ಪಾಣೆಮಂಗಳೂರು ಹಳೆ ಸೇತುವೆ ಬಳಿ ಹಿಂದು ಸಂಘಟನೆ ಮುಖಂಡನ ಶವ ಪತ್ತೆ ; ಸಾವಿನ ಬಗ್ಗೆ ಶಂಕೆ

12-01-23 01:14 pm       Mangalore Correspondent   ಕರಾವಳಿ

ಪಾಣೆಮಂಗಳೂರು ಹಳೆ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಹಿಂದು ಸಂಘಟನೆ ಮುಖಂಡನ ಶವ ಪತ್ತೆಯಾಗಿದೆ. 

ಬಂಟ್ವಾಳ, ಜ.12 : ಪಾಣೆಮಂಗಳೂರು ಹಳೆ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಹಿಂದು ಸಂಘಟನೆ ಮುಖಂಡನ ಶವ ಪತ್ತೆಯಾಗಿದೆ. 

ವಿಶ್ವ ಹಿಂದು ಪರಿಷತ್ ಮತ್ತು ಗೋರಕ್ಷಾ ಪ್ರಮುಖ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಜಿಪ ನಿವಾಸಿ ರಾಜೇಶ್ ಸುವರ್ಣ(32) ಶವ ಪತ್ತೆಯಾಗಿದ್ದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಶಂಕೆ ವ್ಯಕ್ತವಾಗಿದೆ. 

ಪಾಣೆಮಂಗಳೂರು ಹಳೆ ಸೇತುವೆ ಬಳಿ ನಿಲ್ಲಿಸಿದ್ದ ಬೈಕ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಸ್ಥಳೀಯರು ಹುಡುಕಾಟ ನಡೆಸಿದ್ದು ಈ ವೇಳೆ ಶವ ಪತ್ತೆಯಾಗಿದೆ.‌ ರಾಜೇಶ್ ಸುವರ್ಣ ಬಂಟ್ವಾಳ ತಾಲೂಕಿನ ಸಜಿಪ ನಿವಾಸಿಯಾಗಿದ್ದು ಹಿಂದು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಪೊಲೀಸರು ಆಗಮಿಸಿದ್ದು‌ ತನಿಖೆ ಆರಂಭಿಸಿದ್ದಾರೆ. ‌ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ಎಷ್ಟು ಗಂಟೆಗೆ ಅವರು ಬಂದಿದ್ದರು, ಯಾಕಾಗಿ ಬಂದಿದ್ದರು ಇತ್ಯಾದಿ ವಿವರ ಕಲೆಹಾಕಿ ಪೊಲೀಸರು ತನಿಖೆ ನಡೆಸಲಿದ್ದಾರೆ. ‌

Mangalore Dead body of Hindu activist found near Panemangalore Bridge, murder suspected. The deceased has been identified as Rajesh Suvarna. His bike was also found near the bridge.