ಲಾರಿ ನಿಲ್ಲಿಸಿ ಟೈರ್ ಬದಲಿಸ್ತಿದ್ದ ಕಾರ್ಮಿಕರಿಗೆ ಬಡಿದ ಕಾರು ; ಮೂಲ್ಕಿ ಬಳಿ ಹಿಟ್ ಅಂಡ್ ರನ್, ಇಬ್ಬರು ಸಾವು 

02-02-23 08:36 pm       Mangalore Correspondent   ಕರಾವಳಿ

ಸರಕು ಸಾಗಿಸುತ್ತಿದ್ದ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಿಸುತ್ತಿದ್ದಾಗ ಕಾರೊಂದು ಲಾರಿ ಕಾರ್ಮಿಕರ ಮೇಲೆ ಹರಿದ ಘಟನೆ ನಡೆದಿದ್ದು ಇಬ್ಬರು ದುರಂತ ಸಾವಿಗೀಡಾದ ಘಟನೆ ಮೂಲ್ಕಿ ಬಳಿಯ ಪಡು ಪಣಂಬೂರಿನಲ್ಲಿ ನಡೆದಿದೆ. 

ಮಂಗಳೂರು, ಫೆ.2 : ಸರಕು ಸಾಗಿಸುತ್ತಿದ್ದ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಿಸುತ್ತಿದ್ದಾಗ ಕಾರೊಂದು ಲಾರಿ ಕಾರ್ಮಿಕರ ಮೇಲೆ ಹರಿದ ಘಟನೆ ನಡೆದಿದ್ದು ಇಬ್ಬರು ದುರಂತ ಸಾವಿಗೀಡಾದ ಘಟನೆ ಮೂಲ್ಕಿ ಬಳಿಯ ಪಡು ಪಣಂಬೂರಿನಲ್ಲಿ ನಡೆದಿದೆ. 

ಮಧ್ಯಪ್ರದೇಶ ಮೂಲದ ಸರಕು ಲಾರಿ ಫೆ.1ರ ತಡರಾತ್ರಿ ಕೇರಳ ಕಡೆಯಿಂದ ಉಡುಪಿಯತ್ತ ಚಲಿಸುತ್ತಿದ್ದಾಗ ಟೈರ್ ಪಂಕ್ಚರ್ ಆಗಿತ್ತು. ಹೀಗಾಗಿ ಲಾರಿ ಚಾಲಕ ಮತ್ತು ಕ್ಲೀನರ್ ರಸ್ತೆ ಬದಿಯಲ್ಲೇ ಲಾರಿ ನಿಲ್ಲಿಸಿ ಅದನ್ನು ಬದಲಿಸುವ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಕಡೆಯಿಂದ ವೇಗವಾಗಿ ಬಂದ ಕಾರು ಲಾರಿ ಕಾರ್ಮಿಕರ ಮೇಲೆ ಹರಿದು ಹೋಗಿದ್ದು ಅದರ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. 

ಮಧ್ಯಪ್ರದೇಶ ಮೂಲದ ಬಬ್ಲು ಮತ್ತು ಅಚಲ್ ಸಿಂಗ್ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಲಾರಿಯ ಚಾಲಕನಾಗಿದ್ದ ಅನೀಶ್ ಅಪಾಯದಿಂದ ಪಾರಾಗಿದ್ದಾನೆ. ಬುಧವಾರ ತಡರಾತ್ರಿ ಘಟನೆ ನಡೆದಿದ್ದು ಮೂಲ್ಕಿ ಪೊಲೀಸರು ತ‌ನಿಖೆ ನಡೆಸುತ್ತಿದ್ದಾರೆ.

Two people died and one suffered injuries as a speeding car knocked them down at Padupanambur near Mangaluru. The police said that the accident occurred late Wednesday night. The accident took place on National Highway 66, some 30 km from Mangaluru. The deceased have been identified as Bablu and Achal Singh. Another man, named Anish, was injured and has been admitted to a hospital, police said.