ಕದ್ರಿಯಲ್ಲೂ ನಿಷೇಧ ಬ್ಯಾನರ್ ; ಕುಕ್ಕರ್ ಬಾಂಬ್ ಟಾರ್ಗೆಟ್ ಮಾಡಿದವರಿಗೆ ವ್ಯಾಪಾರ ಅವಕಾಶವಿಲ್ಲ , ಪೊಲೀಸರಿಂದ ತೆರವು ! 

20-01-23 12:10 pm       Mangalore Correspondent   ಕರಾವಳಿ

ವಾರದ ಹಿಂದಷ್ಟೇ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಹಾಕಿದ್ದ ಧರ್ಮದಂಗಲ್ ಬ್ಯಾನರ್ ಕದ್ರಿ‌ ದೇವಸ್ಥಾನದಲ್ಲಿಯೂ ಕಂಡುಬಂದಿದೆ.

ಮಂಗಳೂರು, ಜ.20: ವಾರದ ಹಿಂದಷ್ಟೇ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಹಾಕಿದ್ದ ಧರ್ಮದಂಗಲ್ ಬ್ಯಾನರ್ ಕದ್ರಿ‌ ದೇವಸ್ಥಾನದಲ್ಲಿಯೂ ಕಂಡುಬಂದಿದೆ. ಕದ್ರಿ ದೇವಸ್ಥಾನದ ಉತ್ಸವ ನಡೀತಿರುವ ಸಂದರ್ಭದಲ್ಲಿ ವಿಗ್ರಹಾರಾಧನೆ ಹರಾಮ್ ಎನ್ನುವವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದು ಪರಿಷತ್ ಹೆಸರಲ್ಲಿ ಬ್ಯಾನರ್ ಹಾಕಲಾಗಿದೆ. 

ಗುರುವಾರ ಬ್ಯಾನರ್ ಹಾಕಿದ ಕೆಲಹೊತ್ತಿನಲ್ಲಿಯೇ ಅದನ್ನು ಕದ್ರಿ ಪೊಲೀಸರು ತೆರವು ಮಾಡಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ. ‌ಬ್ಯಾನರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಉಲ್ಲೇಖಿಸಲಾಗಿದ್ದು ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಬರೆಯಲಾಗಿದೆ. 

‘ಸನಾತನ ಧರ್ಮದ ಆಚರಣೆ ಮತ್ತು ನಂಬಿಕೆಯಲ್ಲಿ ವಿಶ್ವಾಸ ಇರುವ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಇಲ್ಲಿ ವ್ಯಾಪಾರಕ್ಕೆ ಅವಕಾಶ ಇದೆ. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಮೊದಲು ಟಾರ್ಗೆಟ್ ಮಾಡಿದ್ದು, ಕದ್ರಿ ದೇವಸ್ಥಾನವಾಗಿತ್ತು. ಇಂತಹ ಮನಃಸ್ಥಿತಿ ಮತ್ತು ವಿಗ್ರಹಾರಾಧನೆ ಹರಾಂ ಎಂದು ನಂಬಿದ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿತ್ತು. ಉತ್ಸವ ಆರಂಭಗೊಂಡಿರುವುದರಿಂದ ದೇವಸ್ಥಾನದ ಆಸುಪಾಸಿನ ರಸ್ತೆಯುದ್ದಕ್ಕೂ ಸ್ಟಾಲ್‌ಗಳನ್ನು ಅಳವಡಿಸಲಾಗಿದೆ. ಕೆಲವು ಮುಸ್ಲಿಂ ವ್ಯಾಪಾರಿಗಳು ಉತ್ಸವ ಸಂದರ್ಭದಲ್ಲಿ ಸ್ಟಾಲ್ ಗಳನ್ನು ಹಾಕುತ್ತಿದ್ದರು. ಈ ಬಾರಿ ಆರಂಭದಲ್ಲಿಯೇ ಕ್ಯಾತೆ ತೆಗೆಯಲಾಗಿದೆ.

Even as the issue of ban on non-Hindu traders conducting business in temple premises is being debated, a banner announcing that only Hindu traders are allowed to conduct business during festivals at Kadri Sri Manjunatha Temple in the city, was removed. A banner in the name of Vishwa Hindu Parishad (VHP) Shiva Shakti Shakhe Kadri, was found outside the temple on Tuesday. “Only those Hindu traders, who have faith in Sanatana Dharma and traditions, have the opportunity to conduct business during the festival of Kadri Manjunatha.