Hubli Suicide, Mobile use: ಹುಬ್ಬಳ್ಳಿ ; ಹೆಚ್ಚು ಮೊಬೈಲ್‌ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕ

05-09-24 12:44 pm       HK News Desk   ಕರ್ನಾಟಕ

ಹೆಚ್ಚು ಮೊಬೈಲ್‌ ಬಳಸಬೇಡ ಎಂದು ಪಾಲಕರು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಹುಬ್ಬಳ್ಳಿ , ಸೆ 05: ಹೆಚ್ಚು ಮೊಬೈಲ್‌ ಬಳಸಬೇಡ ಎಂದು ಪಾಲಕರು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಮೃತ ಬಾಲಕನನ್ನು ಸಮೃದ್ಧ ಎಂದು ಗುರುತಿಸಲಾಗಿದ್ದು, ಬಾಲಕ 13 ವರ್ಷದವನಾಗಿದ್ದ ಎಂದು ಹೇಳಲಾಗುತ್ತಿದೆ. ಓದಿನ ಕಡೆಗೆ ಗಮನ ಕೊಟ್ಟು ಚೆನ್ನಾಗಿ ವಿದ್ಯಾಭ್ಯಾಸ ಮಾಡುವಂತೆ ಪಾಲಕರು ಬುದ್ಧಿ ಹೇಳಿದ್ದಕ್ಕೆ ಮನನೊಂದ ಬಾಲಕ  ನೇಣಿಗೆ ಶರಣಾಗಿದ್ದಾನೆ.

ಇಲ್ಲಿನ ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿನ ರಾಧಿಕಾ ಪಾರ್ಕ್​ನಲ್ಲಿ ಈ ಘಟನೆ ನಡೆದಿದೆ. ಇನ್ನು, ಮಗನ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಪಿಎಂಸಿ ನವನಗರದ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

An incident where a boy committed suicide because his parents told him not to use mobile phone took place in Bairidevarakoppa village of Hubballi. The deceased boy has been identified as Samridha and is said to be 13 years old. The boy surrendered to hanging on September 3 because his parents advised him to pay attention to his studies and study well.