5ನೇ ದಿನ ಪೂರೈಸಿದ ಸುರತ್ಕಲ್ ಟೋಲ್ ಧರಣಿ ; ಧರಣಿ ಸ್ಥಳದಲ್ಲಿ ಕನ್ನಡ ಧ್ವಜಾರೋಹಣ, ಕವಿಗೋಷ್ಠಿ 

01-11-22 07:20 pm       Mangalore Correspondent   ಕರಾವಳಿ

ಎನ್ ಐಟಿಕೆ ಬಳಿಯ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆ ಮಂಗಳವಾರ 5ನೇ ದಿನ ಪೂರೈಸಿದ್ದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷವಾಗಿ ಧರಣಿ ನಡೆಸಲಾಗಿದೆ.‌

ಮಂಗಳೂರು, ನ.1 : ಎನ್ ಐಟಿಕೆ ಬಳಿಯ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆ ಮಂಗಳವಾರ 5ನೇ ದಿನ ಪೂರೈಸಿದ್ದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷವಾಗಿ ಧರಣಿ ನಡೆಸಲಾಗಿದೆ.‌

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವಾರು ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ಡಿವೈ ಎಫ್ ಐ, ಕಾಂಗ್ರೆಸ್, ಜೆಡಿಎಸ್, ದಸಂಸ, ಟ್ಯಾಕ್ಸಿ, ಕ್ಯಾಬ್ ಅಶೋಸಿಯೇಷನ್, ಬಸ್ ಮಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ನ.1ರ ಹಿನ್ನೆಲೆಯಲ್ಲಿ ಧರಣಿ ಸ್ಥಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಬೆಳಗ್ಗೆ ಧರಣಿ ಸ್ಥಳದಲ್ಲಿ ಕನ್ನಡ ಧ್ವಜಾರೋಹಣ ನಡೆಸಲಾಯಿ. 

ಇದರ ನಿಮಿತ್ತ ಕವಿಗೋಷ್ಠಿ, ಮೇಘನಾ ಕುಂದಾಪುರ ಇವರಿಂದ ಗಾಯನ ಕಾರ್ಯಕ್ರಮ, ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ಧ್ವಜ ಅವರೋಹಣ ನಡೆಯಿತು. ಇದರ ನಡುವೆ, ಸಮಾನ ಮನಸ್ಕ ವಕೀಲರು ಕೂಡ ಧರಣಿ ಸ್ಥಳಕ್ಕೆ ಬಂದು ಪ್ರತಿಭಟನೆಗೆ ಕೈಜೋಡಿಸಿದರು. ಮಂಗಳೂರು ಜನಪರ ವಕೀಲರ ತಂಡದ ಬಿ. ಇಬ್ರಾಹಿಂ, ಯಶವಂತ ಮರೋಳಿ, ಎಸ್.ಪಿ ಚೆಂಗಪ್ಪ, ಟಿ. ನಾರಾಯಣ ಪೂಜಾರಿ, ಶಾಲಿನಿ, ವಸಂತ ಕಾರಂದೂರು, ರಾಮಚಂದ್ರ ಬಬ್ಬುಕಟ್ಟೆ, ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ದಿನೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.‌

ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಮಾಜಿ ಶಾಸಕ ಕೆ ಅಭಯಚಂದ್ರ ಜೈನ್, ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಐದನೇ ದಿನವೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಡಿವೈಎಫ್ಐನ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಸಾಮಾಜಿಕ ಹೋರಾಟಗಾರ ಎಂ. ಜಿ. ಹೆಗಡೆ, ಹಮ್ಮಬ್ಬ ಕಾಟಿಪಳ್ಳ, ಹಸನಬ್ಬ ಮಂಗಲಪೇಟೆ, ಧರ್ಮಾನಂದ ಶೆಟ್ಟಿಗಾರ್, ಬಜ್ಪೆ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಾಲೆ ಮುಹಮ್ಮದ್, ದಯಾನಂದ ಶೆಟ್ಟಿ, ರಾಘವೇಂದ್ರ ರಾವ್ ಮತ್ತಿತರರು ಧರಣಿಯಲ್ಲಿ ನಿರತರಾಗಿದ್ದಾರೆ.

Mangalore The indefinite protest, led by Toll Gate Virodhi Horata Samithi against the Surathkal toll plaza, entered the fifth day.