ಬ್ರೇಕಿಂಗ್ ನ್ಯೂಸ್
18-05-26 02:18 pm HK News Staffer ದೇಶ - ವಿದೇಶ
ನವದೆಹಲಿ, ಮೇ 18: ಆಫ್ರಿಕಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಓ) ಅಂತಾರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಕಾಂಗೋದಲ್ಲಿ ಎಬೋಲಾ ಕಾಣಿಸಿಕೊಂಡಿರುವ ಇತುರಿ ಎಂಬಲ್ಲಿಯಿಂದ ಸುಮಾರು 1000 ಕಿ.ಮೀ. ದೂರದಲ್ಲಿರುವ ರಾಜಾಧಾನಿ ಕಿನ್ನಾಸಾದಲ್ಲಿಯೂ ಒಂದು ಪ್ರಕರಣ ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಇತ್ತೀಚೆಗೆ ಇತುರಿ ಎಂಬಲ್ಲಿಗೆ ಭೇಟಿ ನೀಡಿದ್ದಾಗ ರೋಗ ಹರಡಿದೆ. ಇತುರಿ ಗಡಿಗೆ ಹೊಂದಿಕೊಂಡ ಉತ್ತರ ಕಿವು ಪ್ರಾಂತ್ಯದಲ್ಲಿಯೂ ಶಂಕಿತ ಪ್ರಕರಣಗಳು ವರದಿಯಾಗಿವೆ. ಒಂದು ತಿಂಗಳ ಅಂತರದಲ್ಲಿ ಕಾಂಗೋದಲ್ಲಿ 300ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಕಂಡುಬಂದಿದ್ದು, 88ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆಫ್ರಿಕಾದಲ್ಲಿ ಸೋಂಕು ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಎಬೋಲಾ ಸೋಂಕಿಗೆ ಕಾರಣವಾಗಿರುವ 'ಬುಂದಿಬುಗ್ಯೋ' ಎಂಬ ವೈರಸ್ ಅಪರೂಪದ ರೂಪಾಂತರವಾಗಿದ್ದು ಇದಕ್ಕೆ ಯಾವುದೇ ನಿಗದಿತ ಚಿಕಿತ್ಸೆ ಮತ್ತು ಲಸಿಕೆಗಳು ಇಲ್ಲ. ಕಾಂಗೋ ಮತ್ತು ಉಗಾಂಡಾಗಳಲ್ಲಿ ಈ ಹಿಂದೆ 20ಕ್ಕೂ ಹೆಚ್ಚು ಬಾರಿ ಎಬೋಲಾ ಉಲ್ಬಣಗೊಂಡಿದ್ದರೂ ಬುಂದಿಬುಗ್ಯೋ ಎನ್ನುವ ವಿಶೇಷ ಗುಣಲಕ್ಷಣದ ವೈರಸ್ ಪತ್ತೆಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. 2007-08ರಲ್ಲಿ ಎಬೋಲಾ ಉಲ್ಬಣಗೊಂಡಿದ್ದ ಅವಧಿಯಲ್ಲಿ ಉಗಾಂಡಾದ ಬುಂದಿಬುಗ್ಯೋ ಜಿಲ್ಲೆಯಲ್ಲಿ ಈ ವೈರಸ್ ರೂಪಾಂತರ ಪತ್ತೆಯಾಗಿತ್ತು. ಆಗ ಅದು 149 ಜನರಿಗೆ ಸೋಂಕು ಉಂಟು ಮಾಡಿ 37 ಜನರನ್ನು ಬಲಿ ಪಡೆದಿತ್ತು. ಆ ಬಳಿಕ 2012 ರಲ್ಲಿ ಕಾಂಗೋದ ಇಸಿರೋದಲ್ಲಿ ಪತ್ತೆಯಾಗಿತ್ತು. ಆಗ 29 ಜನರು ಮೃತಪಟ್ಟಿದ್ದರು. ಮೊದಲು ವೈರಸ್ ಪತ್ತೆಯಾದ ಜಾಗದ ಹೆಸರನ್ನೇ ಈ ವೈರಸಿಗೂ ಇಡಲಾಗಿತ್ತು.
ಕಾಂಗೋದಲ್ಲಿ ಕಳೆದ ಏಪ್ರಿಲ್ನಲ್ಲಿ ಎಬೋಲಾ ಸೋಂಕು ವ್ಯಾಪಕವಾಗಿ ಕಂಡುಬಂದಿತ್ತು. ಏಪ್ರಿಲ್ 27ರಂದು 59 ವರ್ಷದ ವ್ಯಕ್ತಿಯೊಬ್ಬರು ಎಬೋಲಾದಿಂದ ಮೃತಪಟ್ಟಿದ್ದರು. ಆ ಬಳಿಕ ಎಬೋಲಾ ಸೋಂಕು ಹರಡುತ್ತಿರುವುದು ಪತ್ತೆಯಾಗುವಷ್ಟರಲ್ಲಿ 50 ಜನರು ಮೃತಪಟ್ಟಿದ್ದರು. ಎಬೋಲಾ ಗುಣಲಕ್ಷಣ ಹೊಂದಿದ್ದ ಕನಿಷ್ಠ 4 ಆರೋಗ್ಯ ಕಾರ್ಯಕರ್ತರೂ ಮೃತಪಟ್ಟಿದ್ದಾರೆ.
ಎಬೋಲಾ ಸೋಂಕು ಕೋವಿಡ್ -19ರಂತೆ ಜಾಗತಿಕ ಸಾಂಕ್ರಾಮಿಕ ವೈರಸ್ ಅಲ್ಲ. ನಿಜವಾದ ಸೋಂಕಿತರ ಸಂಖ್ಯೆ ಮತ್ತು ಸೋಂಕು ಹರಡಿರುವ ಭೂಪ್ರದೇಶದ ವ್ಯಾಪ್ತಿಯ ಕುರಿತು ಅನಿಶ್ಚಿತತೆ ಇದೆ. ಹಾಗಾಗಿ ಅಂತಾರಾಷ್ಟ್ರೀಯ ಪ್ರಯಾಣ ಅಥವಾ ಗಡಿ ನಿರ್ಬಂಧಗಳನ್ನು ಹೇರದಂತೆ ವಿಶ್ವಸಂಸ್ಥೆಯ ಪ್ರಧಾನ ನಿರ್ದೆಶಕ ಟೆಡ್ರೋಸ್ ಗೆಬ್ರಿಯೇಶನ್ ಸಲಹೆ ನೀಡಿದ್ದಾರೆ
ಎಬೋಲಾ ಹೇಗೆ ಹರಡುತ್ತದೆ?
ಎಬೋಲಾ ಅತ್ಯಂತ ಸಾಂಕ್ರಾಮಿಕ ವೈರಸ್ ಸೋಂಕು ಆಗಿದ್ದು, ಇದು ಸೋಂಕಿತರ ರಕ್ತ, ವಾಂತಿ, ವೀರ್ಯ, ಬೆವರು ಮತ್ತು ದೇಹದ ಇತರ ಸ್ರವಿಸುವಿಕೆಗಳ ಮೂಲಕ ಇನ್ನೊಬ್ಬರಿಗೆ ಹರಡುತ್ತದೆ.
08-07-26 02:06 pm
HK News Staffer
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
ದೇಶದ 'ತೂಗುಸೇತುವೆಗಳ ಸರದಾರ' ಪದ್ಮಶ್ರೀ ಡಾ. ಗಿರೀಶ್...
07-07-26 10:52 am
ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ; ಯದುವೀರ್ ಒಡ...
06-07-26 04:40 pm
07-07-26 03:22 pm
HK News Staffer
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
ಚೀನಾ ಮಹಾಗೋಡೆ ಮಾದರಿಯಲ್ಲೇ ಆಫ್ರಿಕಾ ಮರುಭೂಮಿಯಲ್ಲಿ...
04-07-26 08:09 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 11:38 am
HK News Staffer
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm
Panambur Gold Robbery, Photo Released: ಚಿನ್ನದ...
06-07-26 12:28 pm