್ಪನ್ನು ಜನವರಿ ಆರಕ್ಕೆ ಕಾದಿರಿಸಿದೆ. ಹೀಗಾಗಿ ಮಂಗಳವಾರವೇ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಮಂಗಳವಾರ ಅಭಿಯೋಕರು ಮತ್ತು ನಾರಾಯಣ ಗೌಡರ ಪರ ವಕೀಲರು ತಮ್ಮ ವಾದ ಮಂಡಿಸಿದರು. ಅಂತಿಮವಾಗಿ ಕೋರ್ಟ್ ತೀರ್ಪನ್ನು ಕಾದಿರಿಸಿತು.
ಟಿ.ಎ ನಾರಾಯಣ ಗೌಡರು ಡಿಸೆಂಬರ್ 27ರಂದು ಯಲಹಂಕ ಸಮೀಪ ಸಾದಹಳ್ಳಿ ಟೋಲ್ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದರು. ಸಾದ ಹಳ್ಳಿಯಿಂದ ಮೆರವಣಿಗೆ ಹೊರಡುವುದು ಎಂದು ತೀರ್ಮಾನಿಸಲಾಗಿತ್ತಾದರೂ ಅದಕ್ಕಿಂತ ಮೊದಲೇ ಅವರನ್ನು ಇತರ ಕಾರ್ಯಕರ್ತರು ನಾಯಕರ ಜತೆ ವಶಕ್ಕೆ ಪಡೆಯಲಾಗಿತ್ತು.
ಡಿಸೆಂಬರ್ 27ರ ಮಧ್ಯಾಹ್ನದ ಹೊತ್ತು ವಶಕ್ಕೆ ಪಡೆದ ನಾರಾಯಣ ಗೌಡ ಮತ್ತು ಇತರರನ್ನು ಒಂದು ಕಟ್ಟಡದ ಆವರಣದಲ್ಲಿ ರಾತ್ರಿವರೆಗೂ ಕೂಡಿ ಹಾಕಲಾಗಿತ್ತು. ಸಾಮಾನ್ಯವಾಗಿ ಇಂಥ ಪ್ರತಿಭಟನೆ ಸಂದರ್ಭದಲ್ಲಿ ಹೀಗೆ ವಶಕ್ಕೆ ಪಡೆದು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪೊಲೀಸರು ರಾತ್ರಿ ಒಂದು ಗಂಟೆವರೆಗೂ ಅವರನ್ನು ಬಿಟ್ಟಿರಲಿಲ್ಲ. ಬಳಿಕ ರಾತ್ರೋರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಆಗ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಡಿಸೆಂಬರ್ 28ರಂದು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿತ್ತು.
ನಾರಾಯಣ ಗೌಡರ ಮೇಲೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಆರೋಪವನ್ನು ಹೊರಿಸಲಾಗಿದೆ. ಬೆಂಗಳೂರಿನಲ್ಲಿ ಫ್ರೀಡಂ ಫಾರ್ಕ್ ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದೆ. ಆದರೆ, ಕರವೇ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದಲ್ಲದೆ ಕೆಲವೊಂದು ಕಡೆ ದಾಂಧಲೆ ಎಬ್ಬಿಸಿದ್ದರು.
ಟಿಎ ನಾರಾಯಣಗೌಡರ ವಿರುದ್ದ ಎಂಟಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ಕಾರಣ ಅವರ ವಿಚಾರಣೆಗೆ ಚಾರಣೆಗೆ ತೊಂದರೆಯಾಗುವ ಕಾರಣ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದರು. ಬಂಧಿಸುವ ಸಂಧರ್ಭದಲ್ಲಿ ಕ್ರಮಬದ್ದ ಬಂಧನಕ್ಕೆ ತಕರಾರು ಒಡ್ಡಿದ್ದರು ಎಂಬ ಆರೋಪವನ್ನೂ ಹೊರಿಸಲಾಗಿದೆ.
Karnataka Rakshana Vedike Narayana Gowda bail on hold till 6th Jan over protest in Bangalore. T.A. Narayana Gowda, president, of Karnataka Rakshana Vedike, who led protests against non-Kannada signboards that degenerated into vandalism on December 27, was arrested with 29 of his associates. They were produced before a magistrate on December 28 morning.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
18-06-25 10:57 pm
Udupi Correspondent
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
Mangalore Accident, Jeppinamogaru, Aman Rao,...
18-06-25 10:24 am
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm