ಖ್ಯಾತ ಕ್ರಿಕೆಟಿಗ ಧೋನಿ‌ ಮಂಗಳೂರಿಗೆ ; ಸೆಲ್ಫೀ ಕ್ಲಿಕ್ಕಿಸಲು ಮುತ್ತಿಕೊಂಡ ಅಭಿಮಾನಿಗಳಿಗೆ ನಿರಾಶೆ 

07-01-23 03:18 pm       Mangalore Correspondent   ಕರಾವಳಿ

ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. 

ಮಂಗಳೂರು, ಜ.7 : ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. 

ಕಾಸರಗೋಡಿನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಧೋನಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದು ಇಲ್ಲಿಂದ ನೇರವಾಗಿ ಐಷಾರಾಮಿ ಕಾರಿನಲ್ಲಿ ತೆರಳಿದರು. ಧೋನಿ ಜೊತೆಗೆ ಸೆಲ್ಫೀ ತೆಗೆದುಕೊಳ್ಳಲು ಅಭಿಮಾನಿಗಳು ನೆರೆದಿದ್ದರು. ಆದರೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಮತ್ತು ಸಿಐಎಸ್ ಎಫ್ ಭದ್ರತಾ ಪಡೆಗಳು ಯಾರನ್ನೂ ಹತ್ತಿರ ಹೋಗಲು ಬಿಡಲಿಲ್ಲ.  

ಸೌದಿ ಅರೇಬಿಯಾದಲ್ಲಿ ಆಸ್ಪತ್ರೆ ಹೊಂದಿರುವ ಡಾ.ಶಾಜಿರ್ ಗಫರ್, ಧೋನಿಯನ್ನು ಕಾಸರಗೋಡಿಗೆ ಕರೆಸಿಕೊಂಡಿದ್ದಾರೆ. ಶಾಜಿರ್ ಗಫರ್ ತನ್ನ ತಂದೆ ಪ್ರೊ.ಕೆ.ಕೆ. ಅಬ್ದುಲ್ ಗಫರ್ ಅವರ ಆಟೋ ಬಯೋಗ್ರಫಿಯನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Legendary cricketer Mahendra Singh Dhoni arrived at Mangaluru International Airport on Saturday, January 7.Dhoni will be attending the Autobiography launch function of his friend Dr. Shajir Gaffar’s father Prof. K K Abdul Gaffar in Kasaragod. Apart from Dhoni, Eminent National Personalities also will be attending the function.