ಬ್ರೇಕಿಂಗ್ ನ್ಯೂಸ್
24-07-21 12:04 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಆರೋಗ್ಯಪೂರ್ಣ ಬದುಕಿಗೆ ಯೋಗ ಮುದ್ರೆಗಳನ್ನು ಅಭ್ಯಾಸ ಮಾಡುವುದು ಉತ್ತಮ. ಇವುಗಳು ನಮ್ಮ ಆರೋಗ್ಯವನ್ನು ಚೆನ್ನಾಗಿಡುವುದಲ್ಲದೇ, ನಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟು, ನಕಾರಾತ್ಮಕ ಶಕ್ತಿಗಳಿಂದ ದೂರವಿರುವಂತೆ ಮಾಡುತ್ತವೆ. ಅಂತಹ ಮುದ್ರೆಗಳಲ್ಲಿ ಅಪಾನ ಮುದ್ರೆಯೂ ಒಂದು. ಈ ಯೋಗ ಮುದ್ರೆ ನಮ್ಮ ದೇಹದಿಂದ ವಿಷವನ್ನು ಹೊರಹಾಕುವ ಮುಖಾಂತರ ನಮ್ಮನ್ನು ಆರೋಗ್ಯವಾಗಿಡುತ್ತದೆ. ಈ ಕುರಿತ ಮತ್ತಷ್ಟು ಮಾಹಿತಿ ನಿಮಗಾಗಿ.
ಈ ಯೋಗ ಮುದ್ರೆಯ ಮಹತ್ವ:
ಅಪಾನ ಮುದ್ರೆ ಎಂಬುದು ಪವಿತ್ರವಾದ ಕೈ ಮುದ್ರೆ ಅಥವಾ ಲಾಕ್ ಆಗಿದ್ದು, ಇದು ದೇಹವನ್ನು ಹಾಗೂ ಮನಸ್ಸನ್ನು ಶುದ್ಧಿಕರಣ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಮನಸ್ಸು ಹಾಗೂ ದೇಹದಿಂದ ನಕಾರಾತ್ಮಕ ಶಕ್ತಿ ಅಥವಾ ಅಭ್ಯಾಸಗಳನ್ನು ದೂರಮಾಡಲು ಈ ಮುದ್ರೆ ಸಹಾಯ ಮಾಡುತ್ತದೆ. ಅದಕ್ಕಾಗಿ ದಿನಕ್ಕೆ ಒಮ್ಮೆಯಾದರೂ, ನೀವು ಧ್ಯಾನ ಮತ್ತು ಯೋಗದ ಮೂಲಕ ನಿರ್ವಿಶೀಕರಣ ಚಿಕಿತ್ಸೆಯಲ್ಲಿ ಭಾಗವಹಿಸಬೇಕು.
ಹೇಗೆ ಪ್ರಯೋಜನಕಾರಿ:
ನಿರ್ವಿಶೀಕರಣ ಮುದ್ರಾ ದೇಹವನ್ನು ಕಲ್ಮಶಗಳಿಂದ ದೂರವಿರಿಸಲು ಮತ್ತು ಕೆಟ್ಟ ಶಕ್ತಿಯನ್ನು ಹೋಗಲಾಡಿಸಲು ಮನಸ್ಸನ್ನು ಪ್ರೋತ್ಸಾಹಿಸುತ್ತದೆ. ನಿಮ್ಮ ಜೀವನದಿಂದ ನೀವು ತೆಗೆದುಹಾಕಲು ಬಯಸುವ ಆಲೋಚನೆಗಳು, ಭಾವನೆಗಳು ಅಥವಾ ಘಟನೆಗಳನ್ನು ದೂರ ಮಾಡಲು ಈ ಮುದ್ರೆಯು ನಿಮಗೆ ಸಹಾಯ ಮಾಡುತ್ತದೆ, ಜೊತೆಗೆ ನಿಮ್ಮನ್ನು ಪೇಚಾಟಕ್ಕೆ ಸಿಲುಕಿಸುವ ನಿಮ್ಮ ಕೆಲವೊಂದು ಹಾನಿಕಾರಕ ನಡವಳಿಕೆಗಳನ್ನು ಸಹ ಕಡಿಮೆ ಮಾಡುತ್ತದೆ. ಈ ಮುದ್ರಾವನ್ನು ಮೂತ್ರದ ಸಮಸ್ಯೆ, ಮಲಬದ್ಧತೆ, ಉಬ್ಬುವಿಕೆ, ಮೂಲವ್ಯಾಧಿ, ವಾಂತಿ ಮತ್ತು ಚಡಪಡಿಕೆಗೆ ಚಿಕಿತ್ಸೆ ನೀಡಲು ಬಳಸಬಹುದು ಎಂದು ಸಂಶೋಧನೆಯು ಸಾಬೀತುಪಡಿಸುತ್ತದೆ. ಇದು ಮುಟ್ಟಿನ ನೋವು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಪಿತ್ತಜನಕಾಂಗದ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಲು ಈ ಮುದ್ರೆ ಸಹಾಯ ಮಾಡುತ್ತದೆ. ಈ ಅಪಾನ ಮುದ್ರಾ ಯಾವುದೇ ರೀತಿಯ ನಿರ್ವಿಶೀಕರಣ ಅಥವಾ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದನ್ನು ಟಿವಿ ನೋಡುವಾಗ, ಪುಸ್ತಕ ಓದುವಾಗ ಅಥವಾ ಹಾಸಿಗೆಯ ಮೇಲೆ ಮಲಗಿರುವಾಗ ದಿನದ ಯಾವುದೇ ಸಮಯದಲ್ಲಿ ಅಭ್ಯಾಸ ಮಾಡಬಹುದು. ನಿಮ್ಮ ದೇಹದೊಳಗಿನ ಅಶುದ್ಧವಾಗಿರುವ ಎಲ್ಲವನ್ನೂ ತೆಗೆದುಹಾಕಲು ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ.
ಅಪಾನ ಮುದ್ರೆ ಮಾಡುವ ವಿಧಾನ:
ಶಾಂತಿಯುತ ಸ್ಥಳವನ್ನು ಹುಡುಕಿ. ಸುರಕ್ಷಿತ ಮತ್ತು ಆಧಾರವಾಗಿರುವ ಸ್ಥಾನದಲ್ಲಿ, ಮಲಗು, ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ. ಉಂಗುರದ ಬೆರಳು ಮತ್ತು ಮಧ್ಯದ ಬೆರಳ ತುದಿಗಳನ್ನು ಹೆಬ್ಬೆರಳ ತುದಿಗೆ ಸಂಧಿಸಿದಾಗ ಅಪಾನ ಮುದ್ರೆಯಾಗಿ ರೂಪಗೊಳ್ಳುವುದು. ನಿಧಾನ, ಆಳವಾದ ಉಸಿರನ್ನು ತೆಗೆದುಕೊಳ್ಳುವಲ್ಲಿ ಗಮನಹರಿಸಿ.
(Kannada Copy of Boldsky Kannada)
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
07-06-25 12:08 pm
Mangalore Correspondent
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
Puttur Arun Puthila, DK Sp Arun Kumar, Notice...
06-06-25 05:33 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm