ಬ್ರೇಕಿಂಗ್ ನ್ಯೂಸ್
19-09-25 09:45 am Bangalore Correspondent ಕರ್ನಾಟಕ
ಬೆಂಗಳೂರು, ಸೆ 19 : ಮೋಸದಿಂದಲೇ ಬಿಜೆಪಿ ಚುನಾವಣೆ ಗೆದ್ದಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಕ್ಕೆ ಸ್ಪಷ್ಟ ಉತ್ತರ ಚುನಾವಣಾ ಆಯೋಗ ನೀಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಅಳಂದ ಪ್ರಕರಣ ಆಗಿ ಐದಾರು ವರ್ಷ ಆಯ್ತು. ಈ ವಿಚಾರವಾಗಿ ಎಸ್ ಐ ಟಿ ಯವರು ಚುನಾವಣಾ ಆಯೋಗಕ್ಕೆ ಸಾಕಷ್ಟು ಪತ್ರವನ್ನು ಬರೆದಿದ್ದಾರೆ. ಯಾವ ರೀತಿಯಲ್ಲಿ ಮತಗಳು ಡಿಲೀಟ್ ಆಗಿದೆ ಎಂದು ಪ್ರಶ್ನಿಸಿದ್ದರು. ಆದರೆ ಚುನಾವಣಾ ಆಯೋಗ ಉತ್ತರ ನೀಡಲಿಲ್ಲ ಎಂದು ವಿವರಿಸಿದರು.
ಬಿಹಾರದಲ್ಲಿ ಮೂರು ಲಕ್ಷ ಮನೆಗಳಿಗೆ ಜೀರೋ ನಂಬರ್ ಕೊಡಲಾಗಿದೆ. ಮೋಸದಿಂದಲೇ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಮತ ಕಳ್ಳತನದ ಮೂಲಕವೇ ಚುನಾವಣೆ ಗೆಲ್ಲುತ್ತಿದ್ದರು ಎಂದು ನೇರವಾಗಿ ಆರೋಪಿಸಿದರು.
ಚುನಾವಣಾ ಆಯೋಗ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದರು. ಅದರ ಹಿಂದಿರುವ ಉದ್ದೇಶ ಏನು? ಎಲ್ಲ ಸಂಸ್ಥೆಗಳನ್ನು ಇದೇ ರೀತಿಯಲ್ಲಿ ಬಳಕೆ ಮಾಡಲಾಗಿದೆ. ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟ ಉತ್ತರ ಚುನಾವಣಾ ಆಯೋಗ ನೀಡಿಲ್ಲ ಎಂದು ಕಿಡಿಕಾರಿದರು.
ಈಗ ಹೊಸತಾಗಿ ಪ್ರಧಾನಿ ಮೋದಿ ಅವರ ಕುರಿತಾದ ಸಿನಿಮಾ ನೋಡಬೇಕು. ಸಿನಿಮಾ ಈಗಾಗಲೇ ಹಿಂದಿನ ಪ್ರಧಾನಿಗಳು, ಭಗತ್ ಸಿಂಗ್, ಹೋರಾಟಗಾರು ಬಂದು ಹೋಗಿ ಆಯ್ತು. ಆದರೆ ಇವಾಗ ಕೊನೆಗೆ ಇವರ ಸಿನಿಮಾ ನೋಡಬೇಕಾಗಿದೆ. ಏನು ಸಾಧನೆ ಇದೆ ಗೊತ್ತಿಲ್ಲ. ಗೋಡಾ ಹೇ ಮೈದಾನ್ ಹೇ ಎಂಬಂತಾಗಿದೆ ಎಂದು ಕಿಡಿಕಾರಿದರು.
ದೇಶ ಹಾಳಾಗಿ ಹೋಗಬೇಕು. ಒಬ್ಬ ಮನುಷ್ಯ ಪ್ರಸಿದ್ದಿ ಆಗಬೇಕು. ಕೊಳ್ಳೆ ಹೊಡೆದು ಹೋಗಿ. ಪಿಚ್ಚರ್ ನಿಮ್ಮದೇ ಆಯ್ತು ಓಡಿಸಿ ಎಂದು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡರು.
ಅದಾನಿಗೆ ಒಂದು ರೂಪಾಯಿಗೆ ಒಂದು ಸಾವಿರ ಎಕರೆ ನೀಡಲಾಗಿದೆ. ಹತ್ತು ಲಕ್ಷ ಮ್ಯಾಂಗೋ ಪ್ಲ್ಯಾಂಟೇಷನ್ ಇದ್ದದ್ದನ್ನು ಅದಾನಿಗೆ ಕೊಡಲಾಗಿದೆ. ನಮ್ಮ ಸರ್ಕಾರಿ ಕಲ್ಲಿದ್ದಲು ಕಂಪನಿಗೆ ಏಕೆ ಕೊಡಬಾರದು. ಹೊಡಿರಿ ಪಿಚ್ಚರ್, ಮೋದಿ ಸಾಹೇಬ್ರೇ ಮಜಾ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.
Karnataka Labour Minister Santosh Lad has launched a scathing attack on the BJP, alleging that the party won elections through fraudulent means and accusing the Election Commission of maintaining silence over serious allegations made by Congress leader Rahul Gandhi.
19-09-25 09:45 am
Bangalore Correspondent
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm