ಸಮಾಜದ ನೆಮ್ಮದಿ ಕೆಡಿಸುವ ಪಿಎಫ್ಐ ಸಂಘಟನೆಯನ್ನು ಮುಸ್ಲಿಮರು ಬಹಿಷ್ಕರಿಸಬೇಕು ; ಎಸ್ಸೆಸ್ಸೆಫ್ ಕರೆ 

26-05-22 10:26 pm       HK News Desk   ದೇಶ - ವಿದೇಶ

ನಾಡಿನ‌ ಸೌಹಾರ್ದತೆಯನ್ನು ಧ್ವಂಸ ಮಾಡುವ ಕಾರ್ಯಾಚರಣೆ, ಭಾಷಣ, ಘೋಷಣೆಗಳನ್ನು ಕೂಗಿ ನಾಗರಿಕ ಸಮಾಜದ ನೆಮ್ಮದಿಯನ್ನು ಕೆಡಿಸುವ ಸಮಾಜದ್ರೋಹಿ ಸಂಘಟನೆಗಳನ್ನು ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ಜಾಫರ್ ಹೇಳಿದ್ದಾರೆ.

ಕಲ್ಲಿಕೋಟೆ, ಮೇ 26 : ನಾಡಿನ‌ ಸೌಹಾರ್ದತೆಯನ್ನು ಧ್ವಂಸ ಮಾಡುವ ಕಾರ್ಯಾಚರಣೆ, ಭಾಷಣ, ಘೋಷಣೆಗಳನ್ನು ಕೂಗಿ ನಾಗರಿಕ ಸಮಾಜದ ನೆಮ್ಮದಿಯನ್ನು ಕೆಡಿಸುವ ಸಮಾಜದ್ರೋಹಿ ಸಂಘಟನೆಗಳನ್ನು ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ಜಾಫರ್ ಹೇಳಿದ್ದಾರೆ.

ಕಲ್ಲಿಕೋಟೆಯಲ್ಲಿ ನಡೆದ ಎಸ್ ಎಸ್ ಎಫ್ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಆಲಪ್ಪುಝದಲ್ಲಿ ಸಣ್ಣ ಪ್ರಾಯದ ಬಾಲಕ ಕೊಲೆ ಬೆದರಿಕೆಯ ಘೋಷಣೆ ಕೂಗಿರುವುದು ಆತಂಕಕಾರಿ ಬೆಳವಣಿಗೆ. ಈ ರೀತಿಯ ಘೋಷಣೆಗಳನ್ನು ಶಾಂತಿ, ಸೌಹಾರ್ದ ಬಯಸುವ ಪ್ರಜ್ಞಾವಂತ ಜನತೆ ವಿರೋಧಿಸುವಾಗ, ಆ ಕೃತ್ಯ ಮಹತ್ವದ ಕಾರ್ಯವೆಂಬಂತೆ ಬಿಂಬಿಸಿ ಸಮರ್ಥನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಂಗ ಪ್ರವೇಶ ಮಾಡಿದೆ. ಸಣ್ಣ ಪ್ರಾಯದ ಮಕ್ಕಳ ಮನಸ್ಸಿಗೆ ಸ್ನೇಹ ಸಂದೇಶಗಳನ್ನು ಕಲಿಸುವ ಬದಲು ದ್ವೇಷದ ಬೀಜ ಬಿತ್ತುವ ರಾಜಕೀಯ ನೀತಿ ಮಾನವತೆಯ ವಿರೋಧಿ ಎಂದು ಹೇಳಿದರು. 

​​​​​​​

ಇಸ್ಲಾಂ ಧರ್ಮದ ಬಗ್ಗೆ ಜನತೆ ತಪ್ಪು ಕಲ್ಪನೆ ಇಡುವ ರೀತಿಯಲ್ಲಿ ಕಾರ್ಯಾಚರಣೆ ಮಾಡುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಬೆಂಬಲಿಸದೆ ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕು ಎಂದವರು ಕರೆ ನೀಡಿದರು.

ಎಸ್ ಎಸ್ ಎಫ್ ಕೇರಳ ರಾಜ್ಯಾಧ್ಯಕ್ಷ ಕೆ.ವೈ.ನಿಝಾಮುದ್ದೀನ್ ಫಾಳಿಲಿ ಅಧ್ಯಕ್ಷತೆ ವಹಿಸಿದ್ದರು.
ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಗಳಾದ ಹಾಮಿದಲಿ ಸಖಾಫಿ, ನಿಯಾಝ್, ಕೆ.ಬಿ.ಬಶೀರ್ ಉಪಸ್ಥಿತರಿದ್ದರು.

Mangalore Muslims should ban PFI organisation slams SSF.