ಬ್ರೇಕಿಂಗ್ ನ್ಯೂಸ್
05-09-22 09:45 pm Mangalore Correspondent ಕರಾವಳಿ
ಮಂಗಳೂರು, ಸೆ.5: ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಅಕ್ರಮ ಮತ್ತು ವಂಚನೆ ಖಂಡಿಸಿ, ಹಣ ಕಳಕೊಂಡ ಸಂತ್ರಸ್ತರು ನೂರಾರು ಸಂಖ್ಯೆಯಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಸಂತ್ರಸ್ತರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಪಂಚವಟಿ ಸೊಸೈಟಿ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ 12.30ರ ವರೆಗೂ ಪ್ರತಿಭಟನೆ ನಡೆದಿದ್ದು, ಉಡುಪಿ, ಕಿನ್ನಿಗೋಳಿ, ಮೂಡುಬಿದ್ರೆಯಿಂದ ಆಗಮಿಸಿದ ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಬಳಿಕ ಪಂಚವಟಿ ಸೊಸೈಟಿ ವಿರುದ್ಧ ಧಿಕ್ಕಾರ ಕೂಗುತ್ತಾ ಕ್ಲಾಕ್ ಟವರ್ ಬಳಿಯಿಂದ ಕಮಿಷನರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ್ದು, ಕಮಿಷನರ್ ಶಶಿಕುಮಾರ್ ಅನುಪಸ್ಥಿತಿಯಲ್ಲಿ ಡಿಸಿಪಿ ಅವರಲ್ಲಿ ಮನವಿ ಪತ್ರ ನೀಡಿದ್ದಾರೆ. ಪಂಚವಟಿ ಸೊಸೈಟಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ವಂಚನೆ ಆಗಿದೆ. ಕೋಟ್ಯಂತರ ರೂಪಾಯಿ ಹಣ ಕಳಕೊಂಡಿದ್ದಾರೆ. ಮಂಗಳೂರಿನಲ್ಲಿ ನಿರ್ದೇಶಕರಾಗಿದ್ದ ಸುಮತಿ ಹೆಗ್ಡ ಮತ್ತು ಮ್ಯಾನೇಜರ್ ಆಗಿದ್ದ ಅಕ್ಷತಾ ಅವರನ್ನು ಬಂಧಿಸಿ ಅವರ ಬಳಿಯಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ಬೆಂಗಳೂರಿನಲ್ಲಿರುವ ಸೊಸೈಟಿ ಕಚೇರಿಯನ್ನೂ ಮುಚ್ಚಲಾಗಿದ್ದು, ಎಂಡಿ ಆಗಿದ್ದ ಎನ್.ಎಚ್. ರಾಜು ಅವರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
2016ರಲ್ಲಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಆರಂಭಗೊಂಡಿದ್ದ ಪಂಚವಟಿ ಸೊಸೈಟಿಯಲ್ಲಿ ಸಾವಿರಾರು ಮಂದಿ ಆರ್ ಡಿ, ಡಿಪಾಸಿಟ್ ರೂಪದಲ್ಲಿ ಹಣ ಇಟ್ಟಿದ್ದಾರೆ. ಐದು ವರ್ಷ, 9 ವರ್ಷ ಡಿಪಾಸಿಟ್ ಇಟ್ಟಲ್ಲಿ ಡಬಲ್ ಆಗುತ್ತೆ ಎಂದು ನಂಬಿಸಿದ್ದರಿಂದ ಸಾವಿರಾರು ಮಂದಿ ಲಕ್ಷಾಂತರ ರೂ. ಹಣವನ್ನು ಡಿಪಾಸಿಟ್ ಇಟ್ಟಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ದಿಢೀರ್ ಆಗಿ ಸೊಸೈಟಿ ಕಚೇರಿಯನ್ನು ಬಂದ್ ಮಾಡಿದ್ದಾರೆ. ಇದರಿಂದ ಹಣ ಇಟ್ಟಿದ್ದವರಿಗೆ ವಂಚನೆ ಆಗಿದೆ. ಬಹಳಷ್ಟು ಮಂದಿ ಹಣ ಇಟ್ಟವರಿಗೆ ನಕಲಿ ಬಾಂಡ್ ಕೊಟ್ಟು ಮೋಸ ಮಾಡಲಾಗಿದೆ ಎಂದು ಸಂತ್ರಸ್ತರು ಅಲವತ್ತುಕೊಂಡಿದ್ದಾರೆ.
Mangalore Panchawati Multistate CoOperative Credit Society fraud hundreds join in protest near clock tower in the leadership of KRS political party.
28-03-24 04:14 pm
HK News Desk
Ips Hemant Nimbalkar, wife Anjali Nimbalkar,...
28-03-24 01:44 pm
Pralhad Joshi , Dharwad, Veerashaiva Lingayat...
27-03-24 11:07 pm
ಮಾಫಿ ಸಾಕ್ಷಿ ಮುಗಿಸಲು ಚೈತ್ರಾ ಗ್ಯಾಂಗ್ ಸಂಚು ; ಆರೆ...
27-03-24 10:36 pm
Govind Karjol ticket, bjp; ಕೇಂದ್ರ ಸಚಿವ ನಾರಾಯಣ...
27-03-24 08:56 pm
28-03-24 04:36 pm
HK News Desk
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
IAS Ananya Singh, UPSC Exam: ಮೊದಲ ಪ್ರಯತ್ನದಲ್ಲ...
27-03-24 09:43 pm
28-03-24 04:52 pm
Mangalore Correspondent
Naxalites in Koojimale, Woman Naxalite, Puttu...
28-03-24 03:25 pm
Harish Acharya, Mangalore: ಮಂಗಳೂರು ವಿವಿಯ ನಿವೃ...
27-03-24 10:53 pm
Bjp MLA Harish poonja, Shivaraj Tangadagi: ಹಿ...
27-03-24 09:11 pm
ಮತ್ತೆ ನಾಲ್ವರ ಮೇಲೆ ಗೂಂಡಾ ಕಾಯ್ದೆ ; ಮತ್ತೆ 13 ಮಂದ...
26-03-24 10:17 pm
28-03-24 02:18 pm
Udupi Correspondent
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm
CA arrested by Bengalore police, Rs 168 crore...
27-03-24 12:48 pm
Thane Kidnap, Murder; ಮನೆ ನಿರ್ಮಾಣಕ್ಕೆ 23 ಲಕ್ಷ...
26-03-24 11:12 am