ಬ್ರೇಕಿಂಗ್ ನ್ಯೂಸ್
05-01-23 09:56 pm Mangalore Correspondent ಕರಾವಳಿ
ಉಳ್ಳಾಲ, ಜ.5 : ಪೌರಾಣಿಕ ಹಿನ್ನೆಲೆಯುಳ್ಳ ಕಲ್ಲಾಪಿನ ಬುರ್ದುಗೋಳಿಯಲ್ಲಿರುವ ಶ್ರೀ ಗುಳಿಗ-ಕೊರಗಜ್ಜನ ಉದ್ಭವ ಶಿಲೆಯ ಆದಿಸ್ಥಳಕ್ಕೆ ಜ.6ರಂದು ಬಂಗಾರದ ಮುಟ್ಟಾಲೆ ಸಮರ್ಪಣೆ ನಡೆದು ಮರುದಿನ ಶನಿವಾರ ವರ್ಷಾವಧಿ ಕೋಲ ನಡೆಯಲಿದೆ.
ನಾಳೆ, ಜನವರಿ 6ರಂದು ಸಂಜೆ 3 ಗಂಟೆಗೆ ಸೋಮೇಶ್ವರ ಶ್ರೀ ಸೋಮನಾಥನ ದಿವ್ಯ ಸನ್ನಿಧಿಯಿಂದ ಬಂಗಾರದ ಮುಟ್ಟಾಲೆಯ ಭವ್ಯ ಶೋಭಾಯಾತ್ರೆ ವಾಹನ ಮೂಲಕ ಹೊರಟು ಕಲ್ಲಾಪು, ಕೆರೆಬೈಲು ಬಳಿಯ ನಾಗದೇವರ ಕಟ್ಟೆಯಿಂದ ಪೂರ್ಣಕುಂಭ ಕಲಶ, ವಾದ್ಯ, ಚೆಂಡೆಗಳ ಘೋಷದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬುರ್ದುಗೋಳಿಯ ಕಾಯಂಗಳ ಬಳಿ ನೂತನವಾಗಿ ನಿರ್ಮಿಸಿರುವ ಭಂಡಾರಮನೆಗೆ ಸಮರ್ಪಣೆಯಾಗಲಿದೆ ಎಂದು ಶ್ರೀ ಕ್ಷೇತ್ರದ ಭಂಡಾರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತೌಸ್ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8.30 ಕ್ಕೆ ಕಟೀಲ್ದಪ್ಪೆ ಉಳ್ಳಾಲ್ತಿ ನಾಟಕ ಪ್ರದರ್ಶನ, ರಾತ್ರಿ 7.30ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಜನವರಿ 7ರಂದು ರಾತ್ರಿ 7 ಗಂಟೆಗೆ ಕ್ಷೇತ್ರದಲ್ಲಿ ದೈವಗಳಿಗೆ ವರ್ಷಾವಧಿ ಕೋಲ ಸೇವೆ ನಡೆಯಲಿದೆ. ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳು, ಮಹಿಳಾ ವಿಭಾಗ ಮತ್ತು ಊರಿನ ಸಂಘ-ಸಂಸ್ಥೆಗಳು ಅವಿರತವಾಗಿ ಸೇವೆಗೈಯುತ್ತಿದೆ ಎಂದರು.
ಇತ್ತೀಚೆಗೆ ಪ್ರಶ್ನಾಚಿಂತನೆ ನಡೆದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಕೋಲ ಸೇವೆಗೆ ಬೇಕಾಗಿರುವ ಪರಿಕರಗಳು ಇಲ್ಲದ ಕಾರಣ ಕುತ್ತಾರಿನ ಏಳು ಜಾಗದಲ್ಲಿ ಕೋಲ ನಡೆಯುವ ಕ್ಷೇತ್ರದಿಂದ ತರಲಾಗುತ್ತಿತ್ತು. ಪ್ರಸ್ತುತ ಭಕ್ತರ ಅನುಕೂಲಕ್ಕಾಗಿ ಬುರ್ದುಗೋಳಿಯಲ್ಲಿ ಭಂಡಾರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಜೀರ್ಣೋದ್ಧಾರ ಕಾರ್ಯ ವೇಗವಾಗಿ ಪೂರ್ಣಗೊಂಡಿದೆ. ನಾಳೆ ಭಂಡಾರ ವ್ಯವಸ್ಥಾಪನ ಸಮಿತಿ ಮೂಲಕ ಕೊರಗಜ್ಜನಿಗೆ ಬಂಗಾರದ ಮುಟ್ಟಾಲೆ ಸಮರ್ಪಣೆಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀವನ್ ಕುಮಾರ್ ತೊಕ್ಕೊಟ್ಟು, ವಿಶ್ವನಾಥ ನಾಯಕ್, ದೇವದಾಸ್ ಗಟ್ಟಿ ಕಾಯಂಗಳ, ಪ್ರಶಾಂತ್ ಕಾಯಂಗಳ, ಕಮಲಾಕ್ಷ ಕುಲಾಲ್, ರವಿಶಂಕರ್ ಸೋಮೇಶ್ವರ, ಪುರುಷೋತ್ತಮ ಕಲ್ಲಾಪು ಹಾಗೂ ನವೀನ್ ಕಾಯಂಗಳ ಇದ್ದರು.
The golden muttale will be offered to the adisthalam of Sri Guliga-Koragajjana's udbhava shila at Burdugoli in Kallapina, which has a mythological background, on January 6 and the year-long kola will be held on Saturday the next day.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm