ಮರವೂರು ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ 

16-12-22 10:04 pm       Mangalore Correspondent   ಕರಾವಳಿ

ಯುವಕನೊಬ್ಬ ಮರವೂರು ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವಕನನ್ನು ಆಕಾಶಭವನ ನಿವಾಸಿ ಹಿತೇಶ್ (21) ಎಂದು ಗುರುತಿಸಲಾಗಿದೆ. 

ಮಂಗಳೂರು, ಡಿ.16 : ಯುವಕನೊಬ್ಬ ಮರವೂರು ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವಕನನ್ನು ಆಕಾಶಭವನ ನಿವಾಸಿ ಹಿತೇಶ್ (21) ಎಂದು ಗುರುತಿಸಲಾಗಿದೆ. 

ಹಿತೇಶ್ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ಸಮಯದಿಂದ ಮಾನಸಿಕ ಖನ್ನತೆಯಿಂದಾಗಿ ಕೆಲಸಕ್ಕೆ ಹೋಗದೆ ಮನೆಯವರು ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ ಗುರುವಾರ ಸಂಜೆ ಮರವೂರು ಸೇತುವೆ ಬಳಿಯಲ್ಲಿ ಸ್ಕೂಟರ್ ನಿಲ್ಲಿಸಿ, ದಿಢೀರ್ ನದಿಗೆ ಹಾರಿದ್ದಾನೆ. 

ಶುಕ್ರವಾರ ಬೆಳಗ್ಗೆ ಸೇತುವೆ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

21 year old boy commits suicide by Jumping from Maravoor Bridge in Mangalore. The deceased has been identified as Hitesh. It is said that he was suffering from depression.