ಬ್ರೇಕಿಂಗ್ ನ್ಯೂಸ್
03-11-22 01:51 pm Mangalore Correspondent ಕರಾವಳಿ
ಮಂಗಳೂರು, ನ.3: ಗೋಹತ್ಯೆ ನಿಷೇಧ ಕಾಯ್ದೆಯಡಿ ಮಂಗಳೂರಿನಲ್ಲಿ ಮತ್ತೊಂದು ಅಕ್ರಮ ಕಸಾಯಿಖಾನೆ ಕಟ್ಟಡವನ್ನು ವಶಕ್ಕೆ ಪಡೆಯಲು ಆದೇಶ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಅದ್ಯಪಾಡಿಯಲ್ಲಿ ನಡೆಯುತ್ತಿದ್ದ ಕಸಾಯಿಖಾನೆ ಜಾಗವನ್ನು ಸರಕಾರದ ವಶಕ್ಕೆ ಪಡೆಯಲು ಮಂಗಳೂರು ವಿಭಾಗಾಧಿಕಾರಿ ಮದನಮೋಹನ್ ಆದೇಶ ಮಾಡಿದ್ದಾರೆ.
2020ರಲ್ಲಿ ಜಾರಿಗೆ ಬಂದಿರುವ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮದಡಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಅ.29ರಂದು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ, ಅದ್ಯಪಾಡಿಯ ಕಟ್ಟಡವೊಂದರಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು. ಈ ಬಗ್ಗೆ ನಗರ ಠಾಣಾಧಿಕಾರಿ ಮಂಗಳೂರಿನ 3ನೇ ಸಿಜೆಎಂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಇದರಂತೆ, ಅದ್ಯಪಾಡಿಯಲ್ಲಿ ಯಾಕೂಬ್ ಎಂಬವರಿಗೆ ಸೇರಿದ್ದ ಡೋರ್ ನಂಬರ್ 1-337(ಸ.ನಂ.33-6)ರ 15 ಸೆಂಟ್ಸ್ ಜಮೀನನ್ನು ಸರಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕುವಂತೆ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದು, ವಶಕ್ಕೆ ಪಡೆದ ಸೊತ್ತು ಮತ್ತು ಜಾಗದ ಅಂದಾಜು ಮೌಲ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕಂಕನಾಡಿ ನಗರ ಠಾಣಾಧಿಕಾರಿಗೆ ಸೂಚಿಸಿದ್ದಾರೆ. ಅಲ್ಲದೆ, ಕ್ರಿಮಿನಲ್ ಮೊಕದ್ದಮೆ ಕುರಿತ ವಿವರ ಹಾಗೂ 3ನೇ ಸಿಜೆಎಂ ನ್ಯಾಯಾಲಯದ ಅಂತಿಮ ಆದೇಶದ ಪ್ರತಿಯನ್ನು ಎಸಿ ಕೋರ್ಟಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಉತ್ತರ ಕ್ಷೇತ್ರದ ಮೂರು ಕಡೆ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಮಾಡಿ, ಅಲ್ಲಿನ ಕಟ್ಟಡ ಮತ್ತು ಜಾಗವನ್ನು ಮುಟ್ಟುಗೋಲು ಹಾಕಲಾಗಿತ್ತು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಸೂಚನೆಯಂತೆ ಪೊಲೀಸರು ತುರ್ತು ಕ್ರಮ ಜರುಗಿಸಿದ್ದರು. ಇದೀಗ ಕಂಕನಾಡಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದರಿಂದ ಆಸ್ತಿ ಮುಟ್ಟುಗೋಲು ಹಾಕುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪೊಲೀಸರಿಗೆ ಸೂಚಿಸಿದ್ದಾರೆ. ಅದರಂತೆ, ಪ್ರಕರಣ ದಾಖಲಾದ ನಾಲ್ಕೇ ದಿನದಲ್ಲಿ ಆಸ್ತಿ ಮುಟ್ಟುಗೋಲು ಹಾಕಲು ಮಂಗಳೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗೋ ಹಂತಕರಿಗೆ ಕಠಿಣ ಸಂದೇಶ ರವಾನೆ
ಅಕ್ರಮ ಗೋಹತ್ಯೆ ಮಾಡುವ ಆರೋಪಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡುವುದಕ್ಕಾಗಿ ಕಸಾಯಿಖಾನೆ ನಡೆಯುವ ಜಾಗದ ಆಸ್ತಿ ಮುಟ್ಟುಗೋಲು ಕ್ರಮ ಜರುಗಿಸಲಾಗುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ಬಳಿಕವೂ ಅಕ್ರಮ ಗೋವಧೆ, ಗೋಸಾಗಾಟ ನಡೆಸುತ್ತಿರುವುದು ನಿಂತಿಲ್ಲ. ಹೀಗಾಗಿ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಕಾಯ್ದೆಯಡಿ ಗೋಹತ್ಯೆ ನಡೆಸುವವರ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶ ನೀಡಲಾಗಿದೆ. ಕಾಯ್ದೆ ಜಾರಿಗೊಂಡು ವರ್ಷದ ನಂತರ ಕಾಯ್ದೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದವರು ಹೇಳಿದ್ದಾರೆ.
Assistant commissioner (AC) and sub divisional officer Madanmohan C has ordered confiscation of 15 cents land at Adyapadi of Addoor which is in the name of Yakoob, owner of illegal cow slaughter spot in the case related to illegal slaughter of cows. Case in this regard was filed at Kankanady police station.
28-03-24 01:44 pm
Bangalore Correspondent
Pralhad Joshi , Dharwad, Veerashaiva Lingayat...
27-03-24 11:07 pm
ಮಾಫಿ ಸಾಕ್ಷಿ ಮುಗಿಸಲು ಚೈತ್ರಾ ಗ್ಯಾಂಗ್ ಸಂಚು ; ಆರೆ...
27-03-24 10:36 pm
Govind Karjol ticket, bjp; ಕೇಂದ್ರ ಸಚಿವ ನಾರಾಯಣ...
27-03-24 08:56 pm
Kolar congress fight: ಕೋಲಾರ ಕಾಂಗ್ರೆಸಿನಲ್ಲಿ ಭಿ...
27-03-24 05:03 pm
28-03-24 01:15 pm
HK News Desk
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
IAS Ananya Singh, UPSC Exam: ಮೊದಲ ಪ್ರಯತ್ನದಲ್ಲ...
27-03-24 09:43 pm
America Ship, Baltimore bridge video; ಅಮೇರಿಕಾ...
27-03-24 04:56 pm
27-03-24 10:53 pm
Mangalore Correspondent
Bjp MLA Harish poonja, Shivaraj Tangadagi: ಹಿ...
27-03-24 09:11 pm
ಮತ್ತೆ ನಾಲ್ವರ ಮೇಲೆ ಗೂಂಡಾ ಕಾಯ್ದೆ ; ಮತ್ತೆ 13 ಮಂದ...
26-03-24 10:17 pm
Tumkur car burnt, three killed, Mangalore: ಬೆ...
26-03-24 09:57 pm
Brijesh Chowta Mangalore; ದೇಶದಲ್ಲಿ ಭಯಮುಕ್ತ ವಾ...
26-03-24 08:45 pm
28-03-24 02:18 pm
Udupi Correspondent
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm
CA arrested by Bengalore police, Rs 168 crore...
27-03-24 12:48 pm
Thane Kidnap, Murder; ಮನೆ ನಿರ್ಮಾಣಕ್ಕೆ 23 ಲಕ್ಷ...
26-03-24 11:12 am