ಬ್ರೇಕಿಂಗ್ ನ್ಯೂಸ್
06-08-25 11:23 am Mangalore Correspondent ಕ್ರೈಂ
ಮಂಗಳೂರು, ಆ.6 : ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ನಮೂನೆಯಲ್ಲಿ ವಂಚಿಸುವುದಕ್ಕೆ ದಾರಿ ಹುಡುಕುತ್ತಿದ್ದಾರೆ. ಜನರನ್ನು ಯಾಮಾರಿಸಿ ಆಧುನಿಕ ತಂತ್ರಜ್ಞಾನ ಬಳಸಿ ಪೊಲೀಸರ ಕೈಗೂ ಸಿಗದಂತೆ ತಮ್ಮ ಕೃತ್ಯ ಎಸಗುತ್ತಿದ್ದಾರೆ. ಕೊರಿಯರ್ ಸಂಸ್ಥೆಯ ಹೆಸರಿನಲ್ಲಿ ಮೊಬೈಲ್ ಕರೆ ಮಾಡಿಯೂ ನಿಮ್ಮನ್ನು ಯಾಮಾರಿಸಿ ಮೊಬೈಲ್ ಸಂಖ್ಯೆಯನ್ನೇ ಹ್ಯಾಕ್ ಮಾಡಿ ಹಣ ಕಿತ್ತುಕೊಳ್ಳುವುದು ಹೊಸ ರೀತಿಯ ವಂಚನೆ ಎನ್ನೋ ವಿಚಾರ ಬೆಳಕಿಗೆ ಬಂದಿದೆ.
ಕೊರಿಯರ್ ಹೆಸರಲ್ಲಿ ಕರೆ ಮಾಡಿದವರು ಬ್ಯಾಂಕ್ ಡಾಕ್ಯುಮೆಂಟ್, ಎಲ್ಐಸಿ ದಾಖಲೆ ಕೊರಿಯರ್ ಬಂದಿದೆ, ಅಡ್ರೆಸ್ ಅದರಲ್ಲಿ ಸಮರ್ಪಕವಾಗಿಲ್ಲ ಇತ್ಯಾದಿ ಹೇಳುತ್ತಾರೆ. ಕೊರಿಯರ್ ಹುಡುಗ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದಾನೆ. ಆತನ ನಂಬರ್ ಹಾಕುತ್ತೇನೆ. ಆತನಿಗೆ ಕರೆ ಮಾಡಿ ಅಡ್ರಸ್ ಹೇಳಿ ಎಂದಷ್ಟೇ ಹೇಳಿ ಕರೆ ಕಡಿತ ಮಾಡುತ್ತಾರೆ. ಕೊರಿಯರ್ ಕಂಪನಿ ಹೆಸರಲ್ಲಿ ಕರೆ ಬಂದಿದ್ದನ್ನು ಸತ್ಯವೆಂದೇ ನಂಬಿ ಆತ ಕೊಟ್ಟ ಮೊಬೈಲ್ ನಂಬರ್ಗೆ ಕರೆ ಮಾಡಿದರೆ ನಮ್ಮ ಮೊಬೈಲ್ ಹ್ಯಾಕ್ ಆಗುತ್ತದೆ.
ರಾಜ್ಯದಲ್ಲಿ ಈ ರೀತಿ ಹೊಸ ನಮೂನೆಯಲ್ಲಿ ಕರೆ ಮಾಡಿ ಮೊಬೈಲ್ ಹ್ಯಾಕ್ ಮಾಡಿ ಹಣ ಕಿತ್ತುಕೊಳ್ಳುವುದು, ಜನರನ್ನು ಯಾಮಾರಿಸಿದ ಘಟನೆಗಳು ನಡೆದಿದ್ದು ನಾನಾ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿವೆ. ಈ ರೀತಿ ಅಪರಿಚಿತನ ಮಾತು ನಂಬಿ ಕರೆ ಮಾಡಿದವರ ಮೊಬೈಲನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಮೊಬೈಲ್ ಸಂಪರ್ಕ ಲಿಸ್ಟ್ನಲ್ಲಿರುವ ಎಲ್ಲರಿಗೂ ಸೈಬರ್ ವಂಚಕರು ವಾಟ್ಸ್ ಆ್ಯಪ್ ಮೂಲಕ ತುರ್ತು ಹಣ ಬೇಕೆಂದು ವಿನಂತಿ ಕಳುಹಿಸಿದ್ದಾರೆ. ಅದರಲ್ಲಿ ಗೂಗಲ್ ಪೇ ನಂಬರ್ ಕೂಡ ನೀಡಿದ್ದು, ಕೆಲವರು ಆ ನಂಬರ್ಗೆ ಹಣ ಕಳುಹಿಸಿ ವಂಚನೆಗೂ ಒಳಗಾಗಿದ್ದಾರೆ. ಇದೊಂದು ಹೊಸ ಮಾದರಿಯ ವಂಚನೆಯಾಗಿದ್ದು ಜನರು ಜಾಗೃತರಾಗಬೇಕಾಗಿದೆ.
ಸೈಬರ್ ವಂಚಕರು ದಿನಕ್ಕೊಂದು ಮಾದರಿಯಲ್ಲಿ ಸಂದೇಶ ಕಳುಹಿಸಿ ಜನರನ್ನು ಯಾಮಾರಿಸಲು ನೋಡುತ್ತಾರೆ. ಆಮೂಲಕ ಉತ್ತರ ಭಾರತ ಅಥವಾ ವಿದೇಶದ ಎಲ್ಲೋ ಮೂಲೆಯಲ್ಲಿ ಕುಳಿತು ಕೋಟ್ಯಂತರ ರೂ. ವಂಚನೆ ಎಸಗುತ್ತಿದ್ದಾರೆ. ಪ್ರತಿನಿತ್ಯ ಇದೇ ರೀತಿ ಹತ್ತಾರು ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗುತ್ತಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ.
ಸೈಬರ್ ವಂಚಕರು ತಮ್ಮ ವಹಿವಾಟು ಮಾಡೋದಕ್ಕಾಗಿಯೇ ನಕಲಿ ಬ್ಯಾಂಕ್ ಖಾತೆ ಮಾಡಿಸಿ, ಅದರಲ್ಲೇ ವ್ಯವಹರಿಸುತ್ತಾರೆ. ಸೈಬರ್ ವಂಚನೆಯ ಹಣ ವರ್ಗಾವಣೆಯಾದ ಕೆಲವೇ ಕ್ಷಣದಲ್ಲಿ ಆ ಖಾತೆಯಿಂದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ ಮತ್ತು ಅದಕ್ಕೆ ಬಳಸಿರುವ ಮೊಬೈಲ್ ಸಿಮ್, ಮೊಬೈಲ್ಗಳನ್ನೂ ನಾಶ ಮಾಡುತ್ತಾರೆ. ಇದರಿಂದಾಗಿ ಅವರ ಸಂಪರ್ಕ ದಾರಿಗಳನ್ನೇ ಮುಚ್ಚಿ ತಮ್ಮ ನೈಜತೆತನ್ನು ಮರೆ ಮಾಚುತ್ತಾರೆ. ಹೀಗಾಗಿ ಆಧುನಿಕ ಸೈಬರ್ ವಂಚಕರನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ಸವಾಲಾಗಿದೆ.
ಸಿಬಿಐ ಅಧಿಕಾರಿಗಳೆಂದು ಫೋನ್ ಮಾಡಿ ಬೆದರಿಸುವುದು, ಷೇರ್ ಮಾರ್ಕೆಟ್- ಟ್ರೇಡಿಂಗ್ ಹೆಸರಲ್ಲಿ ಮೋಸ, ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಆಸೆ ಹುಟ್ಟಿಸಿ ವಂಚನೆ, ನಕಲಿ ಕಸ್ಟಮರ್ ಕೇರ್ ಹೆಸರಲ್ಲಿ ಕರೆ ಮಾಡಿ ಯಾಮಾರಿಸಿ ವಂಚನೆ, ಕಡಿಮೆ ಬಡ್ಡಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಬ್ಲಾಕ್ಮೇಲ್ ಮಾಡುವ ಲೋನ್ ಏಪ್ಗಳು, ಓಎಲ್ಎಕ್ಸ್ ಆ್ಯಪ್ ಹೆಸರಲ್ಲಿ ವಂಚನೆ, ದೊಡ್ಡ ಮೊತ್ತದ ಗಿಫ್ಟ್ ಕಳಿಸುವ ನೆಪದಲ್ಲಿ ಮೋಸ, ಸರ್ಕಾರದ ಯೋಜನೆಗಳ ನೆಪದಲ್ಲಿ ಎಪಿಕೆ ಫೈಲ್ ಕಳಿಸಿ ಮೊಬೈಲ್ ಹ್ಯಾಕ್ ಮಾಡೋದು, ನಕಲಿ ಆನ್ಲೈನ್ ಗೇಮಿಂಗ್ ಆ್ಯಪ್ ಗಳಲ್ಲಿಯೂ ಸೈಬರ್ ವಂಚನೆಗಳಾಗುತ್ತಿದ್ದು ದಿನವೂ ಪೊಲೀಸ್ ಕೇಸುಗಳಾಗುತ್ತಿದ್ದರೂ ವಿದ್ಯಾವಂತರೇ ಮೋಸ ಹೋಗುತ್ತಿದ್ದಾರೆ.
ಸಂಶಯ ಬಂದಲ್ಲಿ ಸೈಬರ್ ಠಾಣೆಗೆ ಮಾಹಿತಿ ನೀಡಿ
ವಂಚನೆ ಪ್ರಕರಣ ನಡೆದ ಒಂದು ಗಂಟೆ ಅವಧಿ (ಗೋಲ್ಡನ್ ಟೈಮ್)ಯಲ್ಲಿ ಯಾವುದೇ ಹತ್ತಿರದ ಪೊಲೀಸ್ ಠಾಣೆ, ಸೈಬರ್ ಠಾಣೆಗೆ ಅಥವಾ 1930 ನಂಬರ್ಗೆ ಕರೆ ಮಾಡಿ ದೂರು ನೀಡಬಹುದು. ಅಪರಿಚಿತನ ಕರೆಯ ಬಗ್ಗೆ ಸಂಶಯ ಬಂದರೂ ಸೈಬರ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೇಳಬಹುದು. ಮಂಗಳೂರು ನಗರ ಸೈಬರ್ ಠಾಣೆಯನ್ನು ಯಾವುದೇ ಸಾರ್ವಜನಿಕರು ಸಂಪರ್ಕಿಸಿ (0824-22208000) ದೂರು ಅಥವಾ ಮಾಹಿತಿ ಕೇಳಬಹುದು. ಮಂಗಳೂರು ಸಿಇಎನ್ ವಿಭಾಗ ಸಹಾಯಕ ಪೊಲೀಸ್ ಆಯುಕ್ತರು(6362806114) ಅಥವಾ ಪೊಲೀಸ್ ನಿರೀಕ್ಷಕರು (9480802341) ಅವರನ್ನೂ ಸಂಪರ್ಕ ಮಾಡಬಹುದು.
Cybercriminals are constantly inventing new methods to deceive the public, using modern technology to carry out their crimes without being easily traced. A new type of cyber fraud has come to light in which simply calling an unknown number shared over the phone can lead to mobile hacking and financial loss.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm