ಲವ್ ಜಿಹಾದ್ ಆರೋಪ ; ಮಂಗಳೂರಿನ ಜುವೆಲ್ಲರಿ ನುಗ್ಗಿ ಯುವಕ, ಯುವತಿಗೆ ಹಲ್ಲೆ !

06-12-22 10:58 pm       Mangalore Correspondent   ಕರಾವಳಿ

ಲವ್ ಜಿಹಾದ್ ಆರೋಪದಲ್ಲಿ ಬಜರಂಗದಳದ ಕಾರ್ಯಕರ್ತರು ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಯುವಕನಿಗೆ ಥಳಿಸಿದ ಘಟನೆ ಮಂಗಳೂರಿನ ಕಂಕನಾಡಿ ಬಳಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದಿದೆ. 

ಮಂಗಳೂರು, ಡಿ.6 : ಲವ್ ಜಿಹಾದ್ ಆರೋಪದಲ್ಲಿ ಬಜರಂಗದಳದ ಕಾರ್ಯಕರ್ತರು ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಯುವಕನಿಗೆ ಥಳಿಸಿದ ಘಟನೆ ಮಂಗಳೂರಿನ ಕಂಕನಾಡಿ ಬಳಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದಿದೆ. 

ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರು ಬೈಕ್ ನಲ್ಲಿ ಸುತ್ತಾಡಿದ್ದನ್ನ ಕಂಡಿದ್ದ ಸಂಘಟನೆಯ ಯುವಕರು ಈ ಬಗ್ಗೆ ಯುವತಿಯ ಪೋಷಕರ ಗಮನಕ್ಕೆ ತಂದಿದ್ದರು. ಅಲ್ಲದೆ, ಪೋಷಕರು ಎಚ್ಚರಿಕೆ ನೀಡಿದರೂ, ಆಕೆ ಕ್ಯಾರ್ ಮಾಡಿರಲಿಲ್ಲ. 

ಮಂಗಳವಾರ ಸಂಜೆ ಬಜರಂಗದಳದ ಕಾರ್ಯಕರ್ತರು ಕದ್ರಿ ಪೊಲೀಸರ ಜೊತೆಗೆ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದಾರೆ. ಈ ವೇಳೆ, ಯುವತಿಯ ಪೋಷಕರು ಕೂಡ ಆಗಮಿಸಿದ್ದರು. ಸಂಘಟನೆಯ ಯುವಕರು ಪೊಲೀಸರ ಎದುರಲ್ಲೇ ರಂಪಾಟ ನಡೆಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು ಯುವತಿಗೆ ಆಕೆಯ ಪೋಷಕರು ಥಳಿಸಿದ್ದಾರೆ. 

ಈ ವೇಳೆ ಕದ್ರಿ ಪೊಲೀಸರು ಸ್ಥಳದಲ್ಲಿದ್ದು ಉದ್ರಿಕ್ತರನ್ನು ಚದುರಿಸಿದ್ದಾರೆ. ಬಳಿಕ ಯುವತಿ, ಯುವಕ ಮತ್ತು ಪೋಷಕರನ್ನ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.‌ ಯುವತಿ ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ಬಟ್ಟೆ ಮಳಿಗೆ, ಜುವೆಲ್ಲರಿಯಲ್ಲಿ ಕೆಲಸಕ್ಕಿದ್ದಳು. ಜುವೆಲ್ಲರಿ ಕೆಲಸ ಸಿಕ್ಕ ಬಳಿಕ ಅಲ್ಲಿ ಮುಸ್ಲಿಂ ಯುವಕನ ಸ್ನೇಹ ಆಗಿತ್ತು ಎನ್ನಲಾಗುತ್ತಿದ್ದು ಇದಕ್ಕೆ ಬಜರಂಗದಳ ಸಂಘಟನೆಯ ಆಕ್ಷೇಪ ಎತ್ತಿದ್ದಾರೆ. ಈಗಾಗಲೇ ಲವ್ ಜಿಹಾದ್ ಕೃತ್ಯದಿಂದ ಏನೆಲ್ಲ ಬೆಳವಣಿಗೆ ಆಗುತ್ತಿರುವುದು ನಿಮಗೆ ಕಣ್ಣು ಕಾಣಲ್ಲವೇ ಎಂದು ಪೋಷಕರನ್ನು ತರಾಟೆಗೆ ಎತ್ತಿದ್ದಾರೆ.

Moral policing has raised its ugly head once again in Mangaluru. A right wing organization workers who came to know that a girl was found in the company of a boy belonging to another faith have severely assaulted the boy after barging into a jewellery shop near Kankanady. It is said that the boy and girl are colleagues in the same jewellery shop.