ಈಶ್ವರಪ್ಪ ಹಲಾಲ್ ಆಗಿದ್ದಾರೆ,  ಬಿಜೆಪಿಯಲ್ಲಿ ಹಲಾಲ್ ಆಗಲು ಹಲವರು ಸರದಿಯಲ್ಲಿದ್ದಾರೆ ; ಸತೀಶ್ ಜಾರಕಿಹೊಳಿ ವ್ಯಂಗ್ಯ 

16-04-22 05:03 pm       HK Desk news   ಕರ್ನಾಟಕ

ಬಿಜೆಪಿಯಿಂದ ಮೊಟ್ಟಮೊದಲಿಗೆ ಹಲಾಲ್ ಆದ ವ್ಯಕ್ತಿ ಕೆ.ಎಸ್ ಈಶ್ವರಪ್ಪ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. 

ಬೆಳಗಾವಿ, ಎ.16 : ಬಿಜೆಪಿಯಿಂದ ಮೊಟ್ಟಮೊದಲಿಗೆ ಹಲಾಲ್ ಆದ ವ್ಯಕ್ತಿ ಕೆ.ಎಸ್ ಈಶ್ವರಪ್ಪ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. 

ಬಿಜೆಪಿಯವರು ಹಲಾಲ್ ಬಗ್ಗೆ ಬಹಳಷ್ಟು ಗುಲ್ಲು ಎಬ್ಬಿಸಿದರು. ಹಲಾಲ್ ಹೆಸರಲ್ಲಿ ಕೆಲವರಿಗೆ ಬಹಿಷ್ಕಾರ ಹಾಕಲು ಮುಂದಾದ್ರು. ಈಗ ಅವರಲ್ಲಿಯೇ ಹಲಾಲ್ ಆಗುತ್ತಿದ್ದಾರೆ. ಬಿಜೆಪಿಯಲ್ಲಿ ಹಲಾಲ್ ಆಗಲು ಇನ್ನೂ ಬಹಳಷ್ಟು ಜನರ ಸರದಿಯಲ್ಲಿದ್ದಾರೆ‌. ಹಲಾಲ್ ಅಂದರೆ ಬಲಿ ಕೊಡೋದು ಎಂದಲ್ಲವೇ ಎಂದು ಮರು ಪ್ರಶ್ನೆ ಹಾಕಿಕೊಂಡರು ಸತೀಶ್ ಜಾರಕಿಹೊಳಿ. 

ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಆಗಿದೆ. ಇನ್ನೂ ಅನೇಕ ಸಚಿವರು ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದಾರೆ. ಸರ್ಕಾರದಲ್ಲಿ ಶೇ.40 ಕಮಿಷನ್ ಕಾರಣಕ್ಕೆ ಈಗ ಬಲಿ ಬಿದ್ದಿದೆ. ಕೇವಲ ರಾಜೀನಾಮೆ ಅಲ್ಲ, ಬಂಧನ ಆಗೋ ವರೆಗೂ ಕಾಂಗ್ರೆಸ್ ಹೋರಾಟ ನಡೆಸಲಿದೆ. ಒಬ್ಬ ಗುತ್ತಿಗೆದಾರ ವ್ಯಕ್ತಿ ತನ್ನ ಸಾವಿಗೆ ಕೆ. ಎಸ್ ಈಶ್ವರಪ್ಪ ಕಾರಣ ಎಂದು ಹೇಳಿ ಸಾವು ಕಂಡಿದ್ದಾರೆ. ಇದಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

KPCC president Satish Jarakihioli jokes that Ishwarappa was a halal person before he left the BJP.Speaking to the media, Ishwarappa was the first victim of Halal from the BJP. There are many more people turning to Halal. In the case of Kovid is thousands of crores of corruption. Many ministers will fall victim to corruption. There is a 40 per cent commission in the state government. Not just resigning, Eshwarappa made it clear that the struggle would continue till his arrest.