Bangalore Mangalore Road, Shiradi Ghat: ಸಕಲೇಶಪುರ ಮತ್ತೆ ಬ್ಲಾಕ್ ; ರಸ್ತೆ ಕಾಮಗಾರಿ ಅವ್ಯವಸ್ಥೆಗೆ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ರಾತ್ರಿಯಿಡೀ ಪ್ರಯಾಣಿಕರ ಪರದಾಟ, ಸ್ಥಳಕ್ಕೆ ಬಾರದ ಪೊಲೀಸರು

25-09-24 10:19 am       HK News Desk   ಕರ್ನಾಟಕ

ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರದಲ್ಲಿ ಮತ್ತೆ ಬ್ಲಾಕ್ ಆಗಿದೆ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ರಾತ್ರಿಯಿಡೀ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ನೂರಾರು ವಾಹನಗಳು ಸಕಲೇಶಪುರದಲ್ಲಿ ಸಿಕ್ಕಿಬಿದ್ದಿವೆ. 

ಸಕಲೇಶಪುರ, ಸೆ.25: ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರದಲ್ಲಿ ಮತ್ತೆ ಬ್ಲಾಕ್ ಆಗಿದೆ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ರಾತ್ರಿಯಿಡೀ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ನೂರಾರು ವಾಹನಗಳು ಸಕಲೇಶಪುರದಲ್ಲಿ ಸಿಕ್ಕಿಬಿದ್ದಿವೆ. 

ಮಧ್ಯರಾತ್ರಿ 1 ಗಂಟೆಯಿಂದ ಬಸ್, ಕಾರು, ಲಾರಿ ಸಹಿತ ಎಲ್ಲ ರೀತಿಯ ವಾಹನಗಳು ಬಾಕಿಯಾಗಿದ್ದು ಬೆಳಗ್ಗೆ ಎಂಟು ಗಂಟೆಯಾದರೂ ಒಬ್ಬನೇ ಒಬ್ಬ ಪೊಲೀಸ್ ಬಂದಿಲ್ಲ. ಸ್ಥಳದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರೇ ವಾಹನ ಬ್ಲಾಕ್  ಸರಿಪಡಿಸುತ್ತಿದ್ದಾರೆ. 

ಎರಡು ಜೆಸಿಬಿಗಳಲ್ಲಿ ಕೆಸರಿನ ರಾಡಿ ಎದ್ದಿರುವ ಜಾಗಕ್ಕೆ ಕಲ್ಲು ಮಣ್ಣು ತುಂಬಿಸುತ್ತಿದ್ದಾರೆ. ಕಾರು ಇನ್ನಿತರ ಸಣ್ಣ ವಾಹನಗಳು, ಲಾರಿಗಳು ಹೂತು ಹೋಗುತ್ತಿವೆ. ಸಕಲೇಶಪುರ ಪೊಲೀಸರಿಗೆ ಫೋನ್ ಮಾಡಿದರೂ ಸ್ಥಳಕ್ಕೆ ಬಂದಿಲ್ಲ. ರಾತ್ರಿಯಿಂದ ಬೆಳಗ್ಗೆ ಎಂಟು ಕಳೆದರೂ ರಸ್ತೆ ಸರಿಯಾಗಿಲ್ಲ. ಒಂದೊಂದೇ ವಾಹನ ಪಾಸ್ ಆಗುತ್ತಿದ್ದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.‌

Bangalore Mangalore road blocked due to mud filling at Sakleshpur, passengers spend hours in road. Due to mud filling passengers had to halt for hours at Sakleshpur slamming officals for their negligence.