ಬ್ರೇಕಿಂಗ್ ನ್ಯೂಸ್
18-06-24 06:32 pm Bangalore Correspondent ಕರ್ನಾಟಕ
ಬೆಂಗಳೂರು, ಜೂ.18: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಜೆಡಿಎಸ್ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ACMM ವಿಶೇಷ ನ್ಯಾಯಾಲಯ ಜೂನ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೂನ್ 12 ರಂದು ಆತನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಜೂನ್ 18 ರವರೆಗೆ ಅವರನ್ನು ವಶಕ್ಕೆ ನೀಡಿತ್ತು. 33 ವರ್ಷದ ಪ್ರಜ್ವಲ್ ರೇವಣ್ಣ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು.
ಪುರುಷತ್ವ ಪರೀಕ್ಷೆ ತುಂಬಾ ಮುಜುಗರ ಆಗತ್ತೆ ಪ್ಲೀಸ್ ಬೇಡ !
ಈ ವೇಳೆ ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಮನವಿ ಮಾಡಿರುವುದ್ದಕ್ಕೆ ಪ್ರಜ್ವಲ್ ರೇವಣ್ಣ ನ್ಯಾಯಾಲಯದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. "ನಾನು ಎರಡು ಪ್ರಕರಣದಲ್ಲಿ ಒಪ್ಪಿಕೊಂಡು ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಮತ್ತೆ ಪುರುಷತ್ವ ಪರೀಕ್ಷೆ ತುಂಬಾ ಮುಜುಗರ ಆಗುತ್ತೆ. ಈಗಾಗಲೇ ಎರಡು ಕೇಸ್ನಲ್ಲಿ ಪುರುಷತ್ವ ಪರೀಕ್ಷೆ ಆಗಿದೆ ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇದನ್ನು ಕೇಳಿ ನ್ಯಾಯಾಧೀಶರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಇನ್ನು, ಸಿಐಡಿಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಎಸ್ಐಟಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವನ್ನು ಕಸ್ಟಡಿಗೆ ಪಡೆಯಲು ಚಿಂತಿಸುತ್ತಿದೆ. ಇತ್ತೀಚೆಗೆ 3 ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ್ಣ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಎಸ್ಐಟಿ ಮತ್ತೆ ಪ್ರಜ್ವಲ್ ರೇವಣ್ಣರನ್ನು ತಮ್ಮ ವಶಕ್ಕೆ ಪಡೆದಿತ್ತು.
ಮೇ 31 ರಂದು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರೇವಣ್ಣನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಹಾಸನ ಚುನಾವಣೆ ನಡೆದ ಒಂದು ದಿನದ ನಂತರ ಅವರು ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ್ದರು. ಕೇಂದ್ರೀಯ ತನಿಖಾ ದಳದ ಮೂಲಕ ಎಸ್ಐಟಿ ಕೋರಿಕೆಯ ಮೇರೆಗೆ ಇಂಟರ್ಪೋಲ್ನಿಂದ ಈ ಹಿಂದೆ ಆತನ ಇರುವಿಕೆಯ ಬಗ್ಗೆ ಮಾಹಿತಿ ಕೋರಿ 'ಬ್ಲೂ ಕಾರ್ನರ್ ನೋಟಿಸ್' ನೀಡಲಾಗಿತ್ತು.
The Bengaluru court on Tuesday extended judicial custody of sexual assault and rape accused suspended JDS leader Prajwal Revanna. The 42nd Additional Chief Metropolitan Magistrate (ACMM) special court for representatives pronounces the extension of his judicial custody.
27-09-24 11:03 pm
Bangalore Correspondent
Mangalore Kulshekar Accident: ಓವರ್ ಟೇಕ್ ಧಾವಂತ...
27-09-24 10:15 pm
Bjp MLA Mahesh Tenginakai, CM Siddaramaiah: ಸ...
27-09-24 06:19 pm
DK Shivakumar, CM Siddaramaiah, Ramesh Jarkih...
27-09-24 06:11 pm
Siddaramaiah, FIR, Muda case: ಮುಖ್ಯಮಂತ್ರಿ ಸಿದ...
27-09-24 05:07 pm
25-09-24 05:36 pm
HK News Desk
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
27-09-24 09:41 pm
Mangalore Correspondent
Mangalore Dasara, Kudroli: ಕುದ್ರೋಳಿ ಕ್ಷೇತ್ರದಲ...
27-09-24 03:51 pm
Mangalore, village accountant protest: ಕೆಲಸದ...
27-09-24 03:25 pm
Flaunt Hair Transplant, Death, Mangalore:ಅಮಾಯ...
26-09-24 10:49 pm
VHP Mangalore, Tirupati Laddu: ತಿರುಪತಿ ಲಡ್ಡು...
26-09-24 08:59 pm
27-09-24 10:59 pm
HK News Desk
Puttur crime, Mangalore, Gun: ಸಾಲ ಕೇಳಿಕೊಂಡು ಬ...
27-09-24 02:27 pm
Bangalore crime, Murder, Mahalakshmi: ಮದುವೆ,...
27-09-24 12:34 pm
Karwar Murder, crime, Twist: ಕಾರವಾರ ಕೊಲೆ ಪ್ರಕ...
26-09-24 11:07 pm
Bangalore Murder case, Suicide, Death Note; ಮ...
26-09-24 02:41 pm