ಬ್ರೇಕಿಂಗ್ ನ್ಯೂಸ್
21-07-21 01:45 pm Reena TK, BoldSky Kannada ಡಾಕ್ಟರ್ಸ್ ನೋಟ್
ಕಿವಿಯಲ್ಲಿ ಫಂಗಸ್ ಆಗುವುದು ಇಯರ್ ಫಂಗಲ್ ಇನ್ಫೆಕ್ಷನ್ ಅನೇಕರನ್ನು ಕಾಡುವ ಕಿವಿಯ ಸಮಸ್ಯೆಯಾಗಿದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ otomycosis (ಒಟೊಮೈಕೋಸಿಸ್) ಎಂದು ಕರೆಯಲಾಗುವುದು.
ಕಿವಿಯ ಫಂಗಸ್ ಸೋಂಕು ಎಂದರೇನು? ಲಕ್ಷಣಗಳೇನು, ಯಾರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುವುದು, ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ:
ಕಿವಿಯಲ್ಲಿ ಫಂಗಸ್ ಸಮಸ್ಯೆ ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು
* ಕಿವಿಯಲ್ಲಿ ಒಂಥರಾ ತುರಿಕೆ ಕಂಡು ಬರುವುದು. ತುಂಬಾ ಹೆಚ್ಚಾದರೆ ನೋವು ಕಂಡು ಬರುವುದು.
* ಕಿವಿಯ ಒಳಭಾಗದ ಸಿಪ್ಪೆ ಏಳುವುದು
* ಕಿವಿಯಲ್ಲಿ ಗುಗ್ಗೆ ತುಂಬಾ ಇರದಿದ್ದರೂ ಕಿವಿಯಲ್ಲಿ ತುಂಬಾ ತುರಿಕೆ, ಕಿರಿಕಿರಿ ಉಂಟಾಗುವುದು.
* ಊತ * ಕಿವಿ ಒಳಗ್ಗೆ ಕೆಂಪಾಗುವುದು
* ಕಿವಿ ಬಂದ್ ಆದಂತೆ ಅನಿಸುವುದು
* ಕೇಳುವುದಕ್ಕೆ ತೊಂದರೆ
ಯಾರಿಗೆ ಫಂಗಲ್ ಇಯರ್ ಇನ್ಫೆಕ್ಷನ್ ಸೋಂಕು ಬರುತ್ತದೆ?
ಉಷ್ಣವಲಯದಲ್ಲಿ ವಾಸಿಸುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಅಲ್ಲದೆ ವಾಟರ್ ಸ್ಪೋರ್ಟ್ಸ್ನಲ್ಲಿ ಇರುವವರಿಗೆ, ಸ್ವಿಮ್ಮಿಂಗ್ ಮಾಡುವವರಿಗೆ ಈ ಸಮಸ್ಯೆ ಕಂಡು ಬರುವುದು.
ಫಂಗಲ್ ಇಯರ್ ಇನ್ಫೆಕ್ಷನ್ ಹೇಗೆ ಉಂಟಾಗುತ್ತದೆ?
ಕಿವಿಯಲ್ಲಿ ಗುಗ್ಗೆ ಬ್ಯಾಕ್ಟಿರಿಯಾಗಳಿಂದ ಕಿವಿಯನ್ನು ರಕ್ಷಣೆ ಮಾಡುತ್ತದೆ. ಗುಗ್ಗೆ ಕಮ್ಮಿಯಾದಾಗ ಬ್ಯಾಕ್ಟಿರಿಯಾಗಳು ಕಿವಿಯೊಳಗೆ ಹೋಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.
* ಅಧಿಕ ಉಷ್ಣಾಂಷ ಇರುವ ಹಾಗೂ ತುಂಬಾ ಶೀತ ಇರುವ ಕಡೆ ವಾಸಿಸುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುವುದು.
* ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅಥವಾ ಕಿವಿಯ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಕಂಡು ಬರುವುದು.
* ಗಂಭೀರ ಚರ್ಮ ಸಮಸ್ಯೆ ಇರುವವರಲ್ಲಿಯೂ ಈ ಸಮಸ್ಯೆ ಕಂಡು ಬರುವುದು.
ಯಾವಾಗ ವೈದ್ಯರನ್ನು ಕಾಣಬೇಕು?
ಕಿವಿಯಲ್ಲಿ ನೋವು, ತುರಿಕೆ ಅಥವಾ ಇತರ ಕಿರಿಕಿರಿ ಇದ್ದರೆ ವೈದ್ಯರನ್ನು ಕಾಣಬೇಕು. ವೈದ್ಯರು ಕಿವಿ, ಕಿವಿ ತಮಟೆ ಪರೀಕ್ಷಿಸಿ ಸೂಕ್ತ ಔಷಧಿ ಸೂಚಿಸಬಹುದು.
*ಕಿವಿಯನ್ನು ಸ್ವಚ್ಛ ಮಾಡಿ ಮಾತ್ರೆ ನೀಡಬಹುದು
*ಕೆಲವರಿಗೆ ಇಯರ್ ಡ್ರಾಪ್ ನೀಡಬಹುದು (ಕಿವಿ ಸಮಸ್ಯೆ ತುಂಬಾ ಇದ್ದರೆ ಮಾತ್ರ ಡ್ರಾಪ್ ನೀಡುತ್ತಾರೆ) ಹಾಗೂ ಈ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕೆಂಬ ಸಲಹೆ ನೀಡುತ್ತಾರೆ.
ತಡೆಗಟ್ಟಲು ಏನು ಮಾಡಬೇಕು?
* ಸ್ವಿಮ್ಮಿಂಗ್ ಮಾಡುವಾಗ ಅಥವಾ ಸರ್ಫಿಂಗ್ ಮಾಡುವಾಗ ಕಿವಿಗೆ ನೀರು ನುಗ್ಗದಂತೆ ಎಚ್ಚರವಹಿಸಿ
* ಸ್ನಾನ ಮಾಡಿದ ಬಳಿಕ ಕಿವಿಯಲ್ಲಿರುವ ನೀರಿನಂಶ ಮೃದುವಾದ ಟವಲ್ನಿಂದ ತೆಗೆಯಿರಿ (ಬಡ್ಸ್ ಬಳಸಬೇಡಿ, ಬಳಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚುವುದು)
* ಹತ್ತಿಯ ಉಂಡೆಗಳನ್ನು ಕಿವಿಗೆ ಇಡಬೇಡಿ (ಸ್ನಾನ ಮಾಡುವಾಗ ಮಾತ್ರ ಇಡಿ)
* ಕಿವಿಯನ್ನು ತುರಿಸುವುದು, ಉಜ್ಜುವುದು ಮಾಡಬೇಡಿ
* ಕಿವಿಗೆ ನೀರು ಹೋದರೆ acetic acid ಇಯರ್ ಡ್ರಾಪ್ ಬಳಸಿ.
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 07:32 pm
Mangalore Correspondent
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
21-10-25 08:24 pm
Mangalore Correspondent
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm