ಬ್ರೇಕಿಂಗ್ ನ್ಯೂಸ್
25-09-24 06:23 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.25: ಬ್ಯಾಂಕಿಂಗ್ ವಲಯದ ಪ್ರಾಮಾಣಿಕತೆಯನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್ನಲ್ಲಿ ಒತ್ತಾಯ ಮಾಡಿದೆ.
ಯೂನಿಯನ್ ಬ್ಯಾಂಕ್ ಸಲ್ಲಿಸಿರುವ ಅರ್ಜಿ ಕುರಿತು ನ್ಯಾ.ಎಂ.ನಾಗಪ್ರಸನ್ನ ವಿಚಾರಣೆ ನಡೆಸಿದ್ದು ಬ್ಯಾಂಕ್ ಪರವಾಗಿ ಅಟಾರ್ನಿ ಜನರಲ್ ವೆಂಕಟರಮಣಿ, ಆರ್ಬಿಐ ಬ್ಯಾಂಕುಗಳ ಪ್ರಾಮಾಣಿಕತೆಯನ್ನು ಖಾತ್ರಿಪಡಿಸಲು ಮಾಸ್ಟರ್ ಸುತ್ತೋಲೆಯನ್ನು ಹೊರಡಿಸಿದೆ. ಅದರಂತೆ ಬ್ಯಾಂಕುಗಳ ವಹಿವಾಟಿನ ಯಾವುದೇ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಂಸ್ಥೆ ಅಗತ್ಯವಿದೆ ಎಂದು ಹೇಳಿದೆ. ಅದರಂತೆ ವಾಲ್ಮೀಕಿ ಹಗರಣವನ್ನೂ ಸಿಬಿಐ ತನಿಖೆಗೆ ವಹಿಸುವುದೇ ಸೂಕ್ತ ಎಂದು ಹೇಳಿದರು. ಬ್ಯಾಂಕ್ ಈಗಾಗಲೇ ತನಿಖೆ ಕೋರಿ ಸಿಬಿಐಗೆ ಪತ್ರ ಬರೆದಿದೆ. ಹಾಗಾಗಿ, ಅಧಿಕೃತ ದೂರು ಪಡೆದು ಸಿಬಿಐ ತನಿಖೆಯನ್ನೂ ಆರಂಭಿಸಿದೆ. ಆದರೆ ರಾಜ್ಯ ಸರ್ಕಾರ ತನಿಖೆಯನ್ನು ವರ್ಗಾಯಿಸಿಲ್ಲ. ಬ್ಯಾಂಕುಗಳ ಹಿತದೃಷ್ಟಿಯಿಂದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕಾಗಿದೆ ಎಂದು ಮನವಿ ಮಾಡಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರದ ಪರ ಹಿರಿಯ ನ್ಯಾಯವಾದಿ ಬಿ.ವಿ ಆಚಾರ್ಯ, "ಅರ್ಜಿ ಸಿಂಧುತ್ವದ ಬಗ್ಗೆ ಪ್ರಾಥಮಿಕ ಪ್ರಶ್ನೆ ಇದೆ. ಏಕೆಂದರೆ ಇದು ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಿನ ವ್ಯಾಜ್ಯ," ಎಂದು ವಾದಕ್ಕಿಳಿದರು. ಆದರೆ ಹೈಕೋರ್ಟ್ ಆಚಾರ್ಯ ವಾದವನ್ನು ಒಪ್ಪಲಿಲ್ಲ. ಅರ್ಜಿ ಸಿಂಧುತ್ವದ ಬಗ್ಗೆ ನಿರ್ಣಯಿಸಲು ಮುಂದಿನ ವಿಚಾರಣೆಯನ್ನು ನ್ಯಾಯಾಧೀಶರು ಸೆ.30ಕ್ಕೆ ಮುಂದೂಡಿದರು.
Transfer Valimiki scam Probe To CBI, Union Bank Of India To Karnataka High Court. A single judge bench of Justice M Nagaprasanna was hearing a petition by Union Bank of India seeking a direction to the government to transfer the probe being carried out in the alleged scam in regards to the Karnataka Maharshi Valmiki Scheduled Tribes Development Corporation Ltd to the Central Bureau of Investigation.
25-09-24 09:46 pm
Bangalore Correspondent
Siddaramaiah, Muda scam, Lokayukta: ಸಿದ್ದರಾಮಯ...
25-09-24 09:19 pm
ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ; ವಾಲ್ಮೀಕಿ ಹ...
25-09-24 06:23 pm
Bangalore Mangalore Road, Shiradi Ghat: ಸಕಲೇಶ...
25-09-24 10:19 am
Karwar, Sirsi, crime: ಭ್ರಷ್ಟಾಚಾರ, ಸರ್ಕಾರಕ್ಕೆ...
24-09-24 10:39 pm
25-09-24 05:36 pm
HK News Desk
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
25-09-24 09:03 pm
Mangalore Correspondent
PB Desa Death, Mangalore: ಕರಾವಳಿಯ ಖ್ಯಾತ ಮಾನವ...
25-09-24 08:54 pm
CM Siddaramaiah, Santosh Hegde, Mangalore: ಸಿ...
25-09-24 03:44 pm
Mangalore, Flount Hair Transplant, death: ಸಣ್...
25-09-24 01:21 pm
Mangalore, Daiva, Police: ಸಿನಿಮಾ, ನಾಟಕದಲ್ಲಿ ದ...
24-09-24 10:31 pm
24-09-24 09:04 pm
Mangalore Correspondent
Mangalore, Crime, Shrimati Shetty murder case...
24-09-24 08:26 pm
Bangalore crime, Drugs, CCB: ಡ್ರಗ್ಸ್ ಮಾರುತ್ತ...
23-09-24 09:12 pm
Bangalore Murder, Crime; ಕೂಲ್ ಸಿಟಿಯಲ್ಲಿ ಶ್ರದ್...
23-09-24 11:42 am
ಉಪ್ಪಳದ ಎರಡಂತಸ್ತಿನ ಮನೆಯಲ್ಲಿ ಮೂರು ಕೋಟಿ ಮೌಲ್ಯದ ಡ...
22-09-24 10:48 pm