ಬ್ರೇಕಿಂಗ್ ನ್ಯೂಸ್
28-08-21 05:36 pm Reena TK, Boldsky ಡಾಕ್ಟರ್ಸ್ ನೋಟ್
ಕೋವಿಡ್ 19ನಿಂದ ಚೇತರಿಸಿದವರಲ್ಲಿ ಬಹುತೇಕ ಜನರು ಇತರ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಕೆಲವರಿಗೆ ಕೊರೊನಾ ಬಂದು ಹೋಗಿ ಹಲವು ತಿಂಗಳಾದರೂ ಎರಡು ಹೆಜ್ಜೆ ಇಡುವಷ್ಟರಲ್ಲಿ ತುಂಬಾ ಸುಸ್ತು ಆಗುತ್ತಿದೆ ಎಂದು ಹೇಳುತ್ತಿದ್ದಾರೆ.
ಕೋವಿಡ್ 19ನ ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಂಡು ಚೇತರಿಸಿಕೊಂಡವರಲ್ಲಿ ಈ ಲಕ್ಷಣಗಳು ಹೆಚ್ಚು ಕಂಡು ಬರುತ್ತಿವೆ, ಹೆಚ್ಚಿನ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಹೇಳುತ್ತಿದ್ದಾರೆ. ತಜ್ಞರು ಕೋವಿಡ್ 19ನಿಂದ ಚೇತರಿಸಿದವರು ಹಲ್ಲುಗಳ ಶುಚಿತ್ವ ಹಾಗೂ ಆರೈಕೆ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಹೇಳುತ್ತಿದ್ದಾರೆ.

ಬ್ಲ್ಯಾಕ್ ಫಂಗಸ್ ಅಪಾಯ
ಕೋವಿಡ್ 19ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚು. ಆದ್ದರಿಂದ ಬಾಯಲ್ಲಿ ಹುಣ್ಣು, ದವಡೆಯಲ್ಲಿ ಊತ, ಹುಣ್ಣು ಮುಂತಾದ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬಾರದು. ಇವುಗಳನ್ನು ತಿಂಗಳವರೆಗೆ ನಿರ್ಲಕ್ಷ್ಯ ಮಾಡಿದರೆ ಅದು ಕ್ಯಾನ್ಸರ್ ಆಗಿ ಬದಲಾಗಬಹುದು. ಅಲ್ಲದೆ ಬ್ಲ್ಯಾಕ್ ಸಮಸ್ಯೆಯೂ ಆಗಿರಬಹುದು, ಏನೇ ಸಮಸ್ಯೆ ಆಗಿರಲಿ ಆರಂಭಿಕ ಹಂತದಲ್ಲಿ ಆದರೆ ಗುಣ ಪಡಿಸಲು ಸುಲಭ. ಆದ್ದರಿಂದ ಕೋವಿಡ್ 19 ಬಳಿಕ ಬಾಯಲ್ಲಿ ಹುಣ್ಣು, ಹಲ್ಲುಗಳಲ್ಲಿ ನೋವು ಮುಂತಾದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.

ಹಲ್ಲುಗಳು ಹೋಗಬಹುದು
ಕೆಲವರಿಗೆ ಕೋವಿಡ್ 19 ಬಳಿಕ ದವಡೆಯಲ್ಲಿ ರಕ್ತಸ್ರಾವ, ಹಲ್ಲುಗಳಲ್ಲಿ ನೋವು ಕಂಡು ಬಂದಿರುವುದರಿಂದ ಹಲ್ಲುಗಳನ್ನು ತೆಗೆಯಬೇಕಾಗಿದೆ. ಆದ್ದರಿಂದ ಕೋವಿಡ್ನಿಂದ ಚೇರಿಸಿದವರು ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಬೇಕು.

ಹಲ್ಲುಗಳ ಆರೈಕೆ ಹೀಗಿರಲಿ
ಮಲಗುವ ಮುನ್ನ ಹಲ್ಲುಜ್ಜಬೇಕು, ನಂತರ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಉ. ಸೇ. 1ರಷ್ಟು ಪೋವಿಡೋನ್ ಅಯೋಡಿಯನ್ ಮೌತ್ವಾಶ್ ಅನ್ನು ದಿನದಲ್ಲಿ ಬಾರಿ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದು ಅವಶ್ಯಕವಾಗಿದೆ.

ಮಧುಮೇಹಿಗಳು ಹಲ್ಲುಗಳ ಆರೈಕೆಗೆ ತುಂಬಾನೇ ಗಮನ ನೀಡಬೇಕು
ಮಧುಮೇಹಿಗಳಿಗೆ ಬೇಗನೆ ಹಲ್ಲುಗಳ ಸಮಸ್ಯೆ ಕಾಡುವುದು. ಆದ್ದರಿಂದ ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಿ, ಜೊತೆಗೆ ನಿಯಮಿತವಾಗಿ ದಂತ ವೈದ್ಯರನ್ನು ಕಾಣಿ. ಹಲ್ಲುಗಳ ಬಣ್ಣ ಬದಲಾವಣೆ, ದವಡೆಯಲ್ಲಿ ನೋವು, ಹಲ್ಲು ನೋವು ಇದ್ದರೆ ತುಂಬಾ ದಿನ ಕಾಯಬೇಡಿ, ಕೂಡಲೇ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯಿರಿ. ಇದರಿಂದಾಗಿ ಬ್ಲ್ಯಾಕ್ ಫಂಗಸ್ ತಡೆಗಟ್ಟಬಹುದು, ಜೊತೆಗೆ ಹಲ್ಲುಗಳ ಆರೈಕೆ ಮಾಡಬಹುದು.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm