ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವ್ಯಕ್ತಿಯನ್ನ ಎಳೆದು ಬಿಸಾಡಿದ ಆನೆ ; ಯುವಕನಿಗೆ ಉಗಿದ ಮಾವುತ 

27-06-24 02:53 pm       HK News Desk   ಕರ್ನಾಟಕ

ದೇವಸ್ಥಾನದ ಆನೆ ರೂಂ ಬಾಯ್ ಒಬ್ಬರನ್ನು ಎಳೆದು ಹಾಕಿದ ಘಟನೆ ನಡೆದಿದೆ.

ಕಡಬ, ಜೂ 27: ದೇವಸ್ಥಾನದ ಆನೆ ರೂಂ ಬಾಯ್ ಒಬ್ಬರನ್ನು ಎಳೆದು ಹಾಕಿದ ಘಟನೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ ಕೆಲವೇ ಸಮಯದ ಮೊದಲು ಈ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ಡಿಕೆಶಿ ಯವರನ್ನ ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು.

ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಫೋಟೋ ತೆಗೆಯಲು ಬಂದಿದ್ದರು. ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರ ರೂಂ ಬಾಯ್ ಆನೆಯ ಹತ್ತಿರ ಬಂದಿದ್ದು ತಕ್ಷಣ ಆನೆ ತನ್ನ ಸೊಂಡಿಲಿನಿಂದ ಎಳೆದು ಹಾಕಿದೆ. ಇನ್ನು ಮಾವುತ ನೀವೆಲ್ಲ ಆನೆ ಹತ್ತಿರ ಸಾಯೋಕೆ ಬರ್ತೀರಾ ಎಂದು ಅವಾಜ್ ಹಾಕಿದ್ರು. 

ರೂಂ ಬಾಯ್ ಮದ್ಯಪಾನ ಮಾಡಿರುವುದೇ ಘಟನೆ ಕಾರಣ ಎನ್ನಲಾಗಿದ್ದು ವ್ಯಕ್ತಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

A video showing a youth who had consumed alcohol being pulled and pushed by an elephant belonging to the Kukke Subramanya temple has gone viral on social media. The incident reportedly took place on June 25.