ಬ್ರೇಕಿಂಗ್ ನ್ಯೂಸ್
18-03-22 09:54 pm Source: Vijayakarnataka ಡಾಕ್ಟರ್ಸ್ ನೋಟ್
ಇತರ ದೇಹದ ಭಾಗದಂತೆ ಕಿವಿಗಳ ಆರೈಕೆ ಮಾಡುವುದು ಬಹಳ ಮುಖ್ಯ. ಈಗಂತೂ ದಿನಗಟ್ಟಲೆ ಮೊಬೈಲ್ನ ಬಳಕೆಯಿಂದಾಗಿ ಕಿವಿಗಳಿಗೆ ಬಿಡುವೇ ಇರುವುದಿಲ್ಲ. ಗಂಟೆಗಟ್ಟಲೆ ಮೊಬೈಲ್ನಲ್ಲಿ ಮಾತಾಡುತ್ತಾ ಇದ್ದರೆ, ಕಿವಿಗೆ ಸಂಬಂಧಿಸಿದ ಸಮಸ್ಯೆ ಅಥವಾ ತ್ವರಿತವಾಗಿ ಕಿವುಡುತನಕ್ಕೂ ಒಳಗಾಗಬಹುದು.
ನಿಮಗೆ ತಿಳಿದಿರಲಿ, ನಿಮ್ಮ ಮೆದುಳಿಗೆ ಧ್ವನಿ ಮತ್ತು ಮಾಹಿತಿಯನ್ನು ಕಳುಹಿಸಲು ಕಿವಿಗಳು ಸಾಕಷ್ಟು ಶ್ರಮಿಸುತ್ತದೆ. ಇಂತಹ ದೇಹದ ಭಾಗವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಕಿವಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.l
ಪ್ರತಿನಿತ್ಯ ಕಿವಿಯನ್ನು ಸ್ವಚ್ಛಗೊಳಿಸಿ
ಕಿವಿಯ ಸುತ್ತಲಿನ ಚರ್ಮವು ಸೂಕ್ಷ್ಮವಾಗಿರುವುದರಿಂದ ಕಿವಿಯಲ್ಲಿನ ಕೊಳೆಯನ್ನು ತೆಗೆಯಲು ಚೂಪಾದ ಉಪಕರಣಗಳನ್ನು ಬಳಸದಿರಿ. ಇದು ಸುಲಭವಾಗಿ ಕಿವಿಯ ಭಾಗಕ್ಕೆ ಹಾನಿಗೊಳಗಾಗಬಹುದು ಅಥವಾ ಗಾಯಗೊಳ್ಳಬಹುದು. ಮಾರುಕಟ್ಟೆಯಲ್ಲಿ ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್ ಬಡ್ಸ್ ದೊರೆಯುತ್ತವೆ.
ಈ ಹತ್ತಿಯ ಇಯರ್ ಬಡ್ಸ್ ಗಳನ್ನು ಖರೀದಿ ಮಾಡುವಾಗ ನಿಗಾ ಇರಲಿ. ಸಡಿಲವಾದ ಹತ್ತಿಯು ಕೆಲವೊಮ್ಮೆ ಕಿವಿಯೊಳಗೆ ಪ್ರವೇಶಿಸಬಹುದು. ನಂತರ ಅದನ್ನು ತೆಗೆಯಲು ಗೋಜಲಿಗೆ ಒಳಗಾಗುವುದು ಬೇಡ. ವೈದ್ಯರ ಪ್ರಕಾರ ಇಯರ್ ಬಡ್ಸ್ ಬಳಸುವುದು ಅಷ್ಟು ಉತ್ತಮವಲ್ಲ ಎಂದೇ ಹೇಳಲಾಗುತ್ತದೆ.
ಕಿವಿಯ ಹೊರಭಾಗದ ಆರೈಕೆ ಹೀಗಿರಲಿ

ಕಿವಿಯ ಒಳಭಾಗ ಮಾತ್ರವಲ್ಲ, ಹೊರಭಾಗದ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ. ಕಿವಿಗಳು ಸೂಕ್ಷ್ಮವಾದ ಪ್ರದೇಶವಾಗಿರುವುದರಿಂದ ಸುರಕ್ಷಿತವಾಗಿ ಸ್ವಚ್ಛಗೊಳಿಸಲು ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ಅದ್ದಿ ನಿಧಾನವಾಗಿ ಕಿವಿಯ ಹೊರಭಾಗ, ಹಿಂಭಾಗವನ್ನು ಶುಚಿಗೊಳಿಸಿ.
ಸ್ನಾನ ಮಾಡುವಾಗ ಕಿವಿಯ ಹಿಂಬದಿಯನ್ನು ನಿಧಾನವಾಗಿ ತೊಳೆಯಿರಿ. ನೀವು ಕಿವಿಗಳ ನೋವಿನಿಂದ ಬಾಧಿತರಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಸನ್ ಸ್ಕ್ರೀನ್ ಬಳಸಿ
![]()
ಇದೇನಪ್ಪಾ ಕಿವಿಗೆ ಸನ್ ಸ್ಕ್ರೀನಾ? ಅಂತ ಅಚ್ಚರಿಗೊಳ್ಳುತ್ತಿದ್ದೀರಾ? ಹೌದು, ಹೊರಗೆ ಹೋಗುವಾಗ ತ್ವಚೆ ಮತ್ತು ಕೈ, ಕಾಲುಗಳಿಗೆ ನೀಡುವಷ್ಟೇ ಆರೈಕೆ ಕಿವಿಗಳಿಗೂ ನೀಡಿ.
ಸನ್ ಸ್ಕ್ರೀನ್ ಬಳಕೆಯು ನಿಮ್ಮ ಕಿವಿಗಳನ್ನು ರಕ್ಷಣೆ ಮಾಡುತ್ತದೆ. ಸೂರ್ಯನ ತೀಕ್ಷ್ಣವಾದ ಕಿರಣಗಳು ಚರ್ಮದ ಮೇಲೆ ಬಿದ್ದಾಗ ಅನೇಕ ಆರೋಗ್ಯ ಮತ್ತು ಚರ್ಮ ಸಮಸ್ಯೆಗಳು ಕಾಡಬಹುದು. ಸುಡು ಸುಡು ಬಿಸಿಲಿಗೆ ಮೈ ಒಡ್ಡುವ ಮುಂಚೆ ಕಿವಿಯ ರಕ್ಷಣೆಗೆ.
ಕಿವುಡುತನ

ಅತಿ ಹೆಚ್ಚಾಗಿ ಮೊಬೈಲ್ನಲ್ಲಿ ಮಾತನಾಡುವುದು ಭವಿಷ್ಯದಲ್ಲಿ ಕಿವುಡುತನಕ್ಕೆ ಕಾರಣವಾಗಬಹುದು ಎಂದು ಶ್ರವಣತಜ್ಞರು ಸೂಚಿಸುತ್ತಾರೆ. ಹಾಗಾಗಿ ಮಿತವಾಗಿ ಮೊಬೈಲ್ ಬಳಸಿ.
ಹಾಗೆಯೇ ಶ್ರವಣ ಸಾಧನಗಳನ್ನು ಶುಷ್ಕ ಮತ್ತು ಸ್ವಚ್ಛವಾಗಿಬೇಕಾದದ್ದು ಬಹಳ ಮುಖ್ಯ. ಶ್ರವಣ ಸಾಧನಗಳಲ್ಲಿರುವ ಕೊಳೆಯು ನೀವು ಕಿವಿಗೆ ಬಳಸಿದಾಗ ನೇರವಾಗಿ ಕಿವಿಯೊಳಗೆ ಹೊಕ್ಕುತ್ತದೆ. ಹಾಗಾಗಿ ಶ್ರವಣ ಸಾಧನದ ಆರೈಕೆಯ ಮೇಲೆ ಕೂಡ ನಿಗಾವಹಿಸುವುದು ಅತ್ಯವಶ್ಯಕ.
ಒತ್ತಡದಿಂದ ಹೊರಬನ್ನಿ

ಒತ್ತಡಗಳು ದೇಹವನ್ನು ಅಸ್ವಸ್ಥಗೊಳಿಸುವ ಕಾರಣ, ಪ್ರಶಾಂತವಾದ ವಾತಾವರಣದಲ್ಲಿ ಮೊಬೈಲ್ ಇಲ್ಲದೆ ಪ್ರಕೃತಿಯ ಸುಂದರವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.
ಈ ರೀತಿ ಮಾಡುವುದರಿಂದ ನಿಮ್ಮ ನರಗಳು, ರಕ್ತದ ಹರಿವು, ದೇಹದ ಉಷ್ಣತೆ ಮತ್ತು ಹೆಚ್ಚಿನವುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಕಿವಿಗೆ ಮಾಡುವ ದೊಡ್ಡ ಉಪಕಾರವೆಂದರೆ, ಪ್ರಶಾಂತವಾದ ಸ್ಥಳದಲ್ಲಿ ನೆಮ್ಮದಿಯಾಗಿ ಕಾಲಕಳೆಯುವುದು.
How To Take Care Of Ears In Kannada
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 10:19 am
HK News Staffer
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm