ಕುಂದಾಪುರ ; ತಾಯಿ ಆಸ್ಪತ್ರೆಗೆ ಒಯ್ಯುತ್ತಿದ್ದಾಗಲೇ ನದಿಗೆ ಹಾರಿ ಯುವಕ ಆತ್ಮಹತ್ಯೆ

28-01-23 10:38 pm       Udupi Correspondent   ಕರಾವಳಿ

ಆ ಯುವಕನ ಕೆಲವು ಸಮಯಗಳಿಂದ ಖಿನ್ನನಾಗಿದ್ದ. ಹಾಗಾಗಿ ತಾಯಿ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ತಾಯಿ ಆಸ್ಪತ್ರೆಯಲ್ಲಿದ್ದಾಗಲೇ ಯುವಕ ಹೊರಗೆ ಓಡಿ ಬಂದಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಲ್ಲೂರು ಎಂಬಲ್ಲಿ ನಡೆದಿದೆ.

ಕುಂದಾಪುರ, ಜ.28: ಆ ಯುವಕನ ಕೆಲವು ಸಮಯಗಳಿಂದ ಖಿನ್ನನಾಗಿದ್ದ. ಹಾಗಾಗಿ ತಾಯಿ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ತಾಯಿ ಆಸ್ಪತ್ರೆಯಲ್ಲಿದ್ದಾಗಲೇ ಯುವಕ ಹೊರಗೆ ಓಡಿ ಬಂದಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಲ್ಲೂರು ಎಂಬಲ್ಲಿ ನಡೆದಿದೆ.

ಕನ್ಯಾನ ನಿವಾಸಿ ರವಿರಾಜ ಶೆಟ್ಟಿ (33) ಮೃತ ಯುವಕ. ಮಾನಸಿಕವಾಗಿ ಖಿನ್ನನಾಗಿದ್ದಾನೆ, ಏನೋ ಸಮಸ್ಯೆ ಇರಬೇಕೆಂದು ತಾಯಿಯೇ ಮಗನನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿಂತಿರುವಾಗಲೇ ಮಗ ತಾಯಿಗೆ ತಿಳಿಸದೆ ಹೊರಗೆ ಬಂದಿದ್ದಾನೆ.

ಆನಂತರ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಬಂದಿದ್ದು ತಲ್ಲೂರಿನಲ್ಲಿ ನದಿ ಸೇತುವೆಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ವೇಳೆಗೆ ಘಟನೆ ನಡೆದಿದ್ದು, ಸ್ಥಳೀಯರು ಗಮನಿಸಿ ನದಿಯಲ್ಲಿ ಹುಡುಕಾಟ ನಡೆಸಿದ್ದರು.

In an unfortunate incident, a man ended his life by jumping into a river here at Tallur on the national highway near Rajadi on Saturday January 28. The deceased is identified as Raviraj Shetty (33), son of the late Kupaiah Shetty, a resident of Kanyan village. It is said that Raviraj was suffering from ill health for quite some time. Hence, his mother had taken him for check-up at the hospital on Saturday.