ಸ್ಕೂಟರ್ ಡಿವೈಡರ್ ಡಿಕ್ಕಿ ; ವಿದ್ಯುತ್ ಕಂಬಕ್ಕೆ ತಲೆ ಬಡಿದು ಸವಾರ ಸಾವು 

21-11-22 09:42 pm       Mangalore Correspondent   ಕರಾವಳಿ

ನಗರದ ಪದವಿನಂಗಡಿ ಬಳಿ ರಸ್ತೆ ಡಿವೈಡರ್‌ಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತ ಸವಾರನನ್ನು ಕುಂಜತ್ತಬೈಲ್ ನಿವಾಸಿ ಕಾಂತೇಶ (26) ಎಂದು ಗುರುತಿಸಲಾಗಿದೆ.

ಮಂಗಳೂರು, ನ.21: ನಗರದ ಪದವಿನಂಗಡಿ ಬಳಿ ರಸ್ತೆ ಡಿವೈಡರ್‌ಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತ ಸವಾರನನ್ನು ಕುಂಜತ್ತಬೈಲ್ ನಿವಾಸಿ ಕಾಂತೇಶ (26) ಎಂದು ಗುರುತಿಸಲಾಗಿದೆ. ಕಾಂತೇಶ ನಗರದ ಖಾಸಗಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ರವಿವಾರ ಸಂಜೆ ಸ್ಕೂಟರ್‌ನಲ್ಲಿ ಪದವಿನಂಗಡಿ ಕಡೆಯಿಂದ ತನ್ನ ಮನೆಗೆ ತೆರಳುತ್ತಿದ್ದಾಗ ಪದವಿನಂಗಡಿಯ ಕೋಸ್ಟಲ್ ವಿಲೇಜ್ ಹೋಟೆಲ್ ಬಳಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ, ದಾರಿ ದೀಪದ ಕಂಬಕ್ಕೆ ಕಾಂತೇಶ್ ತಲೆ ಬಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 

ತಕ್ಷಣ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾಂತೇಶ್ ಮೃತಪಟ್ಟಿರುವುದಾಗಿ ಕದ್ರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Bank Employee dies of accident after two wheeler hits divider near Padavinangady. The deceased has been identified as Kantesh (26) from Kunjathbail.