ಸುರತ್ಕಲ್ ; ರೈಲು ಹಳಿಯ ಬದಿಯಲ್ಲಿ ಗುಡ್ಡ ಕುಸಿದು ದುರಂತ, ಒಬ್ಬ ಕಾರ್ಮಿಕ ಮೃತ್ಯು

14-01-23 06:32 pm       Mangalore Correspondent   ಕರಾವಳಿ

ಸುರತ್ಕಲ್ ಬಳಿಯ ಚೇಳಾಯರು ಎಂಬಲ್ಲಿ ರೈಲು ಹಳಿಯ ಬದಿಯಲ್ಲಿ ಗುಡ್ಡ ಕುಸಿದು ಉತ್ತರ ಕರ್ನಾಟಕ ಮೂಲದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಮಂಗಳೂರು, ಜ.14: ಸುರತ್ಕಲ್ ಬಳಿಯ ಚೇಳಾಯರು ಎಂಬಲ್ಲಿ ರೈಲು ಹಳಿಯ ಬದಿಯಲ್ಲಿ ಗುಡ್ಡ ಕುಸಿದು ಉತ್ತರ ಕರ್ನಾಟಕ ಮೂಲದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಓಬಳೇಶ್ವರ ಎಂದು ಗುರುತಿಸಲಾಗಿದೆ. ರೈಲು ಹಳಿಯ ಬದಿಯಲ್ಲೇ ಗುಡ್ಡವನ್ನು ಅಗೆಯುವ ಕೆಲಸ ಮಾಡುತ್ತಿದ್ದರು. ರೈಲು ಹಳಿಯ ಭಾಗವಾಗಿಯೇ ಗುಡ್ಡವನ್ನು ಅಗೆದು ಸಮತಟ್ಟು ಮಾಡುವ ಕೆಲಸ ಮಾಡುತ್ತಿದ್ದರು. ಕೆಳಭಾಗದ ಗುಡ್ಡ ಅಗೆಯುತ್ತಿದ್ದಾಗಲೇ ಮೇಲ್ಭಾಗದ ಹಳಿಯಲ್ಲಿ ರೈಲು ಬಂದಿದ್ದು, ಅದೇ ಸಂದರ್ಭದಲ್ಲಿ ಗುಡ್ಡ ಕುಸಿದು ಬಿದ್ದಿದೆ. ಇದರಿಂದಾಗಿ ಕಾರ್ಮಿಕರು ಮಣ್ಣಿನಡಿಗೆ ಸಿಲುಕಿದ್ದಾರೆ.

ಓಬಳೇಶ್ವರ, ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಮತ್ತು ರೇಖಾ ಮಹಿಳೆ ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದಾರೆ. ಓಬಳೇಶ್ವರ ಮತ್ತು ಗೋವಿಂದಪ್ಪ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದು ಉಸಿರುಕಟ್ಟಿದ್ದಾರೆ. ಕೂಡಲೇ ಅವರನ್ನು ಮಣ್ಣಿನಿಂದ ತೆಗೆದು ಹತ್ತಿರದ ಆಸ್ಪತ್ರೆಗೆ ಒಯ್ಯಲಾಗಿದ್ದು, ಓಬಳೇಶ್ವರ ಮೃತಪಟ್ಟಿದ್ದಾರೆ. ಗೋವಿಂದಪ್ಪ ಸ್ಥಿತಿಯೂ ಗಂಭೀರವಾಗಿದೆ. ಕಾರ್ಮಿಕ ಕಿಟ್ಟರಾಜ ಎಂಬವರು ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.

One died and another got seriously injured as a hillside collapsed near the railway bridge at Chelairu near Surathkal on Saturday January 14. The deceased is identified as Obaleshwara. As the tracks were straightened on top part of the bridge, other labourers were digging hill under it. As a train arrived suddenly, land collapsed and fell on the labourers working underneath the bridge.