ಬ್ರೇಕಿಂಗ್ ನ್ಯೂಸ್
24-01-24 06:12 pm HK News Desk ಕರ್ನಾಟಕ
ಕಲಬುರಗಿ, ಜ 24: ನಾನು ಏನೇ ಮಾಡಿದ್ದರೂ, ಮಾತನಾಡಿದ್ದರೂ ಬಿಜೆಪಿಯವರಿಗೆ ನಾನು ಮನೆ ದೇವರಾಗಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಅವರಿಗೆ ಮನೆ ದೇವರಂತೆ ಆಗಿದ್ದೇನೆ. ಏನೇ ಇದ್ದರೂ ನನ್ನ ಬಗ್ಗೆ ಮಾತನಾಡುವವರೆಗೆ ತಿಂದ ಅನ್ನ ಕರುಗುವುದಿಲ್ಲ. ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಿದ್ದರೂ ಏನು ತಂದಿದ್ದಾರೆ ಎಂದು ತಿರುಗೇಟು ನೀಡಿದರು.
ಪ್ರಸಕ್ತವಾಗಿ ವ್ಯಾಪಕ ಬರ ಬಿದ್ದಿದ್ದರೂ ಪರಿಹಾರ ಬರಲಿಲ್ಲ. ಯಾವುದೇ ದೊಡ್ಡ ಯೋಜನೆ ಬರಲಿಲ್ಲ. ನರೇಗಾ 150 ದಿನಕ್ಕೆ ಹೆಚ್ಚಳ ಮಾಡಲಿಲ್ಲ. ಇವರು ಯಾವುದೇ ಲೆಸ ಮಾಡಿಲ್ಲ. ಅಯೋಗ್ಯ, ಅಸಮರ್ಥ ಪದಗಳ ಎಲ್ಲ ಸಮನಾರ್ಥಕ ಪದಗಳು ಬಿಜೆಪಿ ರಾಜ್ಯ ನಾಯಕರಿಗೆ ಸರಿಹೊಂದುತ್ತವೆ ಎಂದು ಹೇಳಿದರು.
ನನಗೆ ಯಾರ ಮೇಲೆ ಭಕ್ತಿ ಇಲ್ಲ. ಬಸವೇಶ್ವರ, ಅಂಬೇಡ್ಕರ್ ತತ್ವದ ಮೇಲೆ ಭಕ್ತಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಯಾವ ತತ್ವದಲ್ಲಿ ಸಮಾನತೆ ಎಂಬುದು ಇಲ್ಲವೋ ಅದನ್ನು ನಾನು ಒಪ್ಪುವುದಿಲ್ಲ. ರಾಮ ಅಸಮಾನತೆ ಮಾಡಿಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಅಂಬೇಡ್ಕರ್ ಪುಸ್ತಕ ಬರೆದಿದ್ದಾರೆ ಅದನ್ನು ಬಿಜೆಪಿಯವರು ಓದಲಿ ಎಂದು ಸಲಹೆ ನೀಡಿದರು. ನಂಬಿಕೆ ಇದ್ದವರು ಅವರ ನಂಬಿಕೆಗೆ ಅನುಸಾರವಾಗಿ ಹೋಗಬಹುದಾಗಿದೆ. ನಾನು ಶರಣಬಸವೇಶ್ವರ ದೇವಸ್ಥಾನ, ದರ್ಗಾಗೆ ಭೇಟಿ ನೀಡುತ್ತೇನೆ. ಅಲ್ಲಿ ಹೋಗಬೇಡ ಇಲ್ಲಿ ಹೋಗಬೇಡ ಎಂಬ ಕಟ್ಟಳೆಗಳು ಇರುವುದಿಲ್ಲ. ಎಲ್ಲರಿಗೂ ಸಮಾನತೆಯಿಂದ ದಾಸೋಹ ನೀಡಲಾಗುತ್ತದೆ ಇಂತಹ ಸ್ಥಳಗಳಿಗೆ ನಾನು ಹೋಗುತ್ತೇನೆ ಎಂದು ಹೇಳಿದರು.
Karnataka Minister Priyank Kharge on Saturday said that whatever he has done or spoken about, he is a "house god" for the BJP. Speaking to reporters on Wednesday, Hegde said, "I am like a house god to the BJP.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm