ಬ್ರೇಕಿಂಗ್ ನ್ಯೂಸ್
04-09-23 03:09 pm Source: News18 Kannada ಸಿನಿಮಾ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಒಳ್ಳೆ ಅಭಿಪ್ರಾಯ ಪಡೆದುಕೊಂಡಿದೆ. ಜನ ಕೂಡ ಥಿಯೇಟರ್ಗೆ ಬಂದು ಚಿತ್ರ ನೋಡ್ತಿದ್ದಾರೆ. ಚೆನ್ನಾಗಿಯೇ ಓಡ್ತಿರೋ ಈ ಚಿತ್ರದ ಸೈಡ್ ಬಿಯ ಒಂದಷ್ಟು ಫೋಟೋ ವೈರಲ್ ಆಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇವೇ ಫೋಟೋಗಳು ಹಬ್ಬ ಮಾಡ್ತಿವೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಮನು ಮತ್ತು ಪ್ರಿಯಾ ಪ್ರೀತಿ ಅಗಾಧವಾಗಿದೆ. ಚಿತ್ರದ ಕೊನೆಯಲ್ಲಿ ಇವರು ಮತ್ತೆ ಸೇರ್ತಾರಾ ಇಲ್ವಾ ಅನ್ನೋ ಅನ್ನು ಅನುಮಾನಭರಿತ ಕುತೂಹಲವೂ ಮೂಡಿದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್ ಬಿ ಎಲ್ಲಿ ಏನೆಲ್ಲ ಇರುತ್ತದೆ ಅನ್ನೋದು ಸಿನಿಮಾ ನೋಡಿದವ್ರಿಗೆ ತಿಳಿದಿದೆ. ಆದರೂ ಒಂದು ಕುತೂಹಲ ಇದೆ ನೋಡಿ. ಡೈರೆಕ್ಟರ್ ಹೇಮಂತ್ ರಾವ್ ತಮ್ಮ ಈ ಚಿತ್ರದಲ್ಲಿ ನಾಯಕ-ನಾಯಕಿ ಕೊನೆಯಲ್ಲಿ ಏನ್ ಆಗ್ತಾರೆ ಅನ್ನೋ ಕುತೂಹಲವನ್ನ ಸೈಡ್-ಎ ಕೊನೆಯಲ್ಲೂ ಬಿಟ್ಟುಕೊಟ್ಟಿಲ್ಲ ನೋಡಿ. ಡೈರೆಕ್ಟರ್ ಹೇಮಂತ್ ರಾವ್ ಜಾಣ್ಮೆಯಿಂದಲೇ ಚಿತ್ರದ ಕ್ಲೈಮ್ಯಾಕ್ಸ್ ಕುತೂಹಲ ಮುಂದುವರೆಸಿದ್ದಾರೆ. ಈ ಮೂಲಕ ಪ್ರೇಕ್ಷಕರು ಸೈಡ್-ಬಿ ಗಾಗಿಯೇ ಕಾಯುತ್ತಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಸೈಡ್ ಬಿಯ ಒಂದಷ್ಟು ಫೋಟೋ ಈಗಲೇ ರಿವೀಲ್ ಆಗಿವೆ. ಈ ಫೊಟೋದಲ್ಲಿ ಮನು ಪಾತ್ರಧಾರಿ ರಕ್ಷಿತ್ ಶೆಟ್ಟಿ ಮತ್ತೆ ಸಣ್ಣ ಆಗಿದ್ದಾರೆ. ಜೈಲ್ನಲ್ಲಿದ್ದು ದಪ್ಪ ಆಗಿದ್ ಮನು ಇಲ್ಲಿ ಹ್ಯಾಪಿ ಹ್ಯಾಪಿಯಾಗಿಯೇ ಕಾಣಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಈ ಒಂದು ಫೋಟೋಗಳು ಒಟ್ಟು ಹೇಳೋದು ಒಂದೇ ಆಗಿದೆ. ಹೌದು, ಪ್ರಿಯಾ ಮತ್ತು ಮನು ಒಂದಾಗಿದ್ದಾರೆ. ಪ್ರಿಯಾ ಮದುವೆ ಆಗಿಲ್ಲ, ಆಕೆ ಮನುಗಾಗಿಯೇ ಕಾದಿದ್ದಾಳೆ. ಮನು ಬಂದ್ಮೇಲೆ ಜೊತೆಗೆ ಜೀವನ ಮಾಡ್ತಿದ್ದಾರೆ ಅನ್ನೋದೇ ಒಟ್ಟು ಚಿತ್ರಣ ಆಗಿದೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾ ಬರೋ ಅಕ್ಟೋಬರ್-20 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಮನು ಮತ್ತು ಪ್ರಿಯಾ ಅಸಲಿ ಕತೆ ರಿವೀಲ್ ಆಗುತ್ತದೆ. ಮನು ಮತ್ತು ಪ್ರಿಯಾ ಮತ್ತೆ ಒಂದಾದ್ರೇ ? ಮನು ಮತ್ತು ಪ್ರಿಯಾ ನಡುವೆ ಚೈತ್ರಾ ಪಾತ್ರ ಬಂದಿದ್ದು ಯಾಕೆ ? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಲಿದೆ.
Sandalwood Sapta Sagaradache Ello Movie side B Photo got Leak.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm