ಬ್ರೇಕಿಂಗ್ ನ್ಯೂಸ್
14-08-21 11:22 am Reena TK, Boldsky ಡಾಕ್ಟರ್ಸ್ ನೋಟ್
ಕೊರೊನಾ ವೈರಸ್ 3ನೇ ಆತಂಕ ಎದುರಾಗಿದೆ, ಇದೀಗ ಕರ್ನಾಟಕದಲ್ಲಿ ಕೊರೊನಾವೈರಸ್ನ ಮತ್ತೊಂದು ರೂಪಾಂತರ ಈಟ ವೈರಸ್ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ದುಬೈನಿಂದ ಮಂಗಳೂರಿಗೆ ಬಂದಿರುವ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಅವರಿಗೆ ಈಟ ವೈರಸ್ ತಗುಲಿರುವುದು ಆಗಸ್ಟ್ 5ಕ್ಕೆ ಖಚಿತವಾಗಿದೆ.
ಈಟ ವೈರಸ್ ಇತರ ರೂಪಾಂತರಗಳಿಗಿಂತಲೂ ಪರಿಣಾಮಕಾರಿಯೇ, ಲಸಿಕೆ ಇದರ ವಿರುದ್ಧ ಪರಿಣಾಮ ಬೀರುವುದೇ? ಈ ರೂಪಾಂತರ ಬೇಗನೆ ಹರಡುವುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಭಾರತದಲ್ಲಿ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ
ಗಮನಿಸಬೇಕಾದ ಒಂದು ವಿಷಯ ಏನೆಂದರೆ ಕೊರೊನಾ ರೂಪಾಂತರ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ, 2020 ಏಪ್ರಿಲ್ನಲ್ಲೂ ಈ ವೈರಸ್ ಕಂಡು ಬಂದಿತ್ತು. ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈರಾಲಾಜಿ ಲ್ಯಾಬ್ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು. ಜುಲೈ, 2021ರಲ್ಲಿ ಭಾರತದಲ್ಲಿ ಮತ್ತೊಂದು ಈಟ ವೈರಸ್ ಕೇಸ್ ಪತ್ತೆಯಾಯ್ತು. ಮಿಜೋರಾಂನ 75 ಜನರ ಸ್ಯಾಂಪಲ್ ತೆಗೆದು ಪರೀಕ್ಷಿಸಿದಾಗ ಅಲ್ಲಿಯೂ ಈ ವೈರಸ್ ಪತ್ತೆಯಾಗಿತ್ತು.

ಮೊದಲಿಗೆ ಈ ವೈರಸ್ ಎಲ್ಲಿ ಪತ್ತೆಯಾಯ್ತು?
ಈಟ ರೂಪಾಂತರ ಅಥವಾ B.1.525 ರೂಪಾಂತರ ವೈರಸ್ ಡಿಸೆಂಬರ್ 2020ರಲ್ಲಿ ಯುಕೆ ಮತ್ತು ನೈಜೀರಿಯಾದಲ್ಲಿ ಕಂಡು ಬಂತು

ಈಟ ರೂಪಾಂತರ ಅಪಾಯಕಾರಿಯೇ?
ಈಟ ರೂಪಾಂತರ ಇತರ ರೂಪಾಂತರಗಳಂತೆಯೇ ಪರಿಣಾಮ ಬೀರುವುದು. ಈಟ ರೂಪಾತರ ಇತರ ರೂಪಾಂತರಗಳಾದ ಆಲ್ಫಾ, ಬೇಟಾ, ಗಾಮಾದಂತೆ N501Y ರೂಪಾಂತರ ಹರಡುವುದಿಲ್ಲ. ಅಲ್ಲದೆ ಇತರ ವೈರಸ್ಗಳಿಗಿಂತ ಬೇಗನೆ ಹರಡುವುದೋ ಇಲ್ಲ. ಈ ರೂಪಾಂತರ ವೈರಸ್ನ ಲಕ್ಷಣಗಳು ಇತರ ಕೊರೊನಾ ವೈರಸ್ನಂತೆಯೇ ಇರುವುದು. ಈಟ ವೈರಸ್ ಇತರ ವೈರಸ್ಗಳಂತೆಯೇ ಸ್ವಭಾವ ಲಕ್ಷಣಗಳನ್ನು ಹೊಂದಿದೆ, ಇತರ ರೂಪಾಂತರ ವೈರಸ್ ತಗುಲಿದಾಗ ಉಂಟಾಗುವ ಆರೋಗ್ಯ ಸಮಸ್ಯೆಗಳು ಈಟ ವೈರಸ್ ತಗುಲಿದಾಗಲೂ ಉಂಟಾಗುವುದು.

ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿಯೇ?
ಲಸಿಕೆ ಆಲ್ಫಾ, ಬೇಟಾ, ಗಾಮ, ಡೆಲ್ಟಾ, ಈಟ ರೂಪಾಂತರ ವಿರುದ್ಧ ಪರಿಣಾಮಕಾರಿಯಾಗಿದೆ. ಎರಡು ಡೋಸ್ ಲಸಿಕೆ ಪಡೆದವರು ಈ ರೂಪಾಂತರ ವೈರಸ್ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ.
(Kannada Copy of Boldsky Kannada)
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 08:53 pm
Mangalore Correspondent
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
Mangalore RTO Bomb: ಮಂಗಳೂರು ಆರ್ಟಿಓ ಕಚೇರಿಗೆ ಬಾ...
15-12-25 05:40 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm