ಬ್ರೇಕಿಂಗ್ ನ್ಯೂಸ್
07-01-24 03:08 pm HK News Desk ಕರ್ನಾಟಕ
ಬೆಳಗಾವಿ, ಜ.7: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಅಕ್ಕ, ತಮ್ಮನನ್ನು ಮುಸ್ಲಿಂ ಯವಕರ ಗುಂಪು ನಾಲ್ಕು ಗಂಟೆ ಕಾಲ ಕೋಣೆಯಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದ ಘಟನೆ ಬೆಳಗಾವಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿ ಮುಸ್ಲಿಂ ಹಿಂದು ಯುವಕನ ಜೊತೆಗಿದ್ದಾನೆಂದು ತಿಳಿದು ಯುವಕರು ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ.
ಯುವತಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದರಿಂದ ಮುಸ್ಲಿಂ ಎಂದು ತಿಳಿದುಕೊಂಡಿದ್ದರು. ಯುವಕ ಹಣೆಗೆ ತಿಲಕ ಹಾಕಿದ್ದರಿಂದ ಮುಸ್ಲಿಂ ಯುವತಿಯ ಜೊತೆಗಿದ್ದಾನೆಂದು ಇವರು ಅನ್ಯಕೋಮಿ ಜೋಡಿ ಅನ್ಕೊಂಡಿದ್ದಾರೆ. ತಾವು ಅಕ್ಕ, ತಮ್ಮ ಎಂದು ತಿಳಿಸಿದರೂ ಮುಸ್ಲಿಂ ಯುವಕರ ಗುಂಪು ಮನಬಂದಂತೆ ಧಳಿಸಿದ್ದಾರೆ. ಯುವಕ ಪಕ್ಕೆಲುಬು ಭಾಗಕ್ಕೆ ತೀವ್ರ ಗಾಯಗೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 16 ಜನ ಮುಸ್ಲಿಂ ಯುವಕರ ಗ್ಯಾಂಗ್ ಕೃತ್ಯ ಎಸಗಿದ್ದು ನೈತಿಕ ಪೊಲೀಸಗಿರಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ ಕೋಟೆ ಕರೆ ಆವರಣದಲ್ಲಿರುವ ಕಂಪ್ಯೂಟರ್ ಸೆಂಟರಿಗೆ 24 ವರ್ಷದ ಯುವತಿ ಜೊತೆ 21 ವರ್ಷದ ಸಚೀನ್ ಲಮಾನಿ ಎಂಬ ಯುವಕ ಬಂದಿದ್ದು ಯುವನಿಧಿ ಫಾರ್ಮ್ ತುಂಬಲು ಬಂದಾಗ ಕಂಪ್ಯೂಟರ್ ಸೆಂಟರ್ ಮಾಲಿಕ ಅರ್ಧ ಗಂಟೆ ಬಿಟ್ಟು ಬನ್ನಿ ಎಂದು ಹೇಳಿದ್ದರು. ಬಳಿಕ ಇವರಿಬ್ಬರು ಅಕ್ಕ ತಮ್ಮಾ ಬೆಳಗಾವಿ ಕೋಟೆ ಕೆರೆ ಆವರಣದಲ್ಲಿ ಕುಳಿತಿದ್ದನ್ನು ನೋಡಿದ ಕಿರಾತಕರು ಯುವಕ, ಯುವತಿಯನ್ನು ಅಪಹರಿಸಿ ಮನೆಯೊಂದರಲ್ಲಿ ನಾಲ್ಕು ಗಂಟೆ ವರೆಗೆ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೋಳಗಾದ ಯುವಕ ಮತ್ತು ಯುವತಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕ- ಯುವತಿಯ ತಂದೆ ಮುಸ್ಲಿಂ, ತಾಯಿ ಹಿಂದುವಾಗಿದ್ದು ಇವರ ಬಗ್ಗೆ ತಿಳಿದಿದ್ದರೂ ಯುವಕರ ತಂಡ ಹಲ್ಲೆ ಕೃತ್ಯ ನಡೆಸಿದೆ ಎನ್ನಲಾಗಿದೆ.
ಮುಸ್ಲಿಂ ಯುವಕರ ಪೊಲೀಸ್ ಗಿರಿ ಘಟನೆ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸರು 7 ಜನ ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತರಾಗಿದ್ದಾರೆ. ಮಾರ್ಕೆಟ್ ಠಾಣೆ ಪೊಲೀಸರು 17 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಲಂಬಾಣಿ ಯಜವಕನಾದ್ದರಿಂದ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಸೇರಿ 10 ಕಲಂ ಬಳಸಿ ದೂರು ದಾಖಲಾಗಿದೆ.
A group of youth confined boy and a girl in a room and assaulted them in a case of “moral” policing in Belagavi on Saturday. According to police, the boy and girl - residents of Yamnapur on the city outskirts - had come to register their names for Yuva Nidhi scheme. They could not get the registration completed due to server issues. Both were sitting on a bench on the Fort Lake premises.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm