ಬ್ರೇಕಿಂಗ್ ನ್ಯೂಸ್
01-12-22 01:55 pm Mangalore Correspondent ಕರಾವಳಿ
ಬೆಳ್ತಂಗಡಿ, ಡಿ.1: ಮೆಹಂದಿ ಪಾರ್ಟಿಗೆಂದು ತೆರಳಿದ್ದ ಆಟೋ ಚಾಲಕ ಮನೆಗೆ ಮರಳದೆ, ಮರುದಿನ ಕುವೆಟ್ಟು ಗ್ರಾಮದ ಗುರುವಾಯನ ಕೆರೆಯ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದು ಕುಟುಂಬಸ್ಥರು ಕೊಲೆಯೆಂದು ಆರೋಪ ಮಾಡಿದ್ದಾರೆ.
ಕುವೆಟ್ಟು ಗ್ರಾಮದ ಶಿವಾಜಿನಗರ ನಿವಾಸಿ ಪ್ರವೀಣ್ ಪಿಂಟೋ(37) ಮೃತ ಆಟೋ ಚಾಲಕ. ಪ್ರವೀಣ್ ನ.29ರಂದು ರಾತ್ರಿ ಓಡಿನಾಳ ಎಂಬಲ್ಲಿ ಗೆಳೆಯನ ಮನೆಯಲ್ಲಿ ನಡೆದಿದ್ದ ಮೆಹಂದಿ ಪಾರ್ಟಿಗೆ ತೆರಳಿದ್ದ. ತಡರಾತ್ರಿ ಪತ್ನಿ ಫೋನ್ ಮಾಡಿದಾಗ, ಮನೆಗೆ ಬರುತ್ತಿದ್ದೇನೆ. ಕೆಲವೇ ಕ್ಷಣಗಳಲ್ಲಿ ಮುಟ್ಟುತ್ತೇನೆ ಎಂದಿದ್ದ. ಆದರೆ ಬೆಳಗ್ಗಿನ ವರೆಗೂ ಪ್ರವೀಣ್ ಮನೆಗೆ ಬಂದಿರಲಿಲ್ಲ. ಗುರುವಾಯನ ಕೆರೆಯ ಹಳ್ಳದ ಬಳಿ ಪ್ರವೀಣ್ ಅವರ ಐಡಿ ಕಾರ್ಡ್, ಆಟೋದ ದಾಖಲೆ ಪತ್ರಗಳು ಸಿಕ್ಕಿದ್ದರಿಂದ ಆತ ನೀರಿಗೆ ಬಿದ್ದಿರುವ ಶಂಕೆಯಲ್ಲಿ ಹುಡುಕಾಟ ನಡೆಸಿದ್ದರು. ಅಗ್ನಿಶಾಮಕ ದಳ, ಮುಳುಗು ತಜ್ಞರ ಹುಡುಕಾಟದ ಬಳಿಕ ಬುಧವಾರ ಮಧ್ಯಾಹ್ನ ಕೆರೆಯಲ್ಲಿ ಪ್ರವೀಣ್ ಪಿಂಟೋ ಶವ ಪತ್ತೆಯಾಗಿತ್ತು.
ಪ್ರವೀಣ್ ಪಿಂಟೋ ಕೊಲೆಯಾಗಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಪತ್ನಿ ರೇಶ್ಮಾ ಲೋಬೊ ಏಳು ತಿಂಗಳ ಗರ್ಭಿಣಿಯಾಗಿದ್ದು, ಆರು ವರ್ಷದ ಮಗನನ್ನು ಹೊಂದಿದ್ದಾರೆ. ಪ್ರವೀಣ್ ಶವವನ್ನು ಮಂಗಳೂರಿನಲ್ಲಿ ಪೋಸ್ಟ್ ಮಾರ್ಟಂ ನಡೆಸಲಾಗಿದೆ. ಮೆಹಂದಿ ಪಾರ್ಟಿಯಲ್ಲಿ ಪ್ರದೀಪ್ ಶೆಟ್ಟಿ ಮತ್ತು ಪ್ರವೀಣ್ ಪಿಂಟೋ ನಡುವೆ ಮಾತಿನ ಚಕಮತಿ ನಡೆದಿತ್ತು ಎಂಬ ಬಗ್ಗೆ ಕೆಲವರಿಂದ ಮಾಹಿತಿ ಲಭಿಸಿದೆ. ಅಲ್ಲದೆ, ತಮ್ಮ ಮನೆಯ ಆವರಣಕ್ಕೆ ನಸುಕಿನ ಜಾವ ಕಾರಿನಲ್ಲಿ ಯಾರೋ ಬಂದಿದ್ದರು. ಅಲ್ಲದೆ, ಪ್ರವೀಣ್ ಅವರು ಧರಿಸಿದ್ದ ಕೆಂಪು ಟೀ ಶರ್ಟ್ ಶವದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಸಾವಿನ ಬಗ್ಗೆ ಶಂಕೆಯಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಪತ್ನಿ ರೇಶ್ಮಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರವೀಣ್ ಸಾಯುವುದಕ್ಕೂ ಮೊದಲು ತನ್ನ ಕ್ಲೋಸ್ ಫ್ರೆಂಡ್ ಒಬ್ಬನಿಗೆ ಕರೆ ಮಾಡಿದ್ದಾನಂತೆ. ತಾನು ಸಾಯುತ್ತಿರುವುದಾಗಿ ಹೇಳಿದ್ದಾನೆ. ಆ ಬಗ್ಗೆ ಮಾಹಿತಿ ಲಭಿಸಿದ್ದು, ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A man, who went to attend a Mehendi programme did not return home and his mortal remains were mysteriously found in Guruvayanakere pond of Kuvettu village on November 30. The deceased is identified as Praveen Pinto (37), a resident of Shivajinagara Mane of Kuvettu village, who was an auto driver by profession.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm