ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ; ಆರೋಪಿಗಳು ಸೌದಿಯಲ್ಲಿ ಅಡಗಿರುವ ಶಂಕೆ  

29-01-23 05:35 pm       Mangalore Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಗಲ್ಫ್ ರಾಷ್ಟ್ರದಲ್ಲಿ ಅಡಗಿಕೊಂಡಿದ್ದಾರೆಂದು ಎನ್ಐಎ ಅಧಿಕಾರಿಗಳಿಗೆ ಸುಳಿವು ಲಭಿಸಿದೆ ಎನ್ನಲಾಗುತ್ತಿದೆ.

ಮಂಗಳೂರು, ಜ.29: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಗಲ್ಫ್ ರಾಷ್ಟ್ರದಲ್ಲಿ ಅಡಗಿಕೊಂಡಿದ್ದಾರೆಂದು ಎನ್ಐಎ ಅಧಿಕಾರಿಗಳಿಗೆ ಸುಳಿವು ಲಭಿಸಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಇತ್ತೀಚೆಗೆ ಕೊಲೆಗೆ ಸಂಚು ನಡೆಸಿರುವವರಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲ್ಪಟ್ಟು ಸುಳಿವು ಕೊಟ್ಟವರಿಗೆ ತಲಾ ಐದು ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಮಹಮ್ಮದ್ ಷರೀಫ್ ಕೋಡಾಜೆ ಮತ್ತು ಮಸೂದ್ ಕೆಎ ಎಂಬವರನ್ನು ಸೌದಿ ಅರೇಬಿಯಾದಲ್ಲಿ ಪತ್ತೆ ಮಾಡಲಾಗಿದೆ ಎನ್ನಲಾಗುತ್ತಿದೆ.

NIA conducts raids at more than 50 locations in north India to crackdown on  gangsters - India Today

ಪ್ರವೀಣ್ ಕೊಲೆ ಪ್ರಕರಣದಲ್ಲಿ ಒಟ್ಟು 20 ಮಂದಿಯ ಹೆಸರನ್ನು ಎನ್ಐಎ ಚಾರ್ಜ್ ಶೀಟ್ ನಲ್ಲಿ ಹೆಸರಿಸಿತ್ತು. ಆ ಪೈಕಿ ಆರು ಮಂದಿ ತಲೆಮರೆಸಿಕೊಂಡಿದ್ದು, ನಾಲ್ಕು ಮಂದಿಗೆ ತಲಾ 5 ಲಕ್ಷ ಹಾಗೂ ಇಬ್ಬರಿಗೆ ತಲಾ ಎರಡು ಲಕ್ಷ ರೂ. ಒಟ್ಟು 24 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಆರು ಮಂದಿಯೂ ವಿದೇಶದಲ್ಲಿ ಅಡಗಿದ್ದಾರೆ ಎನ್ನುವ ವದಂತಿಯ ನಡುವೆಯೇ ಮಸೂದ್ ಮತ್ತು ಷರೀಫ್ ಸೌದಿ ಅರೇಬಿಯಾದಲ್ಲಿ ಪತ್ತೆಯಾಗಿದ್ದಾರೆ ಎನ್ನುವ ಮಾಹಿತಿಗಳಿವೆ. ಆರೋಪಿಗಳನ್ನು ವಿದೇಶದಿಂದ ಬಂಧಿಸಿ ಕರೆತರಲು ಅದರದ್ದೇ ಆದ ಪ್ರಕ್ರಿಯೆಗಳಿದ್ದು, ಎನ್ಐಎ ಆ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ. ಮುಸ್ತಫಾ ಪೈಚಾರ್, ಮಸೂದ್ ಕೆ.ಎ, ಉಮರ್ ಫಾರೂಕ್, ಮೊಹಮ್ಮದ್ ಷರೀಫ್, ತುಫೈಲ್ ಎಂ.ಎಚ್, ಅಬುಬಕ್ಕರ್ ಸಿದ್ದಿಕಿ ಎಂಬವರು ತಲೆಮರೆಸಿಕೊಂಡವರು.

The National Investigation Agency (NIA) has reportedly received a clue about the accused, who assisted the murderers of BJP leader Praveen Nettaru,, hiding overseas. It is learnt that the process is underway to arrest two of them and bring them back to India. A reward of Rs 5 lac each was declared by NIA for any clue on Mohammed Mustafa S and Tufail M H, members of banned PFI.