ಬ್ರೇಕಿಂಗ್ ನ್ಯೂಸ್
28-10-22 08:47 pm Mangalore Correspondent ಕರಾವಳಿ
ಮಂಗಳೂರು, ಅ.28 : ಮೀನುಗಾರಿಕೆ ಧಕ್ಕೆ ಬಳಿಯ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಮಿನಿ ಹಡಗು ಮಾದರಿಯ ಮೂರು (ಮಂಜಿ) ಬೃಹತ್ ಬೋಟುಗಳು ಬೆಂಕಿಗಾಹುತಿಯಾಗಿದೆ.
ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಬೋಟ್ ಇದಾಗಿದ್ದು ಬೆಂಗ್ರೆಯಲ್ಲಿ ಮಳೆಗಾಲದಲ್ಲಿ ಮಳೆ ಬೀಳದಂತೆ ತೆಂಗಿನ ಗರಿಗಳಿಂದ ಮಾಡಿದ್ದ ಕೊಟ್ಟಿಗೆಯನ್ನು ರಚಿಸಿ, ಅದರ ಅಡಿಭಾಗದಲ್ಲಿ ಹಡಗನ್ನು ನಿಲ್ಲಿಸಲಾಗಿತ್ತು. ಶುಕ್ರವಾರ ಸಂಜೆ ಹೊತ್ತಿಗೆ ಕೊಟ್ಟಿಗೆ ಪಕ್ಕದಲ್ಲಿ ಮಕ್ಕಳು ಪಟಾಕಿ ಬಿಡುತ್ತಿದ್ದರು. ಈ ವೇಳೆ, ಮಕ್ಕಳು ಸಿಡಿಸಿದ್ದ ಪಟಾಕಿಯೊಂದು ನೇರವಾಗಿ ತೆಂಗಿನ ಗರಿಗಳಿದ್ದ ಮಾಡಿಗೆ ಹೋಗಿದ್ದು ಬೆಂಕಿ ಸಿಡಿಯುವಂತೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕ್ಷಣಾರ್ಧದಲ್ಲಿ ಬೆಂಕಿ ಹರಡಿದ್ದು ಒಂದರಿಂದ ಇನ್ನೊಂದು ಮಿನಿ ಹಡಗುಗಳಿಗೆ ವ್ಯಾಪಿಸಿದೆ.


ಸರಕು ಸಾಗಿಸಲು ಬಳಸುತ್ತಿದ್ದ ಮೂರೂ ಹಡಗುಗಳು ಪೂರ್ತಿ ಹೊರಮೈ ಮರದಿಂದ ನಿರ್ಮಿತವಾಗಿದ್ದು ಒಳಭಾಗದ ರಚನೆಯೂ ಫೈಬರ್ ಮತ್ತು ಮರದಿಂದ ಮಾಡಲ್ಪಟ್ಟವು. ಹೀಗಾಗಿ ಬೆಂಕಿ ಬಹುಬೇಗನೆ ಇಡೀ ಹರಡಿದ್ದು ನೋಡ ನೋಡುತ್ತಲೇ ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಏರಿತ್ತು. ಒಂದು ಹಡಗು ಮಂಗಳೂರಿನ ವೈದ್ಯರಿಗೆ ಸೇರಿದ್ದಾಗಿದ್ದು ಇನ್ನೆರಡು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದೆಂದು ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ.


ವಿಷಯ ತಿಳಿದ ಕೂಡಲೇ ವಿವಿಧ ಕಡೆಯ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೂರೂ ಹಡಗುಗಳು ಪೂರ್ತಿಯಾಗಿ ಸುಟ್ಟು ಹೋಗಿವೆ. ಈ ಮಿನಿ ಹಡಗಿನ ಒಂದರ ಬೆಲೆ ಐದು ಕೋಟಿಯಷ್ಟಿದ್ದು ಬೆಂಕಿ ದುರಂತದಲ್ಲಿ ಮೂರೂ ಭಸ್ಮ ಆಗಿವೆ. ಈ ಮಿನಿ ಹಡಗಿನಲ್ಲಿ ಅಂದಾಜು 300 ಟನ್ ನಷ್ಟು ಸರಕು ಸಾಗಾಟ ಮಾಡಲಾಗುತ್ತಿತ್ತು.
Mangalore Three boats anchored in Kasaba Bengre under Panambur Police Station limits here accidentally caught fire on Friday, October 28. It is said that initially one boat caught fire. Later the flames spread to nearby anchored boats.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
14-05-26 10:49 am
HK News Staffer
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm