ಕಾಟಿಪಳ್ಳದಲ್ಲಿ ಹತ್ಯೆ ; 144 ಸೆಕ್ಷನ್ ಮತ್ತೆರಡು ದಿನಕ್ಕೆ ವಿಸ್ತರಣೆ, ರಾತ್ರಿ ವೇಳೆ ಯುವಕರು ಬೈಕಿನಲ್ಲಿ ಓಡಾಡಂಗಿಲ್ಲ ! 

26-12-22 11:17 pm       Mangalore Correspondent   ಕರಾವಳಿ

ಕಾಟಿಪಳ್ಳ ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ 144 ಸೆಕ್ಷನ್ ನಿಷೇಧಾಜ್ಞೆಯನ್ನು ಡಿ.29ರ ಬೆಳಗ್ಗೆ 6 ಗಂಟೆ ವರೆಗೆ ವಿಸ್ತರಣೆ ಮಾಡಲಾಗಿದೆ.

ಮಂಗಳೂರು, ಡಿ.26 : ಕಾಟಿಪಳ್ಳ ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ 144 ಸೆಕ್ಷನ್ ನಿಷೇಧಾಜ್ಞೆಯನ್ನು ಡಿ.29ರ ಬೆಳಗ್ಗೆ 6 ಗಂಟೆ ವರೆಗೆ ವಿಸ್ತರಣೆ ಮಾಡಲಾಗಿದೆ. 

ಪಣಂಬೂರು, ಕಾವೂರು, ಬಜ್ಪೆ, ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಡಿ.27ರ ಬೆಳಗ್ಗೆ 6 ಗಂಟೆ ವರೆಗೆ ಸೆಕ್ಷನ್ ಹಾಕಲಾಗಿತ್ತು. ‌ಇದೀಗ ಆ ನಿಷೇಧಾಜ್ಞೆಯನ್ನು ಮತ್ತೆರಡು ದಿನ ವಿಸ್ತರಣೆ ಮಾಡಲಾಗಿದೆ. ಇದಲ್ಲದೆ, ಸೆಕ್ಷನ್ ವಿಧಿಸಿರುವ ಸಂದರ್ಭದಲ್ಲಿ ಸಂಜೆ ಆರು ಗಂಟೆಯಿಂದ ಬೆಳಗ್ಗಿನ ವರೆಗೆ ದ್ವಿಚಕ್ರ ವಾಹನದಲ್ಲಿ ಯುವಕರು ತಿರುಗಾಡುವಂತಿಲ್ಲ. 60 ವರ್ಷ ಮೇಲ್ಪಟ್ಟವರು, ಮಹಿಳೆಯರು, ಮಕ್ಕಳಿಗೆ ನಿಯಮ ಅನ್ವಯ ಆಗೋದಿಲ್ಲ. 

ಇದೇ ವೇಳೆ, ಬಂಧಿತ ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ‌ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ. ಪೊಲೀಸರು ಪ್ರಕರಣ ಸಂಬಂಧ ಶೈಲೇಶ್ ಪೂಜಾರಿ, ಸವಿನ್ ಕಾಂಚನ್, ಪಚ್ಚು ಎಂಬ ಮೂವರನ್ನು ಬಂಧಿಸಿದ್ದರು.

The prohibitory orders under Section 144 have been extended till December 29 by the city police in areas of Surathkal, Bajpe, Kavooru and Panamburu from 6 am on Tuesday, December 27 to 6 am on Thursday, December 29 following the murder of a young businessman Jaleel by miscreants in Surathkal on Saturday evening.