ಬ್ರೇಕಿಂಗ್ ನ್ಯೂಸ್
04-09-23 03:09 pm Source: News18 Kannada ಸಿನಿಮಾ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಒಳ್ಳೆ ಅಭಿಪ್ರಾಯ ಪಡೆದುಕೊಂಡಿದೆ. ಜನ ಕೂಡ ಥಿಯೇಟರ್ಗೆ ಬಂದು ಚಿತ್ರ ನೋಡ್ತಿದ್ದಾರೆ. ಚೆನ್ನಾಗಿಯೇ ಓಡ್ತಿರೋ ಈ ಚಿತ್ರದ ಸೈಡ್ ಬಿಯ ಒಂದಷ್ಟು ಫೋಟೋ ವೈರಲ್ ಆಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇವೇ ಫೋಟೋಗಳು ಹಬ್ಬ ಮಾಡ್ತಿವೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಮನು ಮತ್ತು ಪ್ರಿಯಾ ಪ್ರೀತಿ ಅಗಾಧವಾಗಿದೆ. ಚಿತ್ರದ ಕೊನೆಯಲ್ಲಿ ಇವರು ಮತ್ತೆ ಸೇರ್ತಾರಾ ಇಲ್ವಾ ಅನ್ನೋ ಅನ್ನು ಅನುಮಾನಭರಿತ ಕುತೂಹಲವೂ ಮೂಡಿದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್ ಬಿ ಎಲ್ಲಿ ಏನೆಲ್ಲ ಇರುತ್ತದೆ ಅನ್ನೋದು ಸಿನಿಮಾ ನೋಡಿದವ್ರಿಗೆ ತಿಳಿದಿದೆ. ಆದರೂ ಒಂದು ಕುತೂಹಲ ಇದೆ ನೋಡಿ. ಡೈರೆಕ್ಟರ್ ಹೇಮಂತ್ ರಾವ್ ತಮ್ಮ ಈ ಚಿತ್ರದಲ್ಲಿ ನಾಯಕ-ನಾಯಕಿ ಕೊನೆಯಲ್ಲಿ ಏನ್ ಆಗ್ತಾರೆ ಅನ್ನೋ ಕುತೂಹಲವನ್ನ ಸೈಡ್-ಎ ಕೊನೆಯಲ್ಲೂ ಬಿಟ್ಟುಕೊಟ್ಟಿಲ್ಲ ನೋಡಿ. ಡೈರೆಕ್ಟರ್ ಹೇಮಂತ್ ರಾವ್ ಜಾಣ್ಮೆಯಿಂದಲೇ ಚಿತ್ರದ ಕ್ಲೈಮ್ಯಾಕ್ಸ್ ಕುತೂಹಲ ಮುಂದುವರೆಸಿದ್ದಾರೆ. ಈ ಮೂಲಕ ಪ್ರೇಕ್ಷಕರು ಸೈಡ್-ಬಿ ಗಾಗಿಯೇ ಕಾಯುತ್ತಿದ್ದಾರೆ.




ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಸೈಡ್ ಬಿಯ ಒಂದಷ್ಟು ಫೋಟೋ ಈಗಲೇ ರಿವೀಲ್ ಆಗಿವೆ. ಈ ಫೊಟೋದಲ್ಲಿ ಮನು ಪಾತ್ರಧಾರಿ ರಕ್ಷಿತ್ ಶೆಟ್ಟಿ ಮತ್ತೆ ಸಣ್ಣ ಆಗಿದ್ದಾರೆ. ಜೈಲ್ನಲ್ಲಿದ್ದು ದಪ್ಪ ಆಗಿದ್ ಮನು ಇಲ್ಲಿ ಹ್ಯಾಪಿ ಹ್ಯಾಪಿಯಾಗಿಯೇ ಕಾಣಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಈ ಒಂದು ಫೋಟೋಗಳು ಒಟ್ಟು ಹೇಳೋದು ಒಂದೇ ಆಗಿದೆ. ಹೌದು, ಪ್ರಿಯಾ ಮತ್ತು ಮನು ಒಂದಾಗಿದ್ದಾರೆ. ಪ್ರಿಯಾ ಮದುವೆ ಆಗಿಲ್ಲ, ಆಕೆ ಮನುಗಾಗಿಯೇ ಕಾದಿದ್ದಾಳೆ. ಮನು ಬಂದ್ಮೇಲೆ ಜೊತೆಗೆ ಜೀವನ ಮಾಡ್ತಿದ್ದಾರೆ ಅನ್ನೋದೇ ಒಟ್ಟು ಚಿತ್ರಣ ಆಗಿದೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾ ಬರೋ ಅಕ್ಟೋಬರ್-20 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಮನು ಮತ್ತು ಪ್ರಿಯಾ ಅಸಲಿ ಕತೆ ರಿವೀಲ್ ಆಗುತ್ತದೆ. ಮನು ಮತ್ತು ಪ್ರಿಯಾ ಮತ್ತೆ ಒಂದಾದ್ರೇ ? ಮನು ಮತ್ತು ಪ್ರಿಯಾ ನಡುವೆ ಚೈತ್ರಾ ಪಾತ್ರ ಬಂದಿದ್ದು ಯಾಕೆ ? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಲಿದೆ.
Sandalwood Sapta Sagaradache Ello Movie side B Photo got Leak.
17-02-26 10:33 pm
HK News Desk
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
ಕಾಪಿರೈಟ್ ಕದನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ...
17-02-26 02:53 pm
ದಂಪತಿಗೆ ಎರಡನೇ ಪ್ರೆಗ್ನೆನ್ಸಿ ಫೋಟೋಶೂಟ್ ಸಡಗರ ; ಮೂ...
15-02-26 10:38 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
17-02-26 12:42 pm
Mangaluru Staffer
Mangalore Ullal Accident: ಉಳ್ಳಾಲ ; ಅತಿ ವೇಗದಿಂ...
16-02-26 11:13 pm
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
17-02-26 03:03 pm
HK News Desk
ದಾವಣಗೆರೆ ಬೆನ್ನಲ್ಲೇ ಮಂಗಳೂರು ಕೋರ್ಟಿಗೂ ಬೆದರಿಕೆ ಸ...
16-02-26 04:01 pm
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm