ಬ್ರೇಕಿಂಗ್ ನ್ಯೂಸ್
06-01-23 09:03 pm Mangalore Correspondent ಕರಾವಳಿ
ಮಂಗಳೂರು, ಜ.6 : ಬಿಲ್ಲವ- ಈಡಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ನೀಡಬೇಕು ಮತ್ತಿತರ ಬೇಡಿಕೆ ಮುಂದಿಟ್ಟು ಮಂಗಳೂರಿನಿಂದ ಬೆಂಗಳೂರು ವರೆಗೆ ನಡೆಯಲಿರುವ ಬೃಹತ್ ಪಾದಯಾತ್ರೆಗೆ ನಗರದ ಕುದ್ರೋಳಿಯಲ್ಲಿ ಚಾಲನೆ ನೀಡಲಾಯಿತು. ಪಾದಯಾತ್ರೆಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಕಲಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಬಿಲ್ಲವರು, ಈಡಿಗರು ಸೇರಿ ರಾಜ್ಯದ 29 ವಿವಿಧ ಉಪ ಜಾತಿಗಳನ್ನು ಒಳಗೊಳ್ಳಿಸಿ, ಸಮುದಾಯದ ಜನರ ಹಿತರಕ್ಷಣೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 40 ದಿನಗಳ ಪಾದಯಾತ್ರೆಯಲ್ಲಿ ಆರು ಜಿಲ್ಲೆಗಳನ್ನು ಒಳಗೊಂಡು 658 ಕಿಮೀ ಉದ್ದ ಕ್ರಮಿಸಲಿದ್ದು ಕೊನೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶಗೊಳ್ಳಲಿದೆ. ಬೇಡಿಕೆ ಈಡೇರಿಸುವುದಕ್ಕಾಗಿ ಕೊನೆಯಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ಸಚಿವ ಶ್ರೀನಿವಾಸ ಗೌಡ ಮಾತನಾಡಿ, ರಾಜ್ಯ ಸರಕಾರ ಬಿಲ್ಲವರ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಅಲ್ಲದೆ, ಬಿಲ್ಲವರಿಗಾಗಿ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನ ಸ್ಥಾಪನೆ ಮಾಡಬೇಕು. ಕೇಂದ್ರ ಸರಕಾರವು ಅದಾನಿ, ಅಂಬಾನಿ ಲಾಭಕ್ಕಾಗಿ ಅನೇಕ ಸರಕಾರಿ ಕಂಪನಿಗಳನ್ನು ಖಾಸಗೀಕರಣ ಮಾಡಿದೆ. ಆದರೆ ಬಿಲ್ಲವರು, ಈಡಿಗರು, ನಾಮಧಾರಿಗಳ ಕುಲಕಸುಬಾಗಿರುವ ಶೇಂದಿ ತೆಗೆಯುವುದ ಪ್ರೋತ್ಸಾಹ ನೀಡದೇ ಇರುವುದು ದುರದೃಷ್ಟಕರ ಎಂದರು.
ಅಲ್ಲದೆ, ನಾವು ಸಮುದಾಯದ ಪರವಾಗಿ ಹತ್ತು ಬೇಡಿಕೆ ಮುಂದಿಟ್ಟಿದ್ದು ಇದರ ಈಡೇರಿಕೆ ಆಗೋ ತನಕ ವಿರಮಿಸಲ್ಲ. ರಾಜ್ಯ ಸರಕಾರ ತರಾತುರಿಯಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸಿದ್ದು ರೂಪುರೇಷೆ ಬಗ್ಗೆ ಹೇಳಿಲ್ಲ. ಸಮುದಾಯದ ಹಿತಾಸಕ್ತಿ ವಿರುದ್ಧವಾಗಿ ಸರ್ಕಾರ ಈ ನಿಗಮ ಘೋಷಣೆ ಮಾಡಿದ್ದು ಯಾವುದೇ ಕಾರಣಕ್ಕು ನಾವಿದನ್ನು ಒಪ್ಪಲ್ಲ. ರಾಜಕೀಯ ಕಾರಣಕ್ಕಾಗಿ 21 ಮಂದಿ ಬಿಲ್ಲವರನ್ನು ಕರಾವಳಿಯಲ್ಲಿ ಕೊಲೆ ಮಾಡಲಾಗಿದೆ. ಇಂತಹ ಕೊಲೆ ರಾಜಕೀಯ ಇನ್ನೆಂದೂ ಮುಂದುವರಿಯಬಾರದು ಎಂದು ಹೇಳಿದರು.
ಶಿವಗಿರಿ ವಿಶುದಾನಂದ ಸ್ವಾಮೀಜಿ, ಸಂಗಮಾನಂದ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ದೊಡ್ಡಬಳ್ಳಾಪುರದ ನಿಶ್ಚಲ ನಿರಂಜನ ಸ್ವಾಮೀಜಿ, ಎಂಎಲ್ಸಿ ಹರೀಶ್ ಕುಮಾರ್, ಬಿಲ್ಲವ ಮುಖಂಡರಾದ ರಾಜಶೇಖರ ಕೋಟ್ಯಾನ್, ಎಚ್.ಎಸ್.ಸಾಯಿರಾಂ, ಸುಮನ್ ತಲ್ವಾರ್, ಪದ್ಮರಾಜ್, ಅರ್ಚನಾ ಜೈಸ್ವಾಲ್, ಎಚ್.ಆರ್ ಶ್ರೀನಾಥ್, ಮಾಜಿ ಮೇಯರ್ ಕವಿತಾ ಸನಿಲ್ ಭಾಗವಹಿಸಿದ್ದರು.
Former minister and senior Congress leader B Janardhana Poojary flagged off Pranavananda Swamiji’s padayatra from Mangaluru to Bengaluru over various demands on Friday January 6 at Kudroli temple. The padayatra is led by Pranavananda Swamiji Peetadipathi of Brahmashree Narayana Guru Shakthi Peeta, Kalburagi, demanding the state government to form a corporation for the welfare of Billawas and Ediga communities including 26 other sects and to fulfil various demands.
26-04-24 11:17 pm
Bangalore Correspondent
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:45 pm
Mangalore Correspondent
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm