Mankala Vaidya, Bjp, Ram Mandir; ಬಿಜೆಪಿಯವರಿಗೆ ಮೂರು ಅಜೆಂಡಾಗಳಿವೆ ;  ಸುಳ್ಳು ಹೇಳೋದು, ಗಲಭೆ ಮಾಡೋದು, ದೇವರ ಹೆಸ್ರಲ್ಲಿ ಸುಳ್ಳು ಹೇಳ್ಕೊಂಡು ತಿರುಗುವುದು, ಮಂಕಾಳು ವೈದ್ಯ ವಾಗ್ದಾಳಿ

08-01-24 04:16 pm       HK News Desk   ಕರ್ನಾಟಕ

ಬಿಜೆಪಿಯವರು ಗಲಭೆ ಮಾಡದೆ ಯಾವ ಎಲೆಕ್ಷನ್ ಗೆದ್ದಿದ್ದಾರೆ. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಮಾಡುವುದಕ್ಕೆ ಸಿದ್ದರಿದ್ದಾರೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಕಾರವಾರದಲ್ಲಿ ಬಿಜೆಪಿ ವಿರುದ್ಧ ವದ್ದಾಳಿ ಮಾಡಿದ್ದಾರೆ .

ಕಾರವಾರ, ಜ 08: ಬಿಜೆಪಿಯವರು ಗಲಭೆ ಮಾಡದೆ ಯಾವ ಎಲೆಕ್ಷನ್ ಗೆದ್ದಿದ್ದಾರೆ. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಮಾಡುವುದಕ್ಕೆ ಸಿದ್ದರಿದ್ದಾರೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಕಾರವಾರದಲ್ಲಿ ಬಿಜೆಪಿ ವಿರುದ್ಧ ವದ್ದಾಳಿ ಮಾಡಿದ್ದಾರೆ .

ಕಾರವಾರದಲ್ಲಿ ನೂತನವಾಗಿ ನಿರ್ಮಿಸಿದ ಅರಣ್ಯ ಭವನವನ್ನು ಸೋಮವಾರ ಉದ್ಘಾಟನೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದರು‌.

ಬಿಜೆಪಿಯವರಿಗೆ ಮೂರು ಅಜೆಂಡಾಗಳಿವೆ. ಸುಳ್ಳು ಹೇಳುವುದ, ಗಲಭೆ ಮಾಡುವುದು, ದೇವರ ಹೆಸ್ರಲ್ಲಿ ಸುಳ್ಳು ಹೇಳ್ಕೊಂಡು ರಾಜಕಾರಣ ಮಾಡೋದು ಎಂದು ಟೀಕಿಸಿದರು.

ರಾಮನ ನಿಜಭಕ್ತರಾದರೇ ಬಿಜೆಪಿ ಹೀಗೆ ಮಾಡುತ್ತಿರಲಿಲ್ಲ. ನಾನು‌ ಕೂಡಾ ಶ್ರೀರಾಮನ ಭಕ್ತ. ನಾನು ಭಟ್ಕಳದಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಶ್ರೀರಾಮ ಸಮಸ್ತ ಹಿಂದುಗಳ ಆರಾಧ್ಯ. ಕೇವಲ ಬಿಜೆಪಿಗೆ ಮಾತ್ರ ಅಲ್ಲ ಎಂದರು‌.

Karwar Minister Mankala Vaidya slams BJP over Ram Mandir. Says they have only three agenda, telling lies, creating communial fights and bring religious dis harmony he added.