ಬ್ರೇಕಿಂಗ್ ನ್ಯೂಸ್
11-10-22 09:28 pm Mangalore Correspondent ಕರಾವಳಿ
ಮಂಗಳೂರು, ಅ.11: ವಾಮಂಜೂರಿನಲ್ಲಿ ಶಾರದೋತ್ಸವ ಆಚರಣೆಯ ನಿಮಿತ್ತ ಹಾಕಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದ್ದ ಘಟನೆ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು. ವಿರೋಧಿ ಕೋಮಿನ ಕಿಡಿಗೇಡಿಗಳು ಕೃತ್ಯ ಎಸಗಿದ್ದರು ಅನ್ನುವ ರೀತಿಯೂ ಬಿಂಬಿತವಾಗಿತ್ತು. ರಾತ್ರೋರಾತ್ರಿ ಬ್ಯಾನರ್ ಹರಿದು ಹಾಕಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಬೆನ್ನಲ್ಲೇ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಮೂವರು ಕಿಡಿಗೇಡಿ ಯುವಕರನ್ನು ಬಂಧಿಸಿದ್ದಾರೆ. ಗುರುಪುರ ಆಸುಪಾಸಿನ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ ಮತ್ತು ಪ್ರವೀಣ್ ಪೂಜಾರಿ ಎಂಬ ಮೂವರನ್ನು ಬಂಧಿಸಿದ್ದು, ಅವರು ಬಳಸಿದ್ದ ಸ್ವಿಫ್ಟ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.8ರ ಮಧ್ಯರಾತ್ರಿ 1.30ರಿಂದ ಎರಡು ಗಂಟೆ ಮಧ್ಯದಲ್ಲಿ ಯುವಕರು ಕೃತ್ಯ ಎಸಗಿದ್ದರು. ರಸ್ತೆ ಬದಿ ಹಾಕಿದ್ದ ಫ್ಲೆಕ್ಸನ್ನು ಹರಿದು ಹಾಕಿದ್ದು ಸಿಸಿಟಿವಿಯಲ್ಲಿ ದಾಖಲಾಗಿದ್ದರಿಂದ ಪೊಲೀಸರು ಅದನ್ನೇ ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದಳ್ಳುರಿ ನಡೆದಿತ್ತು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಉಂಟಾದ ಉದ್ವಿಗ್ನ ಸ್ಥಿತಿ ಮತ್ತೊಬ್ಬನ ಕೊಲೆಯೊಂದಿಗೆ ಅವಸಾನ ಆಗಿತ್ತು. ಇದೀಗ ರಾತ್ರೋರಾತ್ರಿ ಶಾರದೋತ್ಸವಕ್ಕೆ ಹಾಕಿದ್ದ ಬ್ಯಾನರನ್ನು ಹರಿದು ಹಾಕಿದ್ದು ಇನ್ನೊಂದು ಕೋಮಿನವರು ಉದ್ದೇಶ ಪೂರ್ವಕ ನಡೆಸಿದ ಕೃತ್ಯ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಸಂಘಟನೆಯ ಒಳಗಿನ ವೈಮನಸ್ಸಿನಿಂದಲೇ ಈ ರೀತಿ ಕೃತ್ಯ ಎಸಗಿದ್ದರು ಅನ್ನೋದು ತಿಳಿದುಬಂದಿದೆ. ಯುವಕರು ಯಾಕಾಗಿ ಇಂತಹ ಕೃತ್ಯ ಎಸಗಿದ್ದಾರೆ, ಇದರ ಹಿಂದೆ ಕೋಮು ದ್ವೇಷ ಹರಡುವ ಉದ್ದೇಶ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ ಹರಿದ ಕಿಡಿಗೇಡಿಗಳು ; ಮತ್ತೆ ಶಾಂತಿ ಕದಡಲು ಯತ್ನ
The city police have detained three persons on Tuesday, October 11, in connection with tearing a flex hung at a public place by Vamanjoor Friends' Association for Sharadotsav.
02-05-24 04:41 pm
Bangalore Correspondent
lookout notice, Prajwal Revanna, SIT: ಪ್ರಜ್ವಲ...
02-05-24 01:30 pm
Yatnal, DK Shivakumar: ರಾಜ್ಯದಲ್ಲಿ ಎರಡು ಸಿಡಿ ಫ...
02-05-24 10:24 am
Kumaraswamy, DK shivakumar, prajwal Revanna:...
02-05-24 10:20 am
Amit Sha, Neha Murder, Parents: ನೇಹಾ ಹತ್ಯೆ ಪ್...
01-05-24 09:35 pm
01-05-24 10:25 pm
HK NEWS
Salman Khan Shootout: ನಟ ಸಲ್ಮಾನ್ ಖಾನ್ ಮನೆ ಮೇಲ...
01-05-24 03:57 pm
Arvind Kejriwals, Supreme Court: ಬದುಕು ಮತ್ತು...
30-04-24 11:02 pm
ಭಾರತ ಜಗತ್ತಿನ ಸೂಪರ್ ಪವರ್ ಆಗಲು ಹೊರಟಿದ್ದರೆ, ಪಾ...
30-04-24 06:20 pm
Prajwal Revanna Hassan sex, Amit Shah: ರಾಷ್ಟ್...
30-04-24 05:27 pm
02-05-24 02:24 pm
Mangalore Correspondent
Mangalore News, Konaje, Baby: ಐದು ತಿಂಗಳ ಹಸುಗೂ...
01-05-24 08:55 pm
Hot sun heat, Mangalore temperature; ಕರಾವಳಿಯಲ...
01-05-24 11:43 am
Mangalore Super gold and diamound showroom, T...
30-04-24 08:04 pm
Prajwal Revanna sex scam, ACP Dhanya Nayak,...
30-04-24 01:05 pm
01-05-24 10:18 pm
Mangaluru Correspondent
Mangalore crime, Court: ಮೆಲ್ಕಾರ್ ಬಳಿ ಕೋಮು ದ್ವ...
01-05-24 06:44 pm
Cyber Fraud, Online Crime: ಹೀಗೂ ಮೋಸ ಮಾಡ್ತಾರೆ,...
30-04-24 10:16 pm
Bangalore Crime, Fraud, House Rent: ಫ್ಲ್ಯಾಟ್...
29-04-24 11:50 am
Drugs case, Gujarat coast: ಬೋಟ್ ನಲ್ಲಿ ಸಿಕ್ತು...
28-04-24 09:46 pm