ಬ್ರೇಕಿಂಗ್ ನ್ಯೂಸ್
16-11-22 02:17 pm Mangalore Correspondent ಕರಾವಳಿ
ಸುಳ್ಯ, ನ.16 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.21ರಿಂದ ಚಂಪಾ ಷಷ್ಠಿ ಉತ್ಸವ ನಡೆಯಲಿದ್ದು ಉತ್ಸವದ ಅವಧಿಯಲ್ಲಿ ಮಡೆಸ್ನಾನಕ್ಕೆ ಅವಕಾಶ ಇಲ್ಲ. ಎಡೆಸ್ನಾನಕ್ಕೆ ಅವಕಾಶ ಕೊಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಈ ಕುರಿತ ತೀರ್ಮಾನವನ್ನು ಉತ್ಸವದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಉತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇರಲಿಲ್ಲ. ಈ ಸಲ ಅವಕಾಶ ಇರುವ ಕಾರಣ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಭಕ್ತರಿಗೆ ಈ ಸಲ ಎಡೆಸ್ನಾನಕ್ಕೆ ಮೂರು ದಿನಗಳಲ್ಲಿ ಅವಕಾಶ ಸಿಗಲಿದೆ. ಚೌತಿ, ಪಂಚಮಿ ಮತ್ತು ಷಷ್ಠಿಯಂದು ಎಡೆಸ್ನಾನ ಮಾಡಬಹುದಾಗಿದೆ. ಅಂದರೆ, ನ.27, 28 ಮತ್ತು 29ರಂದು ಎಡೆಸ್ನಾನ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರು ಸ್ವಇಚ್ಛೆಯಲ್ಲಿ ಎಡೆಸ್ನಾನದಲ್ಲಿ ಭಾಗವಹಿಸಬಹುದು.
ಎಡೆಸ್ನಾನ ಎಂದರೆ ದೇಗುಲದ ಅಂಗಣದಲ್ಲಿ ಎಲೆಗಳನ್ನ ಹಾಕಿ ಅದ್ರಲ್ಲಿ ದೇವರ ನೈವೇದ್ಯ ಬಡಿಸಲಾಗುತ್ತದೆ. ಅದನ್ನ ಹಸುಗಳು ತಿಂದ ಬಳಿಕ ಹರಕೆ ಹೊತ್ತ ಭಕ್ತರು ಎಲೆಯ ಮೇಲೆ ಉರುಳುವುದು ಎಡೆಸ್ನಾನ. ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಆಗಮಶಾಸ್ತ್ರ ಪಂಡಿತರ ಉಪಸ್ಥಿತಿಯಲ್ಲಿ ಈ ಎಡೆಸ್ನಾನ ನಡೆಯಲಿದೆ.
ಬೀದಿ ಉರುಳುಸೇವೆಗೂ ನಿಯಮಗಳ ಚೌಕಟ್ಟಿನಲ್ಲಿ ಅವಕಾಶ ನೀಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿತ್ತು. ಇದರಂತೆ, ಲಕ್ಷದೀಪೋತ್ಸವ ನಡೆಯುವ ದಿನ ರಾತ್ರಿ ರಥೋತ್ಸವದ ಬಳಿಕ ಬೆಳಗ್ಗೆ 6 ಗಂಟೆ ತನಕ ಬೀದಿ ಉರುಳುಸೇವೆ ಅವಕಾಶ ಸಿಗುವ ಸಾಧ್ಯತೆ ಇದೆ. ಸಂಜೆ 5 ಗಂಟೆ ಬಳಿಕ ಬೆಳಗ್ಗೆ 6 ಗಂಟೆ ಒಳಗೆ ಉರುಳುಸೇವೆ ಅವಕಾಶ ಇರಲಿದೆ. ಬೀದಿ ಉರುಳು ಸೇವೆಗಾಗಿ ಹಿಂದಿನ ವರ್ಷಗಳಲ್ಲಿ ಪ್ರತ್ಯೇಕ ಪಥ ನಿರ್ಮಿಸಲಾಗಿತ್ತು. ಅಲ್ಲದೆ, ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು.
Champashashthi Edesnana service at Kukke Sri Subrahmanya, which was restricted for the last two years due to Corona virus, has been allowed this time. This decision was taken in a preliminary meeting of the Champashashti Jatra Mahotsav (Kukke Subramanya Temple Champa Shashti) to be held from November 21 at Kukke Subramanya Temple. There has been a discussion about giving permission to those who perform street paving services from 5 pm to 6 am after night rathotsav (Kukke Temple Rathotsav) on Lakshadweep Day.
13-09-25 08:46 pm
Bangalore Correspondent
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm