ಬ್ರೇಕಿಂಗ್ ನ್ಯೂಸ್
23-01-23 06:30 pm Mangalore Correspondent ಕರಾವಳಿ
ಮಂಗಳೂರು, ಜ.23 : ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ 6ನೇ ವರ್ಷದ ಮಂಗಳೂರು ಕಂಬಳ ಕೇವಲ ನಗರದ ಜನರನ್ನು ಮಾತ್ರ ಆಕರ್ಷಿಸಿದ್ದಲ್ಲ. ಮಂಗಳೂರಿಗೆ ಪ್ರವಾಸ ಬಂದಿದ್ದ ವಿದೇಶಿಗರನ್ನೂ ಆಕರ್ಷಿಸಿದೆ.
ಅಫ್ಘಾನಿಸ್ತಾನ, ಜರ್ಮನಿ, ಡೆನ್ಮಾರ್ಕ್ ದೇಶಗಳಿಂದ ಪ್ರವಾಸ ಬಂದಿದ್ದ ವಿದೇಶಿ ಪ್ರಜೆಗಳು ಕುತೂಹಲದಿಂದ ಕಂಬಳ ವೀಕ್ಷಿಸಿದ್ದಾರೆ. ಕಳೆದ ಬಾರಿ ಮಿಜಾರು ಶ್ರೀನಿವಾಸ ಗೌಡ ವೇಗದ ಓಟಗಾರನಾಗಿ ದಾಖಲೆ ಮಾಡಿ, ಉಸೇನ್ ಬೋಲ್ಟ್ ಗೆ ಹೋಲಿಸುವ ರೀತಿ ಸುದ್ದಿಯಾಗಿದ್ದು ವಿದೇಶಿ ಮಾಧ್ಯಮಗಳ ಸೆಳೆದಿತ್ತು. ಮಂಗಳೂರಿಗೆ ಬಂದಿದ್ದ ವಿದೇಶಿಯರಿಗೆ ಇಲ್ಲಿಯೇ ಕಂಬಳ ಆಗುತ್ತಿದೆ ಎನ್ನುವುದನ್ನು ತಿಳಿದು, ಒಮ್ಮೆ ನೋಡಿ ಬಿಡೋಣ ಎಂದು ಕುಳೂರಿಗೆ ಬಂದಿದ್ದರು. ಮಣ್ಣಿನ ಕ್ರೀಡೆ ಕಂಬಳವನ್ನು ನೋಡಿ ಖುಷಿ ಪಟ್ಟಿದ್ದಾರೆ.
ಡೆನ್ಮಾರ್ಕ್ ಪ್ರಜೆ ಹೆನ್ರಿ ಬಳಿ ಈ ಬಗ್ಗೆ ಕೇಳಿದಾಗ, ನಾವು ಬಿಸ್ನೆಸ್ ಟ್ರಿಪ್ ನಲ್ಲಿ ಮಂಗಳೂರು ಬಂದಿದ್ದೆವು. ಕಂಬಳವನ್ನು ನೇರವಾಗಿ ನೋಡಬೇಕೆಂಬ ಆಸೆಯಿತ್ತು. ಕಂಬಳ ಮತ್ತು ಶ್ರೀನಿವಾಸ್ ಗೌಡನ ಸಾಧನೆ ಬಗ್ಗೆ ತಿಳಿದಿದ್ದೆವು. ಲೈವ್ ನೋಡಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ. ಹೆನ್ರಿ ಜೊತೆಗೆ ಅವರ ಸ್ನೇಹಿತರಾದ ಥಾಮಸ್, ಕಾರ್ಸ್ಟನ್ ಪೀಟ್ ಮತ್ತು ಸುಸನ್ನಾ ಇದ್ದರು.
ಮೂಲತಃ ಅಫ್ಘಾನಿಸ್ತಾನದ ಪ್ರಜೆ, ಮಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಸಯ್ಯದ್ ಅಹ್ಮದ್ ತನ್ನ ಕುಟುಂಬವನ್ನೂ ಕರ್ಕೊಂಡು ಕಂಬಳ ನೋಡಲು ಬಂದಿದ್ದರು. ಇದು ವಿಶಿಷ್ಟ ಕ್ರೀಡೆಯಾಗಿದ್ದು, ಇಲ್ಲಿನ ಸಂಸ್ಕೃತಿ ಸೂಪರ್ ಇದೆ ಎಂದರು ಸಯ್ಯದ್ ಅಹ್ಮದ್.
ಈ ವಿದೇಶಿ ಪ್ರವಾಸಿಗರಿಗೆ ಶ್ರೀನಿವಾಸ ಗೌಡರ ಸಾಧನೆಯ ಬಗ್ಗೆ ಗೊತ್ತು. ಉಸೇನ್ ಬೋಲ್ಟ್ ರೀತಿಯ ಸಾಧನೆಯೆಂದು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರಿಂದ ಕುತೂಹಲ ಇತ್ತು. ಹೀಗಾಗಿ ಆತ ಎಲ್ಲಿದ್ದಾನೆಂದು ಕುತೂಹಲ ಹೊಂದಿದ್ದರು. 2020ರಲ್ಲಿ ಮೂಡುಬಿದಿರೆಯ ಮಿಜಾರ್ ಅಶ್ವತ್ಥಪುರ ಶ್ರೀನಿವಾಸ ಗೌಡ ಕಂಬಳದ ಕರೆಯನ್ನು ವೇಗವಾಗಿ ಓಡಿದ್ದು ದಾಖಲೆಯಾಗಿತ್ತು. 100 ಮೀ ದೂರವನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದು ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾಗಿ ಸುದ್ದಿಯಾಗಿತ್ತು. ಆದರೆ ಸಹಜದ ಓಟದ ಸ್ಪರ್ಧೆಗೂ ಕಂಬಳದ ಓಟಕ್ಕೂ ವ್ಯತ್ಯಾಸ ಇದೆಯೆಂದು ಆನಂತರ ಸ್ಪಷ್ಟನೆ ನೀಡಲಾಗಿತ್ತು.
Mangalore Kambala amazes foreign spectators at Goldfinch city grounds. Coastal Karnataka’s traditional buffalo race ‘Kambala’ is gaining popularity across the globe as enthusiasts from Afghanistan, Germany and Denmark have travelled to Mangaluru to watch the race that is run in slushy paddy fields accompanied by buffaloes. On Sunday, they visited the famed Mangaluru Kambala, which is being held at Goldfinch City.
28-09-25 12:39 pm
Bangalore Correspondent
ದಾವಣಗೆರೆಗೆ ಕಾಲಿಟ್ಟ 'ಐ ಲವ್ ಮೊಹಮ್ಮದ್ʼ ಫ್ಲೆಕ್ಸ್...
27-09-25 02:40 pm
ಪಿಐಎಲ್ ಹಾಕಿದವರಿಗೆ ಸುಪ್ರೀಂ ಕೋರ್ಟ್ ಬೈದು ಕಳುಹಿಸಿ...
27-09-25 02:20 pm
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಪಂಚಭೂತಗಳಲ್ಲ...
26-09-25 07:39 pm
ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಉಳಿದುಕೊಂಡಿದ್ದ...
26-09-25 07:37 pm
27-09-25 11:16 pm
HK News Desk
HDFC Banks Dubai branch: ಎಚ್ ಡಿಎಫ್ ಸಿ ದುಬೈ ಶಾ...
27-09-25 05:53 pm
ಧರ್ಮಸ್ಥಳ ಪ್ರಕರಣ ; ಕನ್ನಡ ಸುದ್ದಿವಾಹಿನಿಗಳಿಂದ ಸುಪ...
25-09-25 10:38 pm
'ಆಪರೇಶನ್ ಸಿಂಧೂರ' ಬಗ್ಗೆ ಪಾಕಿಸ್ತಾನದಲ್ಲಿ ಸುಳ್ಳಿನ...
25-09-25 05:09 pm
ಕೇರಳದಲ್ಲಿ ಹೆಚ್ಚುತ್ತಿರುವ 'ಮೆದುಳು ತಿನ್ನುವ ರೋಗ'...
25-09-25 05:05 pm
27-09-25 07:35 pm
Mangalore Correspondent
Puttur Baby News, DNA: ಸಹಪಾಠಿಗೆ ಮಗು ಕರುಣಿಸಿದ...
27-09-25 01:33 pm
Sandhya Shenoy: ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜ...
27-09-25 01:02 pm
ನಿಗಮ ಮಂಡಳಿಗೆ ನೇಮಕ ; ಮೆಸ್ಕಾಂ ಹರೀಶ್ ಕುಮಾರ್, ಕರಾ...
26-09-25 11:02 pm
Veerendra Heggade: ನಮ್ಮ ಹೊಳಪು ಹಾಗೇ ಉಳಿದಿದೆ, ಇ...
26-09-25 08:25 pm
28-09-25 05:04 pm
Mangalore Correspondent
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm
Malpe Onwer Murder, AKMS: ಮಲ್ಪೆಯಲ್ಲಿ ಹಾಡಹಗಲೇ...
27-09-25 02:16 pm
ಐಐಎಸ್ಸಿ ವಿಜ್ಞಾನಿಗೇ ಸೈಬರ್ ದೋಖಾ ; ಮಹಿಳಾ ವಿಜ್ಞಾನ...
27-09-25 01:06 pm