Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಎರಡು ಕೆಎಸ್ಸಾರ್ಟಿಸಿ ಬಸ್ ; ಮಂಗಳೂರು ಬರ್ತಿದ್ದ ಆಂಬುಲೆನ್ಸ್ ಪರದಾಟ, ಕಿಮೀ ಉದ್ದಕ್ಕೆ ಟ್ರಾಫಿಕ್ ಜಾಮ್ 

20-05-24 12:38 pm       HK News Desk   ಕರ್ನಾಟಕ

ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಎರಡು ಕೆಎಸ್ಸಾರ್ಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಹೆದ್ದಾರಿ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದೆ.‌ ಇದರಿಂದ ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಹೆದ್ದಾರಿ ಪೂರ್ತಿ ಬ್ಲಾಕ್ ಆಗಿದೆ.‌

ಚಿಕ್ಕಮಗಳೂರು, ಮೇ.20: ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಎರಡು ಕೆಎಸ್ಸಾರ್ಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಹೆದ್ದಾರಿ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದೆ.‌ ಇದರಿಂದ ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಹೆದ್ದಾರಿ ಪೂರ್ತಿ ಬ್ಲಾಕ್ ಆಗಿದೆ.‌

ಜಿಟಿ ಜಿಟಿ ಮಳೆಯ ನಡುವೆ ಕಿಮೀ ಉದ್ದಕ್ಕೂ ವಾಹನಗಳು ಸಿಲುಕಿದ್ದು ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಚಾರ್ಮಾಡಿ ಘಾಟಿನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿಯ ತಿರುವಿನಲ್ಲಿ ಬೆಳಗ್ಗಿನ ಜಾವ ಎರಡು ಬಸ್ ಕೆಟ್ಟು ನಿಂತಿದ್ದು ವಾಹನಗಳು ಮುಂದಕ್ಕೆ ಹೋಗಲಾಗದೆ ನಿಂತಲ್ಲೇ ನಿಂತಿವೆ. 

ನಿರಂತರ ಮಳೆಯಲ್ಲೇ ಪ್ರವಾಸಿಗರು, ಪ್ರಯಾಣಿಕರು ಪರದಾಡಿದ್ದಾರೆ.‌ ಟ್ರಾಫಿಕ್ ಜಾಮ್ ನಡುವೆ ಆಂಬುಲೆನ್ಸ್ ಸಿಲುಕಿಕೊಂಡಿದ್ದು ಮಂಗಳೂರಿಗೆ ಹೋಗುತ್ತಿದ್ದ ರೋಗಿ ಪರದಾಡಿದ್ದಾರೆ. ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್, ಮೂಡಿಗೆರೆ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ‌

Charmadi Ghat blocked after two ksrtc bus spoilt in the middle of the road, jammed for kilometers. People had to face so much trouble. Ambulance was also stuck in the middle of the road.