ಇನ್ನೋವಾಗೆ ಖಾಸಗಿ ಬಸ್ ಡಿಕ್ಕಿ ; ಧಾರ್ಮಿಕ ಮುಖಂಡ ನೌಷಾದ್ ಹಾಜಿ ಸೇರಿ ಇಬ್ಬರು ಸಾವು 

01-01-23 06:25 pm       Mangalore Correspondent   ಕರಾವಳಿ

ಉಪ್ಪಿನಂಗಡಿ ಬಳಿಯ ಮೊಗೇರಡ್ಕ ಎಂಬಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಮಂಗಳೂರಿನ ಇಬ್ಬರು ಮೃತಪಟ್ಟಿದ್ದಾರೆ. 

ಮಂಗಳೂರು, ಜ.1 : ಉಪ್ಪಿನಂಗಡಿ ಬಳಿಯ ಮೊಗೇರಡ್ಕ ಎಂಬಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಮಂಗಳೂರಿನ ಇಬ್ಬರು ಮೃತಪಟ್ಟಿದ್ದಾರೆ. 

ಮಂಗಳೂರು ತಾಲೂಕಿನ ಗಂಜಿಮಠ ಸುರಲ್ಪಾಡಿ ನಿವಾಸಿ, ಧಾರ್ಮಿಕ ಮುಖಂಡ ನೌಷಾದ್ ಹಾಜಿ (47) ಮತ್ತು ಕಾರು ಚಾಲಕರಾಗಿದ್ದ ಉಲಾಯಿಬೆಟ್ಟು ನಿವಾಸಿ ಫಾಜಿಲ್(21) ಸಾವನ್ನಪ್ಪಿದವರು. ಗರ್ಡಾಡಿ ಗ್ರಾಮದ ಮೋಗೆರಡ್ಕ ಎಂಬಲ್ಲಿ ಡಿಕ್ಕಿ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಸಾವು ಕಂಡಿದ್ದಾರೆ. 

ನೌಷಾದ್ ಹಾಜಿ ಮುಸ್ಲಿಂ ಸಂಘಟನೆಗಳಲ್ಲಿ ಸಕ್ರಿಯರಾಗಿ ಧಾರ್ಮಿಕ ಮುಖಂಡರಾಗಿ ಗುರುತಿಸಿದ್ದರು. ದ.ಕ. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಸಂಸ್ಥೆಯ ಅಧ್ಯಕ್ಷ, ಬೆಳ್ತಂಗಡಿ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಕೋಶಾಧಿಕಾರಿ, ಮೂಡಬಿದ್ರಿ ದಾರುನ್ನೂರ್ ಎಜುಕೇಷನ್ ಸೆಂಟರ್ ಉಪಾಧ್ಯಕ್ಷರಾಗಿದ್ದರು. ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯರೂ ಆಗಿದ್ದ ಅವರು ಗಂಜಿಮಠದಲ್ಲಿ ವಾಸಿಸುತ್ತಿದ್ದು ಇಂದು ಬೆಳಗ್ಗೆ ವೇಣೂರು ಗೊಳಿಯಂಗಡಿ ಮೂಲಕ ಸಾಗುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Beltangady accident between Car and bus collision Two persons killed. One of the deceased has been identified as a community's youth leader, social worker Al haji Naushad Suralpady. Meanwhile, an RC book in the name of Abdul Hameed was found in the car. More details are awaited.