ಮತ್ತೆ ಕಿಯೋನಿಕ್ಸ್ ಅಧ್ಯಕ್ಷ ಸ್ಥಾನಕ್ಕೇರಿದ ಹರಿಕೃಷ್ಣ ಬಂಟ್ವಾಳ್ ; ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಅನುಮತಿ  

06-11-22 03:56 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಕಿಯೋನಿಕ್ಸ್ ಅಧ್ಯಕ್ಷರಾಗಿ ಮತ್ತೆ ನೇಮಕಗೊಂಡಿದ್ದಾರೆ. ಎರಡು ತಿಂಗಳ ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಹಿಂಪಡೆಯಲಾಗಿತ್ತು.

ಮಂಗಳೂರು, ನ.6: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಕಿಯೋನಿಕ್ಸ್ ಅಧ್ಯಕ್ಷರಾಗಿ ಮತ್ತೆ ನೇಮಕಗೊಂಡಿದ್ದಾರೆ. ಎರಡು ತಿಂಗಳ ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಹಿಂಪಡೆಯಲಾಗಿತ್ತು. ಅದೇ ಸಂದರ್ಭದಲ್ಲಿ ನಿಗಮ ಮಂಡಳಿಯಲ್ಲಿ ಎರಡು ವರ್ಷ ಪೂರೈಸಿದವರು ತಮ್ಮ ಸ್ಥಾನ ಕಳಕೊಂಡಿದ್ದರು. ಮತ್ತೆ ಆ ಸ್ಥಾನಗಳಿಗೆ ಯಾವುದೇ ನೇಮಕಾತಿ ಆಗಿಲ್ಲ.

ಈ ನಡುವೆ, ಹರಿಕೃಷ್ಣ ಬಂಟ್ವಾಳ್ ತನ್ನದೇ ಆದ ಪ್ರಯತ್ನಗಳಿಂದ ಮತ್ತೆ ತಾನು ಹಿಂದೆ ಇದ್ದ ಕಿಯೋನಿಕ್ಸ್ ಅಧ್ಯಕ್ಷ ಸ್ಥಾನವನ್ನೇ ಮರಳಿ ಪಡೆದಿದ್ದಾರೆ. ಶನಿವಾರ ಆದೇಶ ಪತ್ರ ಬಂದಿದ್ದು, ಸೋಮವಾರ ಪದಗ್ರಹಣ ಮಾಡುತ್ತೇನೆ ಎಂದು ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡುವ ಕನಸಿದ್ದು, ಅದಕ್ಕೆ ಈಗಾಗಲೇ ರಾಜ್ಯ ಸರಕಾರದಿಂದ ಅನುಮತಿ ಸಿಕ್ಕಿದೆ. ಮಂಗಳೂರು ನಗರದ ಹರಿಪದವಿನಲ್ಲಿ ನಾಲ್ಕು ಎಕ್ರೆ ಭೂಮಿ ಕಿಯೋನಿಕ್ಸ್ ನದ್ದೇ ಇದ್ದು, ಅಲ್ಲಿಯೇ ಐಟಿ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದೇನೆ. ಅದರ ಜೊತೆಗೆ 13 ಎಕರೆ ಹೆಚ್ಚುವರಿ ಭೂಮಿಯನ್ನು ಪಡೆದು ಐಟಿ ಪಾರ್ಕ್ ಅನುಷ್ಠಾನ ತರಬೇಕೆಂದಿದ್ದೇನೆ. ಅದಕ್ಕಾಗಿ ಮತ್ತೆ ಕಿಯೋನಿಕ್ಸ್ ಅಧ್ಯಕ್ಷ ಸ್ಥಾನವನ್ನೇ ಕೇಳಿ ಪಡೆದಿದ್ದೇನೆ. ಹುದ್ದೆ ಪಡೆದು ಏನಾದ್ರೂ ಹೆಸರು ಉಳಿಯುವ ಕೆಲಸ ಮಾಡಬೇಕಲ್ಲ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

Mangalore Senior BJP leader Harikrishna Bantwal appointed chairman of KEONICS for the second time.