ಬ್ರೇಕಿಂಗ್ ನ್ಯೂಸ್
12-05-24 03:45 pm HK News Desk ಕರ್ನಾಟಕ
ಮಂಡ್ಯ, ಮೇ 12: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಾಜಕೀಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಬಂಧನವಾಗಿದೆ. ಅದೇ ರೀತಿ ಮಾಜಿ ಸಿಎಂ ಜೆಡಿಎಸ್ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಕೂಡ ಬಂಧನವಾಗುವ ದಿನ ದೂರವಿಲ್ಲ ಎಂದು ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿಯವರ ವೈಯಕ್ತಿಕ ಜೀವನವನ್ನು ಕೆದಕಿದ್ದಾರೆ.
ಮಾಜಿ ಸಿ ಎಂ ಕುಮಾರಸ್ಚಾಮಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು ಬಂದು ದೂರು ನೀಡುವ ಕಾಲ ಹತ್ತಿರ ಬಂದಿದೆ. ಕುಮಾರಸ್ವಾಮಿ ಏನು ಸಾಚಾ ಅಲ್ಲ ಅವರೂ ದೌರ್ಜನ್ಯ ನಡೆಸಿದ್ದಾರೆ. ರಾಧಿಕಾ ಅವರೇನು ಸ್ವಂತ ಹೆಂಡತಿ ರೀತಿ ಟ್ರೀಟ್ ಮಾಡ್ತಾರಾ? ಹಾಗೆಯೇ ಒಂದಷ್ಟು ಜನರು ಬಂದು ದೂರು ನೀಡಬಹುದು. ಒಂದು ಮಗುವನ್ನು ಕೊಟ್ಟು ಈಗ ಅವರನ್ನ ಬೀದಿಗೆ ಬಿಟ್ಟಿದ್ದಾರೆ. ಕುಮಾರಸ್ವಾಮಿಗೂ ಇದೇ ರೀತಿ ತನಿಖೆ ಎದುರಿಸುವ ಸ್ಥಿತಿ ಬರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಾವ ಪುರುಷಾರ್ಥಕ್ಕಾಗಿ ಜೆಡಿಎಸ್ ಅವರು ಪ್ರತಿಭಟನೆ ಮಾಡ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಜೆಡಿಎಸ್ ಪಕ್ಷದವರೂ ಇದ್ದಾರೆ. ಈ ಘಟನೆಗೂ ನಮ್ಮ ಸರ್ಕಾರಕ್ಕೂ ಏನು ಸಂಬಂಧ ಇದೆ. ಸರ್ಕಾರ ಹೋಗಿ ವಿಡಿಯೋ ಮಾಡಿತ್ತಾ? ವಿಡಿಯೋ ಮಾಡಿರೋನು ಪ್ರಜ್ವಲ್, ಪ್ರಜ್ವಲ್ ಯಾರು ಅನ್ನೋದಾದ್ರೆ ಜೆಡಿಎಸ್ ಸಂಸದ, ಜೆಡಿಎಸ್ ಯಾವುದು ಅಂದರೆ ಒಂದು ಕುಟುಂಬಕ್ಕೆ ಸೇರಿದ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪೆನ್ ಡ್ರೈವ್ ಡಿಕೆಶಿ ಹಂಚಿದ್ದಾರೆ ಅನ್ನೊ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮ ಬಳಿ ಇದ್ದಿದ್ದರೆ ಚುನಾವಣೆಗೆ ಮೊದಲೇ ಹಂಚಿ ಇವರು ತಲೆ ಎತ್ತದಂತೆ ಮಾಡುತ್ತಿದ್ದವೋ ಏನೋ? ಇಡೀ ಪ್ರಕರಣವನ್ನ ಹೇಗಾದರೂ ಮಾಡಿ ಮೂಲೆ ಗುಂಪು ಮಾಡಬಹುದು ಎಂದುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸ್ತಿದ್ದಾರೆ.
ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಬೇಕಾದ ನೀವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ಬೆದರಿಸೋದು ಕುಮಾರಸ್ವಾಮಿ ಹುಟ್ಟುಗುಣ, ಸಿಎಂ ಆಗಿ ಅವರು ಹೊಟೇಲ್ ನಲ್ಲಿಯೇ ಇರುತ್ತಿದ್ದರು. ಅಲ್ಲಿ ಏನೇನು ನಡೆದಿದೆಯೋ ಯಾರಿಗೆ ಗೊತ್ತು. ರೇವಣ್ಣರಿಗೆ ಆಗ ಗತಿಯೇ ಕುಮಾರಸ್ವಾಮಿಗೂ ಬರಬಹುದು ಎಂದು ಕಾಂಗ್ರೆಸ್ ಶಾಸಕ ಪರೋಕ್ಷವಾಗಿ ಕುಮಾರಸ್ವಾಮಿ ಜೈಲಿಗೆ ಹೋಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
Congress MLA Kadalur Uday gowda vs Kumaraswamy, says next he will go to jail like revanna. Says he married a young girl Radhika give her baby and ran away, they are may girls who have been sexually assulted, cases will be filed against him. Very soon he will go to jail like his brother Revanna he added.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm