ಬ್ರೇಕಿಂಗ್ ನ್ಯೂಸ್
26-06-21 12:18 pm Meghashree Devaraju, BoldSky Kannada ಡಾಕ್ಟರ್ಸ್ ನೋಟ್
ಸಿಹಿಖಾದ್ಯಗಳು ಯಾರಿಗೆ ತಾನೆ ಇಷ್ಟ ಇಲ್ಲ. ಎಂಥವರೂ ಸಹ ರುಚಿಕರ ಸಿಹಿತಿಂಡಿಗಳನ್ನು ಚಪ್ಪರಿಸಿ ಸವಿಯುತ್ತಾರೆ, ಆದರೆ ಆರೋಗ್ಯದ ವಿಷಯಕ್ಕೆ ಬಂದರೆ ಮಧುಮೇಹ, ಇತರೆ ಕಾಯಿಲೆಗಳ ಭಯದಿಂದ ಸಕ್ಕರೆಯನ್ನು ಕಡಿಮೆ ಸೇವಿಸಿ ಎಂದು ವೈದ್ಯರು ಹೇಳುವುದುಂಟು.
ನಾವು ಸಹ ನಮ್ಮ ಆರೋಗ್ಯಕ್ಕೆ ಉತ್ತಮವಾದದನ್ನು ಆರಿಸಿಕೊಳ್ಳಲು ಬಯಸುತ್ತೇವೆ. ನಿಮ್ಮ ಆರೋಗ್ಯವೂ ಉತ್ತಮವಾಗಿರಲೆಂದು ಭಾವಿಸಿ ನೀವು ಸಹ ಬಿಳಿ ಸಕ್ಕರೆಯಿಂದ ಕಂದು ಸಕ್ಕರೆಗೆ ಬದಲಾಯಿಸಿದ್ದರೆ, ಇದರ ಬಗ್ಗೆ ಇನ್ನಷ್ಟು ಈ ಲೇಖನವನ್ನು ಓದಬೇಕು.
ಕಂದು ಸಕ್ಕರೆ ಬಿಳಿ ಸಕ್ಕರೆಗಿಂತ ನಿಜವಾಗಿಯೂ ಉತ್ತಮವೇ ಅಥವಾ ಕಂದು ಸಕ್ಕರೆಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಬಿಳಿ ಸಕ್ಕರೆಗಿಂತ ಅದು ಎಷ್ಟು ಭಿನ್ನವಾಗಿದೆ ಎಂದು ತಿಳಿಯಲು ಮುಂದೆ ಓದಿ.

ಕಂದು ಸಕ್ಕರೆಯನ್ನು ಹೇಗೆ ತಯಾರಿಸುತ್ತಾರೆ?
ಬಿಳಿ ಸಕ್ಕರೆಯಂತೆಯೇ ಕಂದು ಸಕ್ಕರೆಯನ್ನು ತಯಾರಿಸುವ ಪ್ರಕ್ರಿಯೆ ಇರುತ್ತದೆ. ಆದ್ದರಿಂದ, ಕಂದು ಸಕ್ಕರೆ ಬಿಳಿ ಬಣ್ಣಕ್ಕಿಂತ ಉತ್ತಮವಾಗಿದೆ ಎಂಬುದು ಸುಳ್ಳು. ಸಂಸ್ಕರಿಸಿದ ಸಕ್ಕರೆ ಹರಳುಗಳನ್ನು ಕಬ್ಬಿನ ಮೊಲಾಸ್ಗಳೊಂದಿಗೆ ಬೆರೆಸಿ ಬ್ರೌನ್ ಸಕ್ಕರೆಯನ್ನು ತಯಾರಿಸಲಾಗುತ್ತದೆ. ಶೇಕಡಾ 95ರಷ್ಟು ಸಂಸ್ಕರಿಸಿದ ಸಕ್ಕರೆಯನ್ನು 5ರಷ್ಟು ಮೊಲಾಸ್ಗಳೊಂದಿಗೆ ಬೆರೆಸಲಾಗುತ್ತದೆ. ಕಬ್ಬಿನ ಮೊಲಾಸಸ್ ಸಕ್ಕರೆಗೆ ವಿಶಿಷ್ಟ ಕಂದು ಬಣ್ಣ ಮತ್ತು ಮೃದುತ್ವವನ್ನು ನೀಡುತ್ತದೆ.

ಕಂದು ಸಕ್ಕರೆ v/s ಬಿಳಿ ಸಕ್ಕರೆ
ಕಂದು ಸಕ್ಕರೆ ಮತ್ತು ಬಿಳಿ ಸಕ್ಕರೆ ಎರಡರಲ್ಲೂ ಕ್ಯಾಲೋರಿ ಹೋಲಿಕೆ ಬಂದಾಗ, ಕಂದು ಸಕ್ಕರೆಯು ಬಿಳಿ ಸಕ್ಕರೆಗಿಂತ ಶೇಕಡಾ 0.25 ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸರಳವಾಗಿ ಹೇಳುವುದಾದರೆ, ಕಂದು ಸಕ್ಕರೆ ಮೊಲಾಸಸ್ ಸಿರಪ್ನಿಂದ ಲೇಪಿತವಾದ ಬಿಳಿ ಸಕ್ಕರೆಯಾಗಿದೆ. ಕಂದು ಸಕ್ಕರೆಯು ಬಿಳಿ ಸಕ್ಕರೆಗಿಂತ ಹೆಚ್ಚಿನ ಖನಿಜಗಳನ್ನು ಹೊಂದಿದ್ದರೂ, ಈ ಖನಿಜಗಳ ಪ್ರಮಾಣವು ತುಂಬಾ ಕಡಿಮೆಯಾಗಿದ್ದು, ಇದರಿಂದ ನೀವು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಿಲ್ಲ. ಕಂದು ಸಕ್ಕರೆಯಲ್ಲಿ ಮೊಲಾಸಸ್ ಇರುವುದರಿಂದ, ಇದು ಸ್ವಲ್ಪ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಬೇಯಿಸಿದ ಸಿಹಿತಿಂಡಿಗಳಿಗೆ ಇದು ಸೂಕ್ತವಾಗಿರುತ್ತದೆ.

ಆರೋಗ್ಯಕರ ಸಿಹಿಕಾರಕಗಳು
ನಿಮ್ಮ ಆಹಾರ ಪದ್ಧತಿಯಿಂದ ಸಕ್ಕರೆಯನ್ನು ಬಿಡುವ ಅಥವಾ ತಿನ್ನದೇ ಇರುವ ಬಗ್ಗೆ ಯೋಜಿಸುತ್ತಿದ್ದರೆ ಇದು ಉತ್ತಮ ಅಭ್ಯಾಸ. ಸಕ್ಕರೆಯ ಬದಲಿಗೆ ಮಾರುಕಟ್ಟೆಯಲ್ಲಿ ಹಲವಾರು ಆರೋಗ್ಯಕರ ಪದಾರ್ಥಗಳಿವೆ. ನೀವು ಸ್ಟೀವಿಯಾ ಅಥವಾ ತೆಂಗಿನಕಾಯಿ ಸಕ್ಕರೆಯನ್ನು ಆರಿಸಿಕೊಳ್ಳಬಹುದು. ಇದು ರುಚಿಕರ ಮತ್ತು ನೋಡಲು ಸಹ ಸಕ್ಕರೆಯಂತೆ ಕಾಣುತ್ತದೆ. ಅಲ್ಲದೇ, ಮ್ಯಾಪಲ್ ಸಿರಪ್, ಜೇನುತುಪ್ಪ ಮತ್ತು ಭೂತಾಳೆ ಮಕರಂದ ನಿಮ್ಮ ಆಹಾರದಲ್ಲಿ ಸಕ್ಕರೆಯನ್ನು ಬದಲಿಸುವ ಕೆಲವು ಆಯ್ಕೆಗಳಾಗಿವೆ. ಬಿಳಿ ಸಕ್ಕರೆಯಿಂದ ಬದಲಾಯಿಸುವಾಗ ತೆಗೆದುಕೊಳ್ಳಲು ಉತ್ತಮ ಆಯ್ಕೆ ಶಕ್ಕರ್. ಆರ್ಗಾನಿಕ್ ಸಕ್ಕರೆ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು ಮತ್ತು ಕಬ್ಬಿಣದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಿಹಿತಿಂಡಿ ಅಥವಾ ಪಾನೀಯಗಳನ್ನು ಸಿಹಿಗೊಳಿಸಲು ಬೆಲ್ಲವನ್ನು ಸಹ ಬಳಸಬಹುದು.

ನೆನಪಿಡಿ
ನೀವು ಯಾವುದೇ ಆಹಾರ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಹಾನಿ, ಸ್ವಲ್ಪ ಸೇವಿಸಿದರೆ ಹಾನಿ ಇಲ್ಲ ಎಂಬುದು ಸುಳ್ಳು. ಇನ್ನೊಂದು ಮೂಲದ ಪ್ರಕಾರ ಯಾವುದೇ ಆಹಾರವನ್ನು ಮಿತವಾಗಿ, ಮನಸ್ಸಿನಿಂದ ಬಳಸುವುದು ಉತ್ತಮ. ಸಾಧ್ಯವಾದಷ್ಟು ಸಕ್ಕರೆ ಬದಲಿಗೆ, ಜೇನುತುಪ್ಪ, ಬೆಲ್ಲ, ಆರ್ಗಾನಿಕ್ ಸಕ್ಕರೆ, ಮೇಪಲ್ ಸಿರಪ್ ಬಳಸಿ. ಆಗಿರಲಿ ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ನಿಮ್ಮ ಬಳಕೆ ಮಧ್ಯಮವಾಗಿ ಇರುವವರೆಗೆ, ನಿಮ್ಮ ಆಯ್ಕೆಯ ಸಿಹಿಕಾರಕದೊಂದಿಗೆ ಹೋಗುವುದು ಒಳ್ಳೆಯದು.'
(Kannada Copy of Boldsky Kannada)
09-09-26 10:52 am
HK News Staffer
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
09-09-26 03:29 pm
HK News Staffer
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆ...
08-09-26 05:20 pm
ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್...
08-09-26 03:50 pm
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
09-09-26 12:16 pm
HK News Staffer
ಸೌದಿ ಅರೇಬಿಯಾದಲ್ಲಿ ಕುತ್ತಾರಿನ ಯುವಕ ದಿಢೀರ್ ಸಾವು...
08-09-26 09:19 pm
ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ; ಪೊಲೀಸ...
08-09-26 08:45 pm
ಪುತ್ತೂರು ಜನಸೇವಾ ಕೇಂದ್ರ ಗಲಾಟೆ ಪ್ರಕರಣ: ಪೊಲೀಸರ ಕ...
08-09-26 02:26 pm
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm