ಬ್ರೇಕಿಂಗ್ ನ್ಯೂಸ್
12-04-26 07:58 pm HK News Staffer ಕರ್ನಾಟಕ
ಬೆಂಗಳೂರು, ಎಪ್ರಿಲ್ 12 : 'ಪಿಗ್ಮಿ ಏಜೆಂಟ್ಗಳು' (ಠೇವಣಿ ಸಂಗ್ರಾಹಕರು) ಕೂಡ ಆಯಾ ಬ್ಯಾಂಕುಗಳ ನೌಕರರಾಗಿದ್ದು, ಅವರಿಗೆ ಪಾವತಿಸುವ ಸಂಬಳದ ಮೇಲೆ ಯಾವುದೇ ಜಿಎಸ್ಟಿ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಈ ಬಗ್ಗೆ ಹೈಕೋರ್ಟ್ ಏಕಸದಸ್ಯ ಪೀಠವು ವಾಣಿಜ್ಯ ತೆರಿಗೆ ಇಲಾಖೆಯ ರಾಜ್ಯ ಆಯುಕ್ತರಿಗೆ ಆದೇಶ ನೀಡಿದ್ದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ ನೀಡಲಾಗಿರುವ ಐಟಿ ಇಲಾಖೆಯ ನೋಟಿಸ್ಗಳನ್ನು ರದ್ದುಗೊಳಿಸಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ, "ಬ್ಯಾಂಕುಗಳಲ್ಲಿ ಪಿಗ್ಮಿ ಏಜೆಂಟ್ಗಳು ಭದ್ರತಾ ಠೇವಣಿಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ. ಅವರಿಗೆ ಇದಕ್ಕಾಗಿ ಕನಿಷ್ಠ ಸಂಭಾವನೆಯನ್ನು ಖಾತ್ರಿಪಡಿಸಲಾಗಿದೆ. ಇದರೊಂದಿಗೆ, ಗ್ರಾಚ್ಯುಟಿಯಂತಹ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ ಮತ್ತು ಅವರ ನಿಯೋಜನೆ ಮೇಲೆ ಬ್ಯಾಂಕಿನ ನಿಯಂತ್ರಣ ಇರುತ್ತದೆ. ಪಿಗ್ಮಿ ಏಜೆಂಟರ ಸೇವೆಗಳು ಐಟಿ ಏಕ್ಟ್ ಶೆಡ್ಯೂಲ್ -3ರ ಕ್ರಮ ಸಂಖ್ಯೆ 1ರಡಿಯಲ್ಲಿ ರೂಪಿಸಿದ ವಿನಾಯಿತಿ ವ್ಯಾಪ್ತಿಗೆ ಬರುತ್ತವೆ. ಉದ್ಯೋಗದ ಹಾದಿಯಲ್ಲಿರುವ ಇಂತಹ ಸೇವೆಗಳು ಜಿಎಸ್ಟಿ ತೆರಿಗೆಯಿಂದ ಪ್ರತ್ಯೇಕಿಸಲ್ಪಟ್ಟಿವೆ ಎಂದು ಹೈಕೋರ್ಟ್ ಹೇಳಿದೆ.
ರಾಜ್ಯ ಜಿಎಸ್ಟಿ ಅಧಿಕಾರಿಗಳು ಹೊರಡಿಸಿದ ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿತ್ತು. ಪಿಗ್ಮಿ ಏಜೆಂಟ್ಗಳಿಗೆ ಪಾವತಿಸುವ ಕಮಿಷನ್ಗಳ ಮೇಲೆ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಜಿಎಸ್ಟಿ ವಿಧಿಸುವುದನ್ನು ಆಕ್ಷೇಪಿಸಲಾಗಿತ್ತು. ಬ್ಯಾಂಕಿನ ಪರವಾಗಿ ಹಾಜರಾದ ಹಿರಿಯ ವಕೀಲ ವಿ. ರಘುರಾಮನ್, ಪಿಗ್ಮಿ ಏಜೆಂಟ್ಗಳು ಬ್ಯಾಂಕಿನ ಉದ್ಯೋಗಿಗಳಾಗಿದ್ದು, ಅವರ ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲಾಗದು ಎಂದು ವಾದಿಸಿದರು. ಅಲ್ಲದೆ, ಅವರನ್ನು ವ್ಯಾಪಾರ ಸಹಾಯಕರು ಎಂದೂ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಮಾರ್ಗಸೂಚಿಗಳಡಿ ಬ್ಯಾಂಕ್ ನೇಮಿಸಿದ ಮಧ್ಯವರ್ತಿಗಳಲ್ಲ ಎಂದರು.
ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜಿಎಂ ಗಂಗಾಧರ್ ಬ್ಯಾಂಕ್ ಅರ್ಜಿಯನ್ನು ವಿರೋಧಿಸಿ, ಪಿಗ್ಮಿ ಏಜೆಂಟ್ಗಳಿಗೆ ಬ್ಯಾಂಕ್ ಕಮಿಷನ್ ಪಾವತಿಸುತ್ತದೆ ಮತ್ತು ಅದು ಸಂಬಳವಲ್ಲ. ಹಾಗಾಗಿ ಬ್ಯಾಂಕಿನ ನೇರ ಉದ್ಯೋಗಿಗಳಲ್ಲ. ಆದ್ದರಿಂದ, ಸಿಜಿಎಸ್ಟಿ ಕಾಯ್ದೆ ಸೆಕ್ಷನ್ 9(3)ರ ಪ್ರಕಾರ ಕಮಿಷನ್ ಗೆ ಪ್ರತಿಯಾಗಿ ಜಿಎಸ್ಟಿ ಪಾವತಿಸಲು ಬ್ಯಾಂಕ್ ಹೊಣೆಗಾರನಾಗುತ್ತದೆ ಎಂದರು.
ನ್ಯಾಯಾಧೀಶರು, ಬ್ಯಾಂಕ್ ಏಜೆಂಟ್ಗಳೊಂದಿಗೆ ಮಾಡಿಕೊಂಡ ಒಪ್ಪಂದದ ನಿಯಮಗಳನ್ನು ಉಲ್ಲೇಖಿಸಿ, ಪಿಗ್ಮಿ ಏಜೆಂಟ್ಗಳು ಬ್ಯಾಂಕಿನ ಆಜ್ಞೆ, ನಿಯಮಗಳು ಮತ್ತು ಶಿಸ್ತಿನ ಚೌಕಟ್ಟಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ, ಅವರ ಸಂಭಾವನೆಯನ್ನು ಕಮಿಷನ್ ಎಂದು ಕರೆಯಲಾಗುತ್ತದೆಯಾದರೂ, ಅದು ಮೂಲಭೂತವಾಗಿ ವೇತನಕ್ಕೆ ಹೋಲುತ್ತದೆ, ಇದು ಮೂಲದಲ್ಲಿ ತೆರಿಗೆ ಕಡಿತಕ್ಕೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು.
ತನ್ನ ಆದೇಶದಲ್ಲಿ, ಜೂನ್ 28 2017 ರಂದು ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಯನ್ನು ಪೀಠವು ಉಲ್ಲೇಖಿಸಿತು, ಇದು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಗುರುತಿಸಲ್ಪಟ್ಟ ಮತ್ತು ನಿಯಂತ್ರಿಸಲ್ಪಡುವ ಠೇವಣಿ ಯೋಜನೆಯ ಮಾದರಿಗಳ ಅಡಿಯಲ್ಲಿ ಮಧ್ಯವರ್ತಿಯನ್ನು ನೇಮಿಸುವ ಬಗ್ಗೆ ಉಲ್ಲೇಖಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು, "ಪಿಗ್ಮಿ ಏಜೆಂಟರು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿಸಿದ ಮಾದರಿಯಲ್ಲಿ ನೇಮಕಗೊಂಡ ಮಧ್ಯವರ್ತಿಗಳಲ್ಲ. ಅವರ ಪಾತ್ರವು ಬ್ಯಾಂಕಿನ ಪಿಗ್ಮಿ ಠೇವಣಿ ಯೋಜನೆಯಡಿ ಠೇವಣಿಗಳ ಸಂಗ್ರಹಕ್ಕೆ ಸೀಮಿತವಾಗಿದೆ ಮತ್ತು ಅವರು ವ್ಯವಹಾರ ಸುಗಮಕಾರ ಅಥವಾ ಮಧ್ಯವರ್ತಿ ಮಾದರಿಗಳ ಅಡಿಯಲ್ಲಿ ಕಲ್ಪಿಸಲಾದ ಚಟುವಟಿಕೆಗಳನ್ನು ಕೈಗೊಳ್ಳುವುದಿಲ್ಲ" ಎಂದು ಹೇಳಿದರು.
ಪಿಗ್ಮಿ ಏಜೆಂಟರನ್ನು ವ್ಯವಹಾರ ಸುಗಮಕಾರರ ವರ್ಗಕ್ಕೆ ಕೃತಕವಾಗಿ ವರ್ಗಾಯಿಸುವ ಪ್ರಯತ್ನವು ಮೂಲಭೂತವಾಗಿ ದೋಷಪೂರಿತವಾಗಿದೆ. ಇದು ನ್ಯಾಯಾಂಗ ಪರಿಶೀಲನೆಯನ್ನು ತಡೆದುಕೊಳ್ಳಲು ಸಾಧ್ಯವಾಗದ ತಪ್ಪು ನಿರೂಪಣೆಯಾಗಿದೆ ಎಂದು ಹೇಳಿದ್ದಲ್ಲದೆ, ಪಿಗ್ಮಿ ಏಜೆಂಟರುಗಳಿಗೆ ಜಿಎಸ್ಟಿ ಅನ್ವಯಿಸಬಾರದು ಎಂದು ಆದೇಶಿಸಿ ತೀರ್ಪು ನೀಡಿದೆ.
In a significant ruling, the Karnataka High Court has held that pigmy agents (deposit collectors) are not intermediaries but employees of banks, and therefore, Goods and Services Tax (GST) cannot be levied on the salaries paid to them.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm