ಬ್ರೇಕಿಂಗ್ ನ್ಯೂಸ್
01-12-22 01:55 pm Mangalore Correspondent ಕರಾವಳಿ
ಬೆಳ್ತಂಗಡಿ, ಡಿ.1: ಮೆಹಂದಿ ಪಾರ್ಟಿಗೆಂದು ತೆರಳಿದ್ದ ಆಟೋ ಚಾಲಕ ಮನೆಗೆ ಮರಳದೆ, ಮರುದಿನ ಕುವೆಟ್ಟು ಗ್ರಾಮದ ಗುರುವಾಯನ ಕೆರೆಯ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದು ಕುಟುಂಬಸ್ಥರು ಕೊಲೆಯೆಂದು ಆರೋಪ ಮಾಡಿದ್ದಾರೆ.
ಕುವೆಟ್ಟು ಗ್ರಾಮದ ಶಿವಾಜಿನಗರ ನಿವಾಸಿ ಪ್ರವೀಣ್ ಪಿಂಟೋ(37) ಮೃತ ಆಟೋ ಚಾಲಕ. ಪ್ರವೀಣ್ ನ.29ರಂದು ರಾತ್ರಿ ಓಡಿನಾಳ ಎಂಬಲ್ಲಿ ಗೆಳೆಯನ ಮನೆಯಲ್ಲಿ ನಡೆದಿದ್ದ ಮೆಹಂದಿ ಪಾರ್ಟಿಗೆ ತೆರಳಿದ್ದ. ತಡರಾತ್ರಿ ಪತ್ನಿ ಫೋನ್ ಮಾಡಿದಾಗ, ಮನೆಗೆ ಬರುತ್ತಿದ್ದೇನೆ. ಕೆಲವೇ ಕ್ಷಣಗಳಲ್ಲಿ ಮುಟ್ಟುತ್ತೇನೆ ಎಂದಿದ್ದ. ಆದರೆ ಬೆಳಗ್ಗಿನ ವರೆಗೂ ಪ್ರವೀಣ್ ಮನೆಗೆ ಬಂದಿರಲಿಲ್ಲ. ಗುರುವಾಯನ ಕೆರೆಯ ಹಳ್ಳದ ಬಳಿ ಪ್ರವೀಣ್ ಅವರ ಐಡಿ ಕಾರ್ಡ್, ಆಟೋದ ದಾಖಲೆ ಪತ್ರಗಳು ಸಿಕ್ಕಿದ್ದರಿಂದ ಆತ ನೀರಿಗೆ ಬಿದ್ದಿರುವ ಶಂಕೆಯಲ್ಲಿ ಹುಡುಕಾಟ ನಡೆಸಿದ್ದರು. ಅಗ್ನಿಶಾಮಕ ದಳ, ಮುಳುಗು ತಜ್ಞರ ಹುಡುಕಾಟದ ಬಳಿಕ ಬುಧವಾರ ಮಧ್ಯಾಹ್ನ ಕೆರೆಯಲ್ಲಿ ಪ್ರವೀಣ್ ಪಿಂಟೋ ಶವ ಪತ್ತೆಯಾಗಿತ್ತು.
ಪ್ರವೀಣ್ ಪಿಂಟೋ ಕೊಲೆಯಾಗಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಪತ್ನಿ ರೇಶ್ಮಾ ಲೋಬೊ ಏಳು ತಿಂಗಳ ಗರ್ಭಿಣಿಯಾಗಿದ್ದು, ಆರು ವರ್ಷದ ಮಗನನ್ನು ಹೊಂದಿದ್ದಾರೆ. ಪ್ರವೀಣ್ ಶವವನ್ನು ಮಂಗಳೂರಿನಲ್ಲಿ ಪೋಸ್ಟ್ ಮಾರ್ಟಂ ನಡೆಸಲಾಗಿದೆ. ಮೆಹಂದಿ ಪಾರ್ಟಿಯಲ್ಲಿ ಪ್ರದೀಪ್ ಶೆಟ್ಟಿ ಮತ್ತು ಪ್ರವೀಣ್ ಪಿಂಟೋ ನಡುವೆ ಮಾತಿನ ಚಕಮತಿ ನಡೆದಿತ್ತು ಎಂಬ ಬಗ್ಗೆ ಕೆಲವರಿಂದ ಮಾಹಿತಿ ಲಭಿಸಿದೆ. ಅಲ್ಲದೆ, ತಮ್ಮ ಮನೆಯ ಆವರಣಕ್ಕೆ ನಸುಕಿನ ಜಾವ ಕಾರಿನಲ್ಲಿ ಯಾರೋ ಬಂದಿದ್ದರು. ಅಲ್ಲದೆ, ಪ್ರವೀಣ್ ಅವರು ಧರಿಸಿದ್ದ ಕೆಂಪು ಟೀ ಶರ್ಟ್ ಶವದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಸಾವಿನ ಬಗ್ಗೆ ಶಂಕೆಯಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಪತ್ನಿ ರೇಶ್ಮಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರವೀಣ್ ಸಾಯುವುದಕ್ಕೂ ಮೊದಲು ತನ್ನ ಕ್ಲೋಸ್ ಫ್ರೆಂಡ್ ಒಬ್ಬನಿಗೆ ಕರೆ ಮಾಡಿದ್ದಾನಂತೆ. ತಾನು ಸಾಯುತ್ತಿರುವುದಾಗಿ ಹೇಳಿದ್ದಾನೆ. ಆ ಬಗ್ಗೆ ಮಾಹಿತಿ ಲಭಿಸಿದ್ದು, ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A man, who went to attend a Mehendi programme did not return home and his mortal remains were mysteriously found in Guruvayanakere pond of Kuvettu village on November 30. The deceased is identified as Praveen Pinto (37), a resident of Shivajinagara Mane of Kuvettu village, who was an auto driver by profession.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm